ಆ್ಯಪ್ನಗರ

ಅನೈತಿಕ ಸಂಬಂಧ ಪ್ರಶ್ನಿಸಿದ ಪತ್ನಿಯ ಕೊಲೆ, ಪತಿ ಬಂಧನ

ಅನೈತಿಕ ಸಂಬಂಧವನ್ನು ಪ್ರಶ್ನಿಸಿ ಗಲಾಟೆ ಮಾಡುತ್ತಿದ್ದ ಹೆಂಡತಿಯನ್ನು ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದ ಪತಿಯನ್ನು ಸ್ಥಳೀಯ ಪೋಲೀಸರು ಬಂಧಿಸಿ, ನ್ಯಾಯಾಂಗ ವಶಕ್ಕೆ ನೀಡಿದ್ದಾರೆ.

Vijaya Karnataka 14 Aug 2019, 3:42 pm
ಶಿಡ್ಲಘಟ್ಟ: ಅನೈತಿಕ ಸಂಬಂಧವನ್ನು ಪ್ರಶ್ನಿಸಿ ಗಲಾಟೆ ಮಾಡುತ್ತಿದ್ದ ಹೆಂಡತಿಯನ್ನು ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದ ಪತಿಯನ್ನು ಸ್ಥಳೀಯ ಪೋಲೀಸರು ಬಂಧಿಸಿ, ನ್ಯಾಯಾಂಗ ವಶಕ್ಕೆ ನೀಡಿದ್ದಾರೆ.
Vijaya Karnataka Web the murder of a wife who questioned the immoral relationship the arrest of her husband
ಅನೈತಿಕ ಸಂಬಂಧ ಪ್ರಶ್ನಿಸಿದ ಪತ್ನಿಯ ಕೊಲೆ, ಪತಿ ಬಂಧನ


ಹಲೀಮಾ(35) ತನ್ನ ಗಂಡನಿಂದಲೇ ಕೊಲೆಯಾದವರು. ಪಶ್ಚಿಮ ಬಂಗಾಳ ಮೂಲದ ಸಾಗರ್‌ ಸಿಂಗ್‌(42) ಕೊಲೆ ಆರೋಪಿ. ತಾಲೂಕಿನ ಜಂಗಮಕೋಟೆ-ಎಚ್‌.ಕ್ರಾಸ್‌ ಮಾರ್ಗದ ಅಂಬಿಗಾನಹಳ್ಳಿ ಗೇಟ್‌ ಬಳಿ ನೀಲಗಿರಿ ತೋಪೊಂದರಲ್ಲಿ ಜು.27ರಂದು ಹಲೀಮಾಳ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆ ಆಗಿತ್ತು. ಶಿಡ್ಲಘಟ್ಟ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದರು.

ಬೆಂಗಳೂರಿನ ಬಾಗಲೂರು ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಬೇರಾವುದೋ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಗರ್‌ ಸಿಂಗ್‌ನನ್ನು ಬಂಧಿಸಿ ವಿಚಾರಣೆ ನಡೆಸಿದಾಗ, ಹೆಂಡತಿಯನ್ನು ಕೊಲೆ ಮಾಡಿದ ವಿಷಯ ಬಾಯಿಬಿಟ್ಟಿದ್ದಾನೆ.

ಉದ್ಯೋಗಕ್ಕಾಗಿ ಪಶ್ಚಿಮ ಬಂಗಾಳದಿಂದ ಬಂದು ಬೆಂಗಳೂರಿನ ಬಾಗಲೂರಿನಲ್ಲಿ ವಾಸವಾಗಿದ್ದ ಸಾಗರ್‌ ಸಿಂಗ್‌ ಹಾಗೂ ಹಲೀಮಾ ದಂಪತಿಗೆ 8 ವರ್ಷದ ಗಂಡು, 1 ವರ್ಷದ ಹೆಣ್ಣು ಮಗುವೊಂದಿದೆ. ಸಾಗರ್‌ ಸಿಂಗ್‌ಗೆ ಸೋಮಾ ಅಜ್ರ ಎಂಬಾಕೆಯೊಂದಿಗೆ ಅಕ್ರಮ ಸಂಬಂಧ ಏರ್ಪಟ್ಟಿದೆ. ಈ ವಿಷಯ ತಿಳಿದ ಹಲೀಮಾ ಗಂಡನೊಂದಿಗೆ ಜಗಳವಾಡುತ್ತಿದ್ದಳು. ಇದರಿಂದ ಬೇಸತ್ತ ಸಾಗರ್‌ ಸಿಂಗ್‌, ಸೋಮಾ ಅಜ್ರಳೊಂದಿಗೆ ಸೇರಿಕೊಂಡು ಜು.19ರಂದು ಹಲೀಮಾಳ ಕತ್ತು ಹಿಸುಕಿ ಕೊಲೆ ಮಾಡಿ, ತನ್ನ ಕಾರಿನಲ್ಲಿ ಶವವನ್ನು ಸಾಗಿಸಿ, ಅಂಬಿಗಾನಹಳ್ಳಿಯ ನೀಲಗಿರಿ ತೋಪಿನಲ್ಲಿ ಬಿಸಾಡಿ ಹೋಗಿದ್ದ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ