ಆ್ಯಪ್ನಗರ

ಚಾಮುಂಡೇಶ್ವರಿ ಕ್ಷೇತ್ರದಿಂದ ಸೋತವರೇ ನಿಜವಾದ ಅನರ್ಹರು : ಸಿದ್ದರಾಮಯ್ಯಗೆ ಟಾಂಗ್‌ ನೀಡಿದ ಕಟೀಲ್

ಚಾಮುಂಡೇಶ್ವರಿ ಕ್ಷೇತ್ರದಿಂದ ಮುಖ್ಯಮಂತ್ರಿಯಾಗಿದ್ದ ನಿಮ್ಮನ್ನು ಜನತೆ ಸೋಲಿಸಿದರು. ನೀವು ಅನರ್ಹರಲ್ಲವೇ? ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಅವರು ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಪರೋಕ್ಷವಾಗಿ ಟಾಂಗ್‌ ನೀಡಿದ್ದಾರೆ.

Vijaya Karnataka Web 3 Dec 2019, 6:18 pm
ಚಿಕ್ಕಬಳ್ಳಾಪುರ: ರಾಜೀನಾಮೆ ಕೊಟ್ಟ ಒಂದೇ ಕಾರಣಕ್ಕೆ ಶಾಸಕರನ್ನು ಅನರ್ಹರು ಎಂದು ಹೇಳುತ್ತಾರೆ. ಇಲ್ಲಿ ನಿಜವಾದ ಅನರ್ಹರು ಯಾರು ಸ್ವಾಮಿ? ಚಾಮುಂಡೇಶ್ವರಿ ಕ್ಷೇತ್ರದಿಂದ ಮುಖ್ಯಮಂತ್ರಿಯಾಗಿದ್ದ ನಿಮ್ಮನ್ನು ಜನತೆ ಸೋಲಿಸಿದರು. ನೀವು ಅನರ್ಹರಲ್ಲವೇ? ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಅವರು ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಪರೋಕ್ಷವಾಗಿ ಟಾಂಗ್‌ ನೀಡಿದ್ದಾರೆ.
Vijaya Karnataka Web nalin kumar kateel
ನಳಿನ್‌ಕುಮಾರ್ ಕಟೀಲ್


ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ ಪರ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿ ಮಾತನಾಡಿದರು. ನಿಮ್ಮ ನೇತೃತ್ವದಲ್ಲಿ ರಾಜ್ಯದಲ್ಲಿ ಚುನಾವಣೆಗೆ ಹೋದಿರಿ, ಎಷ್ಟು ಸ್ಥಾನ ಪಡೆದುಕೊಂಡಿರಿ ನಿಮ್ಮನ್ನು ಜನ ತಿರಸ್ಕಾರ ಮಾಡಿಲ್ಲವೇ? ಎಂದು ಕಾಂಗ್ರೆಸ್‌ ವಿರುದ್ಧ ವಾಗ್ದಾಳಿನಡೆಸಿದರು.

ರಾಜ್ಯದ ಜನ ಸಿದ್ಧರಾಮಯ್ಯರನ್ನು ಅನರ್ಹ ಮಾಡಿ, ಯಡಿಯೂರಪ್ಪರನ್ನು ಅರ್ಹ ಮಾಡಿದರು. ಅನರ್ಹ, ಅನರ್ಹ ಎಂದು ಹೇಳುವ ಶಾಸಕರು ಕ್ಷೇತ್ರದ ಅಭಿವೃದ್ಧಿಗಾಗಿ ರಾಜೀನಾಮೆ ಕೊಟ್ಟಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಸುಧಾಕರ್ ಕೂಡ ಅರ್ಹನೇ ಆಗಿರಬಹುದು. ಆದರೆ ಅವರು ಇಲ್ಲಿನ ಜನರಿಗೆ ಅಮೂಲ್ಯ ರತ್ನವಿದ್ದಂತೆ ಎಂದು ಹೇಳಿದರು.

ಕಾಂಗ್ರೆಸ್-ಜೆಡಿಎಸ್ ಮುಳುಗಿದ ಹಡಗುಗಳಂತೆ ಈಗಾಗಲೇ ಸೋಲೊಪ್ಪಿಕೊಂಡಿವೆ : ಸದಾನಂದಗೌಡ

ಅವರು ತನ್ನ ಜಿಲ್ಲೆಗೆ ಮೆಡಿಕಲ್ ಕಾಲೇಜು ತರಲು ಹಾಗೂ ಮಂಚೇನಹಳ್ಳಿ ತಾಲೂಕಿಗಾಗಿ ರಾಜೀನಾಮೆ ಕೊಟ್ಟರು. ಆದರೆ ಕೆಲವರು ಸ್ವಾರ್ಥ ರಾಜಕಾರಣದಿಂದ ತಿಹಾರ್ ಜೈಲು ಸೇರಿದರು. ಅಲ್ಲಿ ಕರ್ನಾಟಕದ ಭವಿಷ್ಯ ಬರೆಯಲು ನೋಡಿದರು ಆಗಲಿಲ್ಲ ಎಂದು ಪರೋಕ್ಷವಾಗಿ ಕಾಂಗ್ರೆಸ್‌ ಅನ್ನು ಟೀಕಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ