ಆ್ಯಪ್ನಗರ

ಮೈತ್ರಿಯನ್ನು ಮತದಾರ ತಿರಸ್ಕರಿಸಿದ್ದಾರೆ: ಶಿವಶಂಕರರೆಡ್ಡಿ

ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮೈತ್ರಿಯನ್ನು ರಾಜ್ಯದ ಮತದಾರರು ತಿರಸ್ಕರಿಸಿದ್ದಾರೆ ಎಂದು ಈ ಚುನಾವಣೆ ತೀರ್ಪು ಸ್ಪಷ್ಟಪಡಿಸಿದ್ದು, ಜನಾದೇಶಕ್ಕೆ ತಲೆಬಾಗುತ್ತೇವೆ ಎಂದು ಕೃಷಿ ಸಚಿವ ಎನ್‌.ಎಚ್‌.ಶಿವಶಂಕರರೆಡ್ಡಿ ಹೇಳಿದರು.

Vijaya Karnataka 24 May 2019, 5:00 am
ಗೌರಿಬಿದನೂರು: ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮೈತ್ರಿಯನ್ನು ರಾಜ್ಯದ ಮತದಾರರು ತಿರಸ್ಕರಿಸಿದ್ದಾರೆ ಎಂದು ಈ ಚುನಾವಣೆ ತೀರ್ಪು ಸ್ಪಷ್ಟಪಡಿಸಿದ್ದು, ಜನಾದೇಶಕ್ಕೆ ತಲೆಬಾಗುತ್ತೇವೆ ಎಂದು ಕೃಷಿ ಸಚಿವ ಎನ್‌.ಎಚ್‌.ಶಿವಶಂಕರರೆಡ್ಡಿ ಹೇಳಿದರು.
Vijaya Karnataka Web the voter rejected the alliance shivshankar reddy
ಮೈತ್ರಿಯನ್ನು ಮತದಾರ ತಿರಸ್ಕರಿಸಿದ್ದಾರೆ: ಶಿವಶಂಕರರೆಡ್ಡಿ


ವಿಕ ದೊಂದಿಗೆ ಮಾತನಾಡಿದ ಅವರು, ಮೋದಿ ಅಲೆ ಈ ರೀತಿಯ ಫಲಿತಾಂಶ ಊಹಿಸಿರಲಿಲ್ಲ, ಮುಖ್ಯವಾಗಿ ಯುವ ಮತದಾರರು ಮೋದಿ ಕಡೆ ವಾಲಿದ್ದಾರೆ. ಒಟ್ಟಾರೆ ಕಾಂಗ್ರೆಸ್‌ ಪಕ್ಷ ಕ್ಕೆ ಈ ಚುನಾವಣೆ ದೊಡ್ಡ ಸೋಲಾಗಿದೆ ಎಂಬುದನ್ನು ಒಪ್ಪಿಕೊಳ್ಳುತ್ತೇನೆ. ಮೈತ್ರಿ ಸರಕಾರದ ಬಗ್ಗೆ ಪಕ್ಷ ದ ವರಿಷ್ಠರು ಚರ್ಚಿಸಲಿದ್ದಾರೆ, ಒಟ್ಟಾರೆ ಸೋಲಿನ ಬಗ್ಗೆ ಎರಡೂ ಪಕ್ಷ ದವರೂ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದರು.

ಜೆಡಿಎಸ್‌ ಮೈತ್ರಿ ಧರ್ಮ ಪಾಲಿಸಿಲ್ಲ: ತಾಲೂಕಿನಲ್ಲಿ ಜೆಡಿಎಸ್‌ ಮೈತ್ರಿ ಧರ್ಮವನ್ನು ಕಿಂಚಿತ್ತೂ ಪಾಲಿಸಿಲ್ಲ ಎಂಬುದಕ್ಕೆ ಈ ಚುನಾವಣೆ ಫಲಿತಾಂಶದಿಂದ ತಿಳಿಯುತ್ತದೆ. ಈ ಹಿಂದೆ ಲೋಕಸಭೆ ಚುನಾವಣೆಯಲ್ಲಿ ಮುಖ್ಯಮಂತ್ರಿ ಹೆಚ್‌.ಡಿ.ಕುಮಾರಸ್ವಾಮಿ ಸ್ಪರ್ಧಿಸಿದ್ದ ಸಂದರ್ಭದಲ್ಲಿ ಅವರಿಗೆ ಬಿದ್ದ ಮತಗಳು ಎಲ್ಲಿಗೆ ಹೋದವು, ಕಾಂಗ್ರೆಸ್‌ ಮತಗಳು ಎಲ್ಲವೂ ಮೊಯ್ಲಿಗೆ ಬಿದ್ದಿವೆ. ಆದರೆ ಮೈತ್ರಿ ಧರ್ಮ ಪಾಲನೆಯಾಗಿದ್ದಲ್ಲಿ ಮೊಯ್ಲಿ ಗೆಲವು ನಿಶ್ಚಿತವಾಗುತ್ತಿತ್ತು ಎಂದು ಪ್ರಶ್ನೆಯೊಂದಕ್ಕೆ ಸಚಿವರು ಉತ್ತರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ