ಆ್ಯಪ್ನಗರ

ಹಸಿರು ಉಳಿಸಿ ಸಂದೇಶ ಸಾರಲು ನಾಟ್ಯ ಪ್ರದರ್ಶನ ನಾಳೆ

ನಗರದ ಸರ್‌.ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಜೂ.23 ರಂದು ಭರತ ನಾಟ್ಯದ ಮೂಲಕ ಹಸಿರು ಉಳಿಸಿ, ಮರ ಗಿಡ ಬೆಳೆಸಿ ಸಂದೇಶ ಸಾರಲು ಸಸ್ಯ ಶ್ಯಾಮಲಾಂ ಮಾತರಂ ವಂದೇ ಮಾತರಂ ಎಂಬ ಘೋಷ ವಾಕ್ಯದಡಿ ಕಲಾವಿದರು ನಾಟ್ಯ ಪ್ರದರ್ಶಿಸಲಿದ್ದಾರೆ.

Vijaya Karnataka 22 May 2018, 4:49 pm
ಚಿಕ್ಕಬಳ್ಳಾಪುರ: ನಗರದ ಸರ್‌.ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಜೂ.23 ರಂದು ಭರತ ನಾಟ್ಯದ ಮೂಲಕ ಹಸಿರು ಉಳಿಸಿ, ಮರ ಗಿಡ ಬೆಳೆಸಿ ಸಂದೇಶ ಸಾರಲು ಸಸ್ಯ ಶ್ಯಾಮಲಾಂ ಮಾತರಂ ವಂದೇ ಮಾತರಂ ಎಂಬ ಘೋಷ ವಾಕ್ಯದಡಿ ಕಲಾವಿದರು ನಾಟ್ಯ ಪ್ರದರ್ಶಿಸಲಿದ್ದಾರೆ.
Vijaya Karnataka Web tomorrow dance show for the message of save the green
ಹಸಿರು ಉಳಿಸಿ ಸಂದೇಶ ಸಾರಲು ನಾಟ್ಯ ಪ್ರದರ್ಶನ ನಾಳೆ


ಒಂದೇ ವೇದಿಕೆಯಡಿ ಗಿನ್ನಿಸ್‌, ಇಂಡಿಯಾ ಮತ್ತು ಏಷಿಯಾ ಬುಕ್‌ ಆಫ್‌ ರೆಕಾರ್ಡ್‌ ವಿಶ್ವ ದಾಖಲೆ ಬರೆಯಲಿದ್ದಾರೆ ಎಂದು ಓಂ ಶ್ರೀ ಸಾಯಿ ಸೆಂಟರ್‌ ಫಾರ್‌ ಪಾರ್ಫಾಮಿಂಗ್‌ ಆರ್ಟ್ಸ್ ಸಂಸ್ಥೆಯ ಅಧ್ಯಕ್ಷ ಎಂ.ಗುರುಪ್ರಸಾದ್‌ ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕಲಾವಿದರು ಭರತ ನಾಟ್ಯ ಪ್ರದರ್ಶಿಸುವ ಮೂಲಕ ಜನರಲ್ಲಿ ಪರಿಸರ ಪ್ರೇಮ ಬೆಳೆಸಲು ಮುಂದಾಗಿದ್ದೇವೆ. ಭರತ ನಾಟ್ಯದಲ್ಲಿ ಒಂದೇ ವೇದಿಕೆಯಲ್ಲಿ ಮೂರು ವಿಶ್ವ ದಾಖಲೆ ಬರೆಯುತ್ತಿರುವುದು ಇದೇ ಪ್ರಥಮ. ಸಂಸ್ಥೆ ವತಿಯಿಂದ ಕಾರ್ಯಕ್ರಮದಲ್ಲಿ ಭಾಗವಹಿಸುವ ಕಲಾವಿದರಿಗೆ ಪ್ರತಿ ಶನಿವಾರ, ಭಾನುವಾರ ಉಚಿತ ತರಬೇತಿ ನೀಡಲಾಗುವುದು ಎಂದು ವಿವರಿಸಿದರು.

ಈಗಾಗಲೇ ದೇಶ ಹಾಗೂ ರಾಜ್ಯದ ವಿವಿಧ ಭಾಗಗಳಿಂದ 700 ಕ್ಕೂ ಹೆಚ್ಚು ಕಲಾವಿದರು ಕಾರ್ಯಕ್ರಮದಲ್ಲಿ ಭಾಗವಹಿಸಲು ಹೆಸರು ನೊಂದಾಯಿಸಿದ್ದಾರೆ. ಇನ್ನೂ ಕಾರ್ಯಕ್ರಮದಲ್ಲಿ 1 ಸಾವಿರಕ್ಕೂ ಹೆಚ್ಚು ಕಲಾವಿದರು ಭಾಗವಹಿಸುವ ನಿರೀಕ್ಷೆ ಇದೆ. ಆಸಕ್ತ ಕಲಾವಿದರು 9448963207, 8762134456 ಸಂಪರ್ಕಿಸಬಹುದು ಎಂದರು.

ಓಂ ಶ್ರೀ ಸಾಯಿ ಸೆಂಟರ್‌ ಫಾರ್‌ ಪಾರ್ಫಾಮಿಂಗ್‌ ಆರ್ಟ್ಸ್ ಸಂಸ್ಥೆಯ ನಿರ್ದೇಶಕಿ ಎಚ್‌.ಆಶಾಲತಾಗುರುಪ್ರಸಾದ್‌ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ