ಆ್ಯಪ್ನಗರ

ನಾಳೆ ಧರ್ಮರಾಯಸ್ವಾಮಿ ಹಸಿ ಕರಗ

ನಗರದ ಗಂಗಮ್ಮ ಗುಡಿ ರಸ್ತೆಯ ಶ್ರೀ ಜಾಲಾರಿ ಗಂಗಮಾಂಬ ದೇವಾಲಯದಲ್ಲಿ ಧರ್ಮರಾಯಸ್ವಾಮಿ ಹೂವಿನ ಕರಗ ಮಹೋತ್ಸವ ಅಂಗವಾಗಿ ದೇವಾಲಯದ ಮುಂಭಾಗ ಚಂಡಿಕಾ ಹೋಮ ಮತ್ತು ಸಹಸ್ರನಾಮಾರ್ಚನೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಮಂಗಳವಾರ ಜರುಗಿದವು.

Vijaya Karnataka 24 Apr 2019, 5:00 am
ಚಿಕ್ಕಬಳ್ಳಾಪುರ: ನಗರದ ಗಂಗಮ್ಮ ಗುಡಿ ರಸ್ತೆಯ ಶ್ರೀ ಜಾಲಾರಿ ಗಂಗಮಾಂಬ ದೇವಾಲಯದಲ್ಲಿ ಧರ್ಮರಾಯಸ್ವಾಮಿ ಹೂವಿನ ಕರಗ ಮಹೋತ್ಸವ ಅಂಗವಾಗಿ ದೇವಾಲಯದ ಮುಂಭಾಗ ಚಂಡಿಕಾ ಹೋಮ ಮತ್ತು ಸಹಸ್ರನಾಮಾರ್ಚನೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಮಂಗಳವಾರ ಜರುಗಿದವು.
Vijaya Karnataka Web tomorrow is dharmarayaswamy karaga
ನಾಳೆ ಧರ್ಮರಾಯಸ್ವಾಮಿ ಹಸಿ ಕರಗ


ಧರ್ಮರಾಯರ ಕರಗ ಮಹೋತ್ಸವ ಸೇವಾ ಸಮಿತಿ ವತಿಯಿಂದ ಧರ್ಮರಾಯರ ಹೂವಿನ ಕರಗ ಮಹೋತ್ಸವದ ಅಂಗವಾಗಿ ದೇವಾಲಯದಲ್ಲಿ ಬೆಳಗ್ಗೆ 9 ಗಂಟೆಗೆ ಸಾಮೂಹಿಕವಾಗಿ ಶ್ರೀ ಜಾಲರಿ ಗಂಗಾದೇವಿ ಸಹಸ್ರನಾಮಾರ್ಚನೆ ಮತ್ತು ಚಂಡಿಕಾ ಹೋಮ ನಡೆಯಿತು. ಈ ವೇಳೆ ಸುಮಂಗಲಿಯರು ಸಾಮೂಹಿಕವಾಗಿ ಭಾಗವಹಿಸಿ ಕಳಸ ಪೂಜೆ ನೆರವೇರಿಸಿ ಜಾಲಾರಿ ಗಂಗಾದೇವಿ ಸಹಸ್ರನಾಮಾರ್ಚನೆ ಮಾಡಿದರು.

ಮಧ್ಯಾಹ್ನದ ಬಳಿಕ ದೇವಾಲಯದಲ್ಲಿ ಮಹಾ ಪೂರ್ಣಾಹುತಿ ಹಾಗೂ ಸುಮಂಗಲಿ ಪೂಜೆ, ಕನ್ನಿಕಾ ಪೂಜೆ, ದಂಪತಿ ಪೂಜೆ ಹಾಗೂ ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ಏರ್ಪಡಿಸಲಾಗಿತ್ತು. ಈ ವೇಳೆ ಭಕ್ತರು ಹೋಮಕ್ಕೆ ತುಪ್ಪ, ಒಣಕೊಬ್ಬರಿ, ರವಿಕೆಕಣ, ಖರ್ಜೂರ, ಪಂಚಫಲ ಅರ್ಪಿಸಿದರು. ಸಂಜೆ ಚಿಂತಲಪಲ್ಲಿ ಸೋಮಶೇಖರ್‌, ಕಿಶೋರ್‌ ಕುಮಾರ್‌ ಮತ್ತು ತಂಡದವರಿಂದ ಸುಗಮ ಸಂಗೀತ ಕಾರ್ಯಕ್ರಮ ನಡೆಯಿತು.

ಕರಗ ಮಹೋತ್ಸವದ ಅಂಗವಾಗಿ ದೇವಾಲಯದಲ್ಲಿ ಏಪ್ರಿಲ್‌ 24ರಂದು (ಬುಧವಾರ) ಕಳಸ ಪ್ರತಿಷ್ಠಾಪನೆ, ಧ್ವಜಾರೋಹಣ, 25 (ಗುರುವಾರ) ರಂದು ರಾತ್ರಿ 9 ಗಂಟೆಗೆ ನಗರದ ಕಂದವಾರ ಕೆರೆಯಿಂದ ಪ್ರಮುಖ ಬೀದಿಗಳಲ್ಲಿ ಧರ್ಮರಾಯಸ್ವಾಮಿ ಹಸಿ ಕರಗ ಮೆರವಣಿಗೆ ನಡೆಯಲಿದೆ. 26 ರಂದು ಶುಕ್ರವಾರ ಬೆಳಗ್ಗೆ 10.30ಕ್ಕೆ ದೇವರಿಗೆ ವಿಶೇಷ ಅಲಂಕಾರದೊಂದಿಗೆ ಗಂಗಾದೇವಿ ಜಾತ್ರಾ ಮಹೋತ್ಸವ ಜರುಗಲಿದೆ.

27ರಂದು ಧರ್ಮರಾಯಸ್ವಾಮಿ ಮತ್ತು ದ್ರೌಪದಮ್ಮ ದೇವಿ ಕಲ್ಯಾಣೋತ್ಸವ, ಹಾಗೂ ವಿವಿಧ ಜಾನಪದ ಕಲಾತಂಡಗಳೊಂದಿಗೆ ಧರ್ಮರಾಯ ಹೂವಿನ ಕರಗ ಮಹೋತ್ಸವ ಅದ್ಧೂರಿಯಾಗಿ ನಡೆಯಲಿದೆ. ಕರಗದ ಪೂಜಾರಿ ಕೆ.ಧರ್ಮೇಂದ್ರ ಕರಗ ಹೊರಲಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ