ಶಿಡ್ಲಘಟ್ಟ: ಶಾಲಾ ಕಾಲೇಜು ವಿದ್ಯಾರ್ಥಿಗಳು ಹಾಗೂ ಯುವಜನರ ಮೇಲೆ ಈ ಸಮಾಜ, ದೇಶ ಬಹಳಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದೆ. ಅದನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಯುವಜನರ ಬದುಕು ಸಾಗಬೇಕೆಂದು ಸಿಟಿಜನ್ ಶಾಲೆಯ ಅಧ್ಯಕ್ಷ ರಾಮಚಂದ್ರರೆಡ್ಡಿ ಅಭಿಪ್ರಾಯಪಟ್ಟರು.
ನಗರದ ಹೊರವಲಯದ ಟೋಲ್ಗೇಟ್ ಬಳಿ ಇರುವ ಸಿಟಿಜನ್ ಶಾಲೆಯ ಆವರಣದಲ್ಲಿ ನಡೆದ ಶಾಲೆಯ ಮುಸ್ಸಂಜೆ ವಾರ್ಷಿಕೋತ್ಸವ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ಈ ದೇಶದಲ್ಲಿ ಧನಾತ್ಮಕವಾದ ಬದಲಾವಣೆಗಳು ಏನಾದರೂ ಆಗುವುದಾದರೆ ಅದು ಯುವಜನರಿಂದ ಮಾತ್ರ. ದೇಶದಲ್ಲಿ ಆರ್ಥಿಕ, ಸಾಮಾಜಿಕ, ರಾಜಕೀಯ ಪ್ರಗತಿ ಆಗುವುದಾದರೆ ಅದು ವಿದ್ಯಾರ್ಥಿ ಯುವಜನರು ಮನಸು ಮಾಡಿದರಷ್ಟೆ ಸಾಧ್ಯ. ಹಾಗಾಗಿ ಈ ಸಮಾಜ ಇಟ್ಟುಕೊಂಡ ಕನಸುಗಳನ್ನು ನನಸು ಮಾಡುವ ನಿಟ್ಟಿನಲ್ಲಿ ನಿಮ್ಮ ಪ್ರಯಾಣ ಸಾಗಬೇಕು ಎಂದರು.
ಇದಕ್ಕಾಗಿ ಪೊಷಕರು ಕೂಡ ಕೆಲವೊಂದು ಬದಲಾವಣೆಗಳನ್ನು ತಂದುಕೊಳ್ಳಬೇಕಿದೆ. ಮಕ್ಕಳ ಮೇಲೆ ನಿಮ್ಮ ಆಸೆ ಆಕಾಂಕ್ಷೆಗಳನ್ನು ಈಡೇರಿಸುವ ಒತ್ತಡ ಹಾಕಬೇಡಿ, ಬದಲಿಗೆ ಅವರಲ್ಲಿನ ಪ್ರತಿಭೆ ಆಸಕ್ತಿಯನ್ನು ಗಮನಿಸಿ ಅವಕಾಶಗಳನ್ನು ಮಾಡಿಕೊಡಿ. ಅದು ಬಿಟ್ಟು ಮಕ್ಕಳ ಮೇಲೆ ಒತ್ತಡ ಹಾಕುವುದರಿಂದ ಅವರು ಮಾನಸಿಕವಾಗಿ ಖಿನ್ನತೆಗೆ ಒಳಗಾಗಿ ದಾರಿ ತಪ್ಪುವ ಅಪಾಯವೇ ಹೆಚ್ಚು ಎಂದು ವಿವರಿಸಿದರು.
ಮಕ್ಕಳಲ್ಲಿ ಗ್ರಹಿಕೆಯ ಶಕ್ತಿ ಹೆಚ್ಚಿರುತ್ತದೆ. ನೋಡಿದ್ದನ್ನು, ಕೇಳಿದ್ದನ್ನು ಕಲಿಯುವ, ಮಾಡುÊ,Ü ಅನುಭವಿಸುವ ತವಕ ಹೆಚ್ಚಿರುತ್ತದೆ. ಆದ್ದರಿಂದ ಮನೆ, ಶಾಲೆ, ಅಕ್ಕಪಕ್ಕದಲ್ಲಿ ಉತ್ತಮ ವಾತಾವರಣ ಇದ್ದಾಗ ಅವರು ಕೂಡ ಉತ್ತಮ ನಾಗರಿಕರಾಗಿ ಬೆಳೆಯಬಲ್ಲರು. ಅಂತಹ ವಾತಾವರಣ ನಿರ್ಮಾಣ ನಮ್ಮ ನಿಮ್ಮೆಲ್ಲರ ಹೊಣೆ ಆಗಿದ್ದು ಆ ನಿಟ್ಟಿನಲ್ಲಿ ಎಲ್ಲರ ಪ್ರಯತ್ನ ಸಾಗಬೇಕು ಎಂದು ಆಶಿಸಿದರು.
ವಿದ್ಯಾರ್ಥಿಗಳು ಕನ್ನಡ, ತೆಲುಗು, ಹಿಂದಿ, ಇಂಗ್ಲಿಷ್ ಗೀತೆಗಳಿಗೆ ನೃತ್ಯ ಮಾಡಿದರು. ಏಕಪಾತ್ರಾಭಿನಯ, ಸ್ವಾತಂತ್ರ್ಯ ಸೇನಾನಿಗಳು, ಗಡಿ ಕಾಯುವ ಸೇನಾನಿ, ಅನ್ನದಾತ ರೈತ, ದಾರ್ಶನಿಕರು, ಗಣ್ಯರ ವೇಷಭೂಷಣ ಸ್ಪರ್ಧೆಗಳು ಗಮನ ಸೆಳೆದವು.
ಪ್ರಿನ್ಸಿಪಾಲ್ ಶಿವಣ್ಣ, ನಗರಸಭೆ ಸದಸ್ಯ ರಾಘವೇಂದ್ರ, ಆರ್ಟಿಇ ನೋಡಲ್ ಅಧಿಕಾರಿ ಪ್ರಸನ್ನ ಕುಮಾರ್, ಚೇತನ ವಿದ್ಯಾಸಂಸ್ಥೆಯ ವೇಣುಗೋಪಾಲ ಶಾಸ್ತ್ರಿ ಇನ್ನಿತರರು ಹಾಜರಿದ್ದರು.
ನಗರದ ಹೊರವಲಯದ ಟೋಲ್ಗೇಟ್ ಬಳಿ ಇರುವ ಸಿಟಿಜನ್ ಶಾಲೆಯ ಆವರಣದಲ್ಲಿ ನಡೆದ ಶಾಲೆಯ ಮುಸ್ಸಂಜೆ ವಾರ್ಷಿಕೋತ್ಸವ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ಈ ದೇಶದಲ್ಲಿ ಧನಾತ್ಮಕವಾದ ಬದಲಾವಣೆಗಳು ಏನಾದರೂ ಆಗುವುದಾದರೆ ಅದು ಯುವಜನರಿಂದ ಮಾತ್ರ. ದೇಶದಲ್ಲಿ ಆರ್ಥಿಕ, ಸಾಮಾಜಿಕ, ರಾಜಕೀಯ ಪ್ರಗತಿ ಆಗುವುದಾದರೆ ಅದು ವಿದ್ಯಾರ್ಥಿ ಯುವಜನರು ಮನಸು ಮಾಡಿದರಷ್ಟೆ ಸಾಧ್ಯ. ಹಾಗಾಗಿ ಈ ಸಮಾಜ ಇಟ್ಟುಕೊಂಡ ಕನಸುಗಳನ್ನು ನನಸು ಮಾಡುವ ನಿಟ್ಟಿನಲ್ಲಿ ನಿಮ್ಮ ಪ್ರಯಾಣ ಸಾಗಬೇಕು ಎಂದರು.
ಇದಕ್ಕಾಗಿ ಪೊಷಕರು ಕೂಡ ಕೆಲವೊಂದು ಬದಲಾವಣೆಗಳನ್ನು ತಂದುಕೊಳ್ಳಬೇಕಿದೆ. ಮಕ್ಕಳ ಮೇಲೆ ನಿಮ್ಮ ಆಸೆ ಆಕಾಂಕ್ಷೆಗಳನ್ನು ಈಡೇರಿಸುವ ಒತ್ತಡ ಹಾಕಬೇಡಿ, ಬದಲಿಗೆ ಅವರಲ್ಲಿನ ಪ್ರತಿಭೆ ಆಸಕ್ತಿಯನ್ನು ಗಮನಿಸಿ ಅವಕಾಶಗಳನ್ನು ಮಾಡಿಕೊಡಿ. ಅದು ಬಿಟ್ಟು ಮಕ್ಕಳ ಮೇಲೆ ಒತ್ತಡ ಹಾಕುವುದರಿಂದ ಅವರು ಮಾನಸಿಕವಾಗಿ ಖಿನ್ನತೆಗೆ ಒಳಗಾಗಿ ದಾರಿ ತಪ್ಪುವ ಅಪಾಯವೇ ಹೆಚ್ಚು ಎಂದು ವಿವರಿಸಿದರು.
ಮಕ್ಕಳಲ್ಲಿ ಗ್ರಹಿಕೆಯ ಶಕ್ತಿ ಹೆಚ್ಚಿರುತ್ತದೆ. ನೋಡಿದ್ದನ್ನು, ಕೇಳಿದ್ದನ್ನು ಕಲಿಯುವ, ಮಾಡುÊ,Ü ಅನುಭವಿಸುವ ತವಕ ಹೆಚ್ಚಿರುತ್ತದೆ. ಆದ್ದರಿಂದ ಮನೆ, ಶಾಲೆ, ಅಕ್ಕಪಕ್ಕದಲ್ಲಿ ಉತ್ತಮ ವಾತಾವರಣ ಇದ್ದಾಗ ಅವರು ಕೂಡ ಉತ್ತಮ ನಾಗರಿಕರಾಗಿ ಬೆಳೆಯಬಲ್ಲರು. ಅಂತಹ ವಾತಾವರಣ ನಿರ್ಮಾಣ ನಮ್ಮ ನಿಮ್ಮೆಲ್ಲರ ಹೊಣೆ ಆಗಿದ್ದು ಆ ನಿಟ್ಟಿನಲ್ಲಿ ಎಲ್ಲರ ಪ್ರಯತ್ನ ಸಾಗಬೇಕು ಎಂದು ಆಶಿಸಿದರು.
ವಿದ್ಯಾರ್ಥಿಗಳು ಕನ್ನಡ, ತೆಲುಗು, ಹಿಂದಿ, ಇಂಗ್ಲಿಷ್ ಗೀತೆಗಳಿಗೆ ನೃತ್ಯ ಮಾಡಿದರು. ಏಕಪಾತ್ರಾಭಿನಯ, ಸ್ವಾತಂತ್ರ್ಯ ಸೇನಾನಿಗಳು, ಗಡಿ ಕಾಯುವ ಸೇನಾನಿ, ಅನ್ನದಾತ ರೈತ, ದಾರ್ಶನಿಕರು, ಗಣ್ಯರ ವೇಷಭೂಷಣ ಸ್ಪರ್ಧೆಗಳು ಗಮನ ಸೆಳೆದವು.
ಪ್ರಿನ್ಸಿಪಾಲ್ ಶಿವಣ್ಣ, ನಗರಸಭೆ ಸದಸ್ಯ ರಾಘವೇಂದ್ರ, ಆರ್ಟಿಇ ನೋಡಲ್ ಅಧಿಕಾರಿ ಪ್ರಸನ್ನ ಕುಮಾರ್, ಚೇತನ ವಿದ್ಯಾಸಂಸ್ಥೆಯ ವೇಣುಗೋಪಾಲ ಶಾಸ್ತ್ರಿ ಇನ್ನಿತರರು ಹಾಜರಿದ್ದರು.