ಚಿಂತಾಮಣಿ: ತಾಲೂಕಿನ ಕೂಡದವಾಡಿ ಗ್ರಾಮದಲ್ಲಿ ಮಂಗಳವಾರ ಮಧ್ಯಾಹ್ನ ಕುರಿಗಳನ್ನು ತೊಳೆಯಲು ಹೋದ ಮೂವರು ಬಾಲಕರು ನೀರು ಪಾಲಾಗಿದ್ದಾರೆ.
ಮೃತರನ್ನು ಚಿಂತಾಮಣಿ ತಾಲೂಕಿನ ಕೊಡದವಾಡಿ ಗ್ರಾಮದ ಸುರೇಶ್ ಅವರ ಮಗ ಶೋಧನ್ (19), ಚೌಡಪ್ಪ ನವರ ಮಗ ಸುದರ್ಶನ್ (17) ಹಾಗೂ ಬಚ್ಚವಾರಹಳ್ಳಿಯ ರಮೇಶ್ ಅವರ ಮಗ ಸತೀಶ್ (18) ಎಂದು ಗುರುತಿಸಲಾಗಿದೆ.
ಮಂಗಳವಾರದ ಬೆಳಗೆ ಕೂಡದವಾಡಿ ಗ್ರಾಮದ ಕೆರೆಯಲ್ಲಿ ಕುರಿಗಳನ್ನು ತೊಳೆಯಲು ಗ್ರಾಮದ ವಾಟರ್ ಮ್ಯಾನ್ ಚೌಡಪ್ಪ ಅವರ ಮಕ್ಕಳಾದ ಸುದರ್ಶನ್, ಅರ್ಜುನ್ ಮತ್ತು ರಜೆಯ ಮೇಲೆ ಗ್ರಾಮಕ್ಕೆ ಬಂದಿದ್ದ ಚೌಡಪ್ಪನ ತಂಗಿಯ ಮಗ ಸತೀಶ್ ಸೇರಿದಂತೆ ಗ್ರಾಮದ ಬಾಲಕ ಶೋದನ್ ಎಂಬುವ ನಾಲ್ಕು ಮಂದಿ ಹೋಗಿದ್ದರು ಎನ್ನಲಾಗಿದೆ.
ಗುಡಿಬಂಡೆ: ಕಳಪೆ ಪಡಿತರ ದಿನಸಿ ನೀಡಿದ್ದನ್ನು ಪ್ರಶ್ನಿಸಿದ ದಲಿತ ಮಹಿಳೆಯ ಜುಟ್ಟು ಹಿಡಿದು ಜಾತಿ ನಿಂದನೆ!
ನಾಲ್ವರ ಪೈಕಿ ಚೌಡಪ್ಪ ಅವರ ಎರಡನೆಯ ಮಗ ಅರ್ಜುನ್ ಕೆರೆಯ ದಡದಲ್ಲಿ ಕುಳಿತಿದ್ದು ಇನ್ನೂ ಮೂವರು ಬಾಲಕರು ಕೆರೆಯಲ್ಲಿ ಕುರಿಗಳನ್ನೂ ತೊಳೆಯುತ್ತಿದ್ದರು ಎನ್ನಲಾಗಿದೆ. ಕುರಿ ತೊಳಿಯುವ ಸಮಯದಲ್ಲಿ ಇಬ್ಬರು ಯುವಕರು ನೀರಿನಲ್ಲಿ ಮುಳುಗುತ್ತಿರುವುದನ್ನು ಕಂಡ ಮತ್ತೊಬ್ಬ ಬಾಲಕ ಅವರನ್ನು ಎಳೆಯಲು ಪ್ರಯತ್ನಿಸಿ ಮೂವರು ನೀರಿನಲ್ಲಿ ಮುಳುಗಿ ಮೇಲಕ್ಕೆ ಬಾರದ ಹಿನ್ನೆಲೆಯಲ್ಲಿ ಅರ್ಜುನ್ ಕೂಡಲೇ ಗ್ರಾಮಕ್ಕೆ ತೆರಳಿ ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಭಾರೀ ಮಳೆಗೆ 13 ಸಾವಿರ ಕೋಳಿಗಳ ಬಲಿ; ಮಾಲೀಕನಿಗೆ 30 ಲಕ್ಷ ನಷ್ಟ!
ಕೂಡಲೇ ಗ್ರಾಮಸ್ಥರು ಸ್ಥಳಕ್ಕೆ ತೆರಳಿ ನೀರಿನಲ್ಲಿ ಮುಳುಗಿದ್ದ ಇಬ್ಬರ ಬಾಲಕರ ದೇಹಗಳು ಪತ್ತೆಯಾಗಿ ದಡಕ್ಕೆ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮತ್ತೊಬ್ಬನ ದೇಹ ಹುಡುಕಾಡಿದರು ದೇಹ ಪತ್ತೆಯಾಗದ ಕಾರಣ ಅಗ್ನಿ ಶಾಮಕ ದಳಕ್ಕೆ ಮಾಹಿತಿ ನೀಡಿದ್ದು ಸ್ಥಳಕ್ಕೆ ಧಾವಿಸಿದ ಅಗ್ನಿ ಶಾಮಕ ದಳ ಮತ್ತೊಬ್ಬನ ದೇಹವನ್ನು ಹೊರ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಇನ್ನೂ ವಿಷಯ ತಿಳಿದ ಕೂಡಲೇ ಚಿಂತಾಮಣಿ ಗ್ರಾಮಾಂತರ ಠಾಣೆಯ ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಮೃತ ಪಟ್ಟ ಬಾಲಕರ ದೇಹಗಳನ್ನು ಮರೋಣೋತ್ತರ ಪರೀಕ್ಷೆಗಾಗಿ ಇಲ್ಲಿನ ಸಾರ್ವಜನಿಕ ಸರಕಾರಿ ಆಸ್ಪತ್ರೆಗೆ ಸ್ಥಳಾಂತರಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಮೃತರನ್ನು ಚಿಂತಾಮಣಿ ತಾಲೂಕಿನ ಕೊಡದವಾಡಿ ಗ್ರಾಮದ ಸುರೇಶ್ ಅವರ ಮಗ ಶೋಧನ್ (19), ಚೌಡಪ್ಪ ನವರ ಮಗ ಸುದರ್ಶನ್ (17) ಹಾಗೂ ಬಚ್ಚವಾರಹಳ್ಳಿಯ ರಮೇಶ್ ಅವರ ಮಗ ಸತೀಶ್ (18) ಎಂದು ಗುರುತಿಸಲಾಗಿದೆ.
ಮಂಗಳವಾರದ ಬೆಳಗೆ ಕೂಡದವಾಡಿ ಗ್ರಾಮದ ಕೆರೆಯಲ್ಲಿ ಕುರಿಗಳನ್ನು ತೊಳೆಯಲು ಗ್ರಾಮದ ವಾಟರ್ ಮ್ಯಾನ್ ಚೌಡಪ್ಪ ಅವರ ಮಕ್ಕಳಾದ ಸುದರ್ಶನ್, ಅರ್ಜುನ್ ಮತ್ತು ರಜೆಯ ಮೇಲೆ ಗ್ರಾಮಕ್ಕೆ ಬಂದಿದ್ದ ಚೌಡಪ್ಪನ ತಂಗಿಯ ಮಗ ಸತೀಶ್ ಸೇರಿದಂತೆ ಗ್ರಾಮದ ಬಾಲಕ ಶೋದನ್ ಎಂಬುವ ನಾಲ್ಕು ಮಂದಿ ಹೋಗಿದ್ದರು ಎನ್ನಲಾಗಿದೆ.
ಗುಡಿಬಂಡೆ: ಕಳಪೆ ಪಡಿತರ ದಿನಸಿ ನೀಡಿದ್ದನ್ನು ಪ್ರಶ್ನಿಸಿದ ದಲಿತ ಮಹಿಳೆಯ ಜುಟ್ಟು ಹಿಡಿದು ಜಾತಿ ನಿಂದನೆ!
ನಾಲ್ವರ ಪೈಕಿ ಚೌಡಪ್ಪ ಅವರ ಎರಡನೆಯ ಮಗ ಅರ್ಜುನ್ ಕೆರೆಯ ದಡದಲ್ಲಿ ಕುಳಿತಿದ್ದು ಇನ್ನೂ ಮೂವರು ಬಾಲಕರು ಕೆರೆಯಲ್ಲಿ ಕುರಿಗಳನ್ನೂ ತೊಳೆಯುತ್ತಿದ್ದರು ಎನ್ನಲಾಗಿದೆ. ಕುರಿ ತೊಳಿಯುವ ಸಮಯದಲ್ಲಿ ಇಬ್ಬರು ಯುವಕರು ನೀರಿನಲ್ಲಿ ಮುಳುಗುತ್ತಿರುವುದನ್ನು ಕಂಡ ಮತ್ತೊಬ್ಬ ಬಾಲಕ ಅವರನ್ನು ಎಳೆಯಲು ಪ್ರಯತ್ನಿಸಿ ಮೂವರು ನೀರಿನಲ್ಲಿ ಮುಳುಗಿ ಮೇಲಕ್ಕೆ ಬಾರದ ಹಿನ್ನೆಲೆಯಲ್ಲಿ ಅರ್ಜುನ್ ಕೂಡಲೇ ಗ್ರಾಮಕ್ಕೆ ತೆರಳಿ ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಭಾರೀ ಮಳೆಗೆ 13 ಸಾವಿರ ಕೋಳಿಗಳ ಬಲಿ; ಮಾಲೀಕನಿಗೆ 30 ಲಕ್ಷ ನಷ್ಟ!
ಕೂಡಲೇ ಗ್ರಾಮಸ್ಥರು ಸ್ಥಳಕ್ಕೆ ತೆರಳಿ ನೀರಿನಲ್ಲಿ ಮುಳುಗಿದ್ದ ಇಬ್ಬರ ಬಾಲಕರ ದೇಹಗಳು ಪತ್ತೆಯಾಗಿ ದಡಕ್ಕೆ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮತ್ತೊಬ್ಬನ ದೇಹ ಹುಡುಕಾಡಿದರು ದೇಹ ಪತ್ತೆಯಾಗದ ಕಾರಣ ಅಗ್ನಿ ಶಾಮಕ ದಳಕ್ಕೆ ಮಾಹಿತಿ ನೀಡಿದ್ದು ಸ್ಥಳಕ್ಕೆ ಧಾವಿಸಿದ ಅಗ್ನಿ ಶಾಮಕ ದಳ ಮತ್ತೊಬ್ಬನ ದೇಹವನ್ನು ಹೊರ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಇನ್ನೂ ವಿಷಯ ತಿಳಿದ ಕೂಡಲೇ ಚಿಂತಾಮಣಿ ಗ್ರಾಮಾಂತರ ಠಾಣೆಯ ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಮೃತ ಪಟ್ಟ ಬಾಲಕರ ದೇಹಗಳನ್ನು ಮರೋಣೋತ್ತರ ಪರೀಕ್ಷೆಗಾಗಿ ಇಲ್ಲಿನ ಸಾರ್ವಜನಿಕ ಸರಕಾರಿ ಆಸ್ಪತ್ರೆಗೆ ಸ್ಥಳಾಂತರಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.