ಆ್ಯಪ್ನಗರ

ನೇಣು ಬಿಗಿದುಕೊಂಡು ಯುವತಿ ಆತ್ಮಹತ್ಯೆ

ಹೊಟ್ಟೆ ನೋವು ತಾಳಲಾರದೆ ಯುವತಿಯೊಬ್ಬಳು ನೇಣಿ ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಟ್ಟಣದ 4ನೇ ವಾರ್ಡ್‌ನಲ್ಲಿ ಭಾನುವಾರ ಬೆಳಗ್ಗೆ ನಡೆದಿದೆ.

Vijaya Karnataka 11 Feb 2019, 5:00 am
ಗುಡಿಬಂಡೆ: ಹೊಟ್ಟೆ ನೋವು ತಾಳಲಾರದೆ ಯುವತಿಯೊಬ್ಬಳು ನೇಣಿ ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಟ್ಟಣದ 4ನೇ ವಾರ್ಡ್‌ನಲ್ಲಿ ಭಾನುವಾರ ಬೆಳಗ್ಗೆ ನಡೆದಿದೆ.
Vijaya Karnataka Web the woman committed suicide by hanging herself
ನೇಣು ಬಿಗಿದುಕೊಂಡು ಯುವತಿ ಆತ್ಮಹತ್ಯೆ


ಪಟ್ಟಣದ ಕೋಟೆ ವಿವೇಕಾನಂದ ನಗರದ ಆರ್‌.ಕೆ.ಎನ್‌. ಚಿತ್ರಮಂದಿರದ ಬಳಿಯ ಮಧುಗಿರಿ ಶ್ರೀರಾಮಪ್ಪ ಅವರ ಮೊಮ್ಮಗಳು ಹರ್ಷಿತಾ (17) ಆತ್ಮಹತ್ಯೆ ಮಾಡಿಕೊಂಡ ಯುವತಿ.

ಪಟ್ಟಣದ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದಳು. ಮುಟ್ಟಾಗುವ ಸಮಯದಲ್ಲಿ ತೀವ್ರ ಹೊಟ್ಟೆ ನೋವಿನಂದ ಬಳಲುತ್ತಿದ್ದ ಆಕೆ, ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ತನ್ನ ವೇಲ್‌ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮೃತರ ತಾಯಿ ಸಂಜೀವಮ್ಮ ದೂರು ನೀಡಿದ್ದಾರೆ.

ಮೃತಳ ತಂದೆ ಶಿವಲಿಂಗಪ್ಪ, ತಾಯಿ ಸಂಜೀವಮ್ಮ ಮಧುಗಿರಿಯಲ್ಲಿ ವಾಸವಿದ್ದು, ಹರ್ಷಿತ ಗುಡಿಬಂಡೆ ಪಟ್ಟಣದ ತಾತನ ಮನೆಯಲ್ಲಿ ಓದುತ್ತಿದ್ದಳು. ಈ ಬಗ್ಗೆ ಗುಡಿಬಂಡೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ