ಆ್ಯಪ್ನಗರ

ಇಂದ್ರಿಯಗಳ ವ್ಯವಹಾರಕ್ಕೆ ಮೂಲ ಮನಸ್ಸು

ಇಂದ್ರಿಯಗಳ ವ್ಯವಹಾರಕ್ಕೆ ಮೂಲ ಮನಸ್ಸು. ಬಂಧನಕ್ಕೂ, ಮೋಕ್ಷ ಕ್ಕೂ ಮನಸ್ಸೇ ಕಾರಣ ಎಂದು ಹುಬ್ಬಳ್ಳಿ ಮೂರು ಸಾವಿರ ಮಠದ ಪೀಠಾಧಿಪತಿಗಳಾದ ಗುರುಸಿದ್ಧರಾಜ ಯೋಗೀಂದ್ರ ಸ್ವಾಮಿಗಳು ಅಭಿಪ್ರಾಯಪಟ್ಟರು.

Vijaya Karnataka 12 Aug 2019, 3:25 pm
ಚಿಂತಾಮಣಿ ಗ್ರಾಮಾಂತರ: ಇಂದ್ರಿಯಗಳ ವ್ಯವಹಾರಕ್ಕೆ ಮೂಲ ಮನಸ್ಸು. ಬಂಧನಕ್ಕೂ, ಮೋಕ್ಷ ಕ್ಕೂ ಮನಸ್ಸೇ ಕಾರಣ ಎಂದು ಹುಬ್ಬಳ್ಳಿ ಮೂರು ಸಾವಿರ ಮಠದ ಪೀಠಾಧಿಪತಿಗಳಾದ ಗುರುಸಿದ್ಧರಾಜ ಯೋಗೀಂದ್ರ ಸ್ವಾಮಿಗಳು ಅಭಿಪ್ರಾಯಪಟ್ಟರು.
Vijaya Karnataka Web the basic mindset for the business of the senses
ಇಂದ್ರಿಯಗಳ ವ್ಯವಹಾರಕ್ಕೆ ಮೂಲ ಮನಸ್ಸು


ಬೆಂಗಳೂರು ನಗರದ ನ್ಯೂ ಬಿಇಎಲ್‌ ರಸ್ತೆಯಲ್ಲಿರುವ ದ್ವಾರಕಾ ಸಭಾಂಗಣದಲ್ಲಿ ಕೈವಾರದ ಯೋಗಿನಾರೇಯಣ ಮಠದಿಂದ ಹಮ್ಮಿಕೊಳ್ಳಲಾಗಿದ್ದ ಧರ್ಮ ಚಿಂತನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮನಸ್ಸು ಬಹಳ ಸೂಕ್ಷ ್ಮವಾದುದು. ನಾವು ಏನನ್ನು ನಿತ್ಯ ನೋಡುತ್ತೇವೆಯೋ, ಯಾವುದರ ಬಗ್ಗೆ ಚಿಂತಿಸುತ್ತೇವೆಯೋ ಮನಸ್ಸು ಅದನ್ನೇ ಮಾಡುತ್ತಾ ಹೋಗುತ್ತದೆ. ಈ ಕಾರಣದಿಂದ ಧನಾತ್ಮಕವಾದ ಆಲೋಚನೆಗಳನ್ನು ಬೆಳೆಸಿಕೊಳ್ಳಬೇಕು. ಸತ್ಯದ ಅನ್ವೇಷಣೆ ನಿರಂತರ ಮಾಡುತ್ತಿದ್ದರೆ ಅರಿವಿನ ಜ್ಞಾನ ಉಂಟಾಗುತ್ತದೆ ಎಂದರು.

ತ್ರಿಕಾಲಜ್ಞಾನಿ ತಾತಯ್ಯ: ಕೈವಾರ ಕ್ಷೇತ್ರದ ಧರ್ಮಾಧಿಕಾರಿ ಹಾಗೂ ಗೋಕುಲ ಶಿಕ್ಷ ಣ ಸಂಸ್ಥೆಗಳ ಅಧ್ಯಕ್ಷ ಡಾ.ಎಂ.ಆರ್‌.ಜಯರಾಮ್‌ ಮಾತನಾಡಿ, ಭಾರತೀಯ ಸನಾತನ ಧರ್ಮಕ್ಕೆ ಋುಷಿಮುನಿಗಳ ಕೊಡುಗೆ ಅಪಾರ. ಕೈವಾರದ ಯೋಗಿನಾರೇಯಣ ತಾತಯ್ಯನವರು ಋುಷಿಮುನಿಗಳಾಗಿ ಕಾಲಜ್ಞಾನವನ್ನು ರಚಿಸಿ ತ್ರಿಕಾಲಜ್ಞಾನಿಗಳಾಗಿದ್ದಾರೆ. ಕಾಲಜ್ಞಾನವನ್ನು ಬರೆಯಲು ತಾಳೆಗರಿ ಹಾಗೂ ಲೇಖನಿಯನ್ನು ಪರಮಾತ್ಮನೇ ದಯಪಾಲಿಸಿದ್ದಾನೆ ಎಂದು ಕಾಲಜ್ಞಾನದಲ್ಲಿ ತಿಳಿಸಿದ್ದಾರೆ. ಕಾಲದ ಮಹಿಮೆಯ ಸತ್ಯವನ್ನು ನಾವು ಅರಿತುಕೊಳ್ಳಬೇಕು ಎಂದರು.

ಅಹಿಂಸಾ ತತ್ತ್ವವನ್ನು ಪ್ರಪಂಚಕ್ಕೆ ನೀಡಿದ ಮೊದಲ ಆಚಾರ್ಯರೆಂದರೆ ಗೌತಮ ಬುದ್ಧ. ಅಹಿಂಸೆಯ ಪಾಲನೆ ಮತ್ತು ಸಮಾನತೆ ಈ ಎರಡು ಪ್ರಮುಖ ಅಂಶಗಳನ್ನು ಗೌತಮ ಬುದ್ಧ ಪ್ರಪಂಚಕ್ಕೆ ನೀಡಿದ್ದಾನೆ. ಮನಸ್ಸು ಮತ್ತು ನೋಟ ಒಂದೆಡೆ ಏಕಾಗ್ರತೆಯಿಂದ ಸ್ಥಿರವಾಗಿ ನಿಲ್ಲಿಸಿದರೆ ಮಾತ್ರ ಜ್ಞಾನದ ಬೆಳಕನ್ನು ಕಾಣಲು ಸಾಧ್ಯವಿದೆ ಎಂದರು.

ಬೆಂಗಳೂರಿನ ವಿದ್ವಾನ್‌ ವಿನಯ ಶರ್ಮಾ ತಂಡವರಿಂದ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಿತು. ಕೈವಾರ ಸಂಕೀರ್ತನಾ ಯೋಜನೆ ಸಂಚಾಲಕರಾದ ವಾನರಾಶಿ ಬಾಲಕೃಷ್ಣ ಭಾಗವತರ್‌, ತಳಗವಾರ ಆನಂದ್‌, ಗೋಕುಲ ಪ್ರತಿಷ್ಠಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಆರ್‌. ಶ್ರೀನಿವಾಸಮೂರ್ತಿ, ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಶ್ರೀವರ, ಹಿರಿಯ ಲೇಖಕ ಹಾಗೂ ಮಲ್ಲಾರಪತ್ರಿಕೆ ಸಂಪಾದಕ ಡಾ.ಬಾಬು ಕೃಷ್ಣಮೂರ್ತಿ, ನಿವೃತ್ತ ಮುಖ್ಯಕಾರ್ಯದರ್ಶಿ ಬಿ.ಆರ್‌.ಪ್ರಭಾಕರ್‌, ಹರಿಕಥಾ ವಿದ್ವಾನ್‌ ಎನ್‌.ಆರ್‌.ಜ್ಞಾನಮೂರ್ತಿ, ವೈದ್ಯಕೀಯ ಕಾಲೇಜಿನ ಪ್ರಿನ್ಸಿಪಾಲ್‌ಮೇಧಾರಾವ್‌ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ