ಆ್ಯಪ್ನಗರ

ನೀರಿನ ಘಟಕ ಕೆಟ್ಟು ವರ್ಷವಾದರೂ ಕೇಳೋರಿಲ್ಲ!

ತಾಲೂಕಿನ ಯಲ್ಲಂಪಲ್ಲಿ ಗ್ರಾಮದಲ್ಲಿ ಶುದ್ಧ ಕುಡಿವ ನೀರಿನ ಘಟಕ ಕೆಟ್ಟು ಹೋಗಿ ಒಂದು ವರ್ಷವಾದರೂ ದುರಸ್ತಿ ಮಾಡದಿರುವುದರಿಂದ ಫ್ಲೋರೈಡ್‌ಯುಕ್ತ ನೀರು ಕುಡಿದು ಮಕ್ಕಳು, ಮಹಿಳೆರು, ವೃದ್ಧರು ನಾನಾ ಕಾಯಿಲೆಗಳಿಂದ ಬಳಲುವಂತಾಗಿದೆ.

Vijaya Karnataka 15 Aug 2019, 5:00 am
ಬಾಗೇಪಲ್ಲಿ: ತಾಲೂಕಿನ ಯಲ್ಲಂಪಲ್ಲಿ ಗ್ರಾಮದಲ್ಲಿ ಶುದ್ಧ ಕುಡಿವ ನೀರಿನ ಘಟಕ ಕೆಟ್ಟು ಹೋಗಿ ಒಂದು ವರ್ಷವಾದರೂ ದುರಸ್ತಿ ಮಾಡದಿರುವುದರಿಂದ ಫ್ಲೋರೈಡ್‌ಯುಕ್ತ ನೀರು ಕುಡಿದು ಮಕ್ಕಳು, ಮಹಿಳೆರು, ವೃದ್ಧರು ನಾನಾ ಕಾಯಿಲೆಗಳಿಂದ ಬಳಲುವಂತಾಗಿದೆ.
Vijaya Karnataka Web the water unit is bad noboday take care
ನೀರಿನ ಘಟಕ ಕೆಟ್ಟು ವರ್ಷವಾದರೂ ಕೇಳೋರಿಲ್ಲ!


ತಾಲೂಕಿನಲ್ಲಿ ಯಲ್ಲಂಪಲ್ಲಿ ದೊಡ್ಡ ಗ್ರಾಮವಾಗಿದ್ದು, 900 ಮನೆ 3,500 ಜನಸಂಖ್ಯೆ ಹೊಂದಿದೆ. ಇಲ್ಲಿನ ಶುದ್ಧ ಕುಡಿವ ನೀರಿನ ಘಟಕ ಕೆಟ್ಟುಹೋಗಿ ವರ್ಷವಾಗಿದೆ, ಅದನ್ನು ವನ್ನು ದುರಸ್ತಿ ಮಾಡಬೇಕು ಎಂದು ಆಗ್ರಹಿಸಿ ಗ್ರಾಪಂ ಅಧಿಕಾರಿಗಳಿಗೆ ಮೂರು ಬಾರಿ ಲಿಖಿತ ಹಾಗೂ ಅನೇಕ ಬಾರಿ ಮೌಖಿಕವಾಗಿ ದೂರು ನೀಡಿದ್ದರೂ ಅಧಿಕಾರಿಗಳು ಕ್ಯಾರೇ ಎನ್ನುತ್ತಿಲ್ಲ. ಇದರಿಂದಾಗಿ ಗ್ರಾಮಸ್ಥರು 3 ಕಿ.ಮೀ. ದೂರದ ಗುಂಟಿಗಾನಪಲ್ಲಿ ಗ್ರಾಮಕ್ಕೆ ತೆರಳಿ ಶುದ್ಧ ಕುಡಿವ ನೀರು ತಂದು ಬಳಕೆ ಮಾಡುತ್ತಿದ್ದಾರೆ.

ನಿರ್ವಹಣೆಯೇ ಇಲ್ಲ: ಇಲ್ಲಿನ ಶುದ್ಧ ಕುಡಿವ ನೀರಿನ ಘಟಕವನ್ನು ಆಂಧ್ರಪ್ರದೇಶ ಹಿಂದೂಪುರ ಮಿತ್ರ ಸಂಸ್ಥೆ ನಿರ್ವಹಣೆ ಮಾಡುತ್ತಿತ್ತು. ಆದರೆ ಕಾರಣಾಂತರಗಳಿಂದ ಆ ಸಂಸ್ಥೆ ನಿರ್ವಹಣೆ ಬಿಟ್ಟು ಹೋದ ಮೇಲೆ ಕೇಳವವರೇ ಇಲ್ಲದಂತಾಗಿದೆ. ಶುದ್ಧ ಕುಡಿವ ನೀರಿನ ಘಟಕಕ್ಕೆ ಅಳವಡಿಸಿರುವ ನೀರಿನ ಟ್ಯಾಂಕ್‌ನಲ್ಲಿ ಪಾಚಿ ಕಟ್ಟಿದ್ದು, ಅದನ್ನು ಶುಚಿ ಮಾಡುವ ಕೆಲಸಕ್ಕೆ ಗ್ರಾಪಂ ಅಧಿಕಾರಿಗಳು ಕೈ ಹಾಕುತ್ತಿಲ್ಲ. ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು, ಕಾರ್ಯ ನಿಮಿತ್ತ ಇತರೆ ಊರುಗಳಿಗೆ ತೆರಳುವ ಗ್ರಾಮಸ್ಥರಿಗೆ ಗುಂಟಿಗಾನಪಲ್ಲಿಗೆ ಹೋಗಿ ಶುದ್ಧ ನೀರು ತರುವುದೇ ತೊಂದರೆಯಾಗಿದೆ.

ಈಗ ಗ್ರಾಪಂ ಅಧಿಕಾರಿಗಳು ಕೊಳವೆಬಾವಿಗಳಿಂದ ನೆರವಾಗಿ ಕುಡಿವ ನೀರನ್ನು ಗ್ರಾಮಸ್ಥರಿಗೆ ಸರಬರಾಜು ಮಾಡುತ್ತಿದ್ದು, ಈ ನೀರು ಕುಡಿದ ಗ್ರಾಮಸ್ಥರು ಡೆಂಗೆ, ಮಲೇರಿಯಾ, ಚಿಕ್ಯೂನ್‌ ಗುನ್ಯಾ ಮತ್ತಿತರ ಜ್ವರಗಳಿಂದ ಆಸ್ಪತ್ರೆಗಳಿಗೆ ದಾಖಲಾಗುತ್ತಿದ್ದಾರೆ. ಗ್ರಾಪಂ ಅಧಿಕಾರಿಗಳು ತಕ್ಷ ಣ ಕೆಟ್ಟುಹೋಗಿರುವ ಶುದ್ಧ ಕುಡಿವ ನೀರಿನ ಘಟಕವನ್ನು ದುರಸ್ತಿಗೊಳಿಸಬೇಕು ಎಂದು ಯಲ್ಲಂಪಲ್ಲಿ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಕೆಟ್ಟು ಹೋಗಿರುವ ಶುದ್ಧ ಕುಡಿವ ನೀರಿನ ಘಟಕವನ್ನು ದುರಸ್ತಿಗೊಳಿಸಲು ಗ್ರಾಪಂನಲ್ಲಿ 1ಲಕ್ಷ ರೂ.ಗಳನ್ನು ಕಾಯ್ದಿರಿಸಲಾಗಿದೆ. ಶುದ್ಧೀಕರಣ ಕೆಟ್ಟುಹೋಗಿ ಕೇವಲ 20 ದಿನಗಳಾಗಿದ್ದು, ಶೀಘ್ರದಲ್ಲೇ ದುರಸ್ತಿ ಮಾಡಲಾಗುವುದು.
-ಭಾಗ್ಯಲಕ್ಷ್ಮಿ | ಪಿಡಿಒ, ಯಲ್ಲಂಪಲ್ಲಿ ಗ್ರಾಪಂ, ಬಾಗೇಪಲ್ಲಿ ತಾಲೂಕು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ