ಆ್ಯಪ್ನಗರ

ಮದುವೆ ಮನೆಯಲ್ಲಿ ಊಟ ಮಾಡಿದ 20 ಮಂದಿ ಅಸ್ವಸ್ಥ

ಮದುವೆ ಮನೆಯಲ್ಲಿ ಊಟ ಸೇವಿಸಿ 20ಕ್ಕೂ ಹೆಚ್ಚು ಮಂದಿ ಅಸ್ವತ್ಥಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಜಿಲ್ಲೆಯ ಬಾಗೇಪಲ್ಲಿ ತಾಲೂಕು ಪಾತಪಾಳ್ಯ ಹೋಬಳಿಯ ಮಂಗಲಮಡಗುವಾರಿಪಲ್ಲಿ ಗ್ರಾಮದಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ.

Vijaya Karnataka 23 Apr 2019, 5:00 am
ಊಟಕ್ಕೆ ಸಂಪು ನೀರು ಬಳಕೆಯಿಂದ ವಿಷವಾದ ಆಹಾರ | ಪಾತಪಾಳ್ಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ, ಗುಣಮುಖ
Vijaya Karnataka Web twenty two people who had dinner at home were dirty
ಮದುವೆ ಮನೆಯಲ್ಲಿ ಊಟ ಮಾಡಿದ 20 ಮಂದಿ ಅಸ್ವಸ್ಥ


ವಿಕ ಸುದ್ದಿಲೋಕ ಚಿಕ್ಕಬಳ್ಳಾಪುರ/ಬಾಗೇಪಲ್ಲಿ


ಮದುವೆ ಮನೆಯಲ್ಲಿ ಊಟ ಸೇವಿಸಿ 20ಕ್ಕೂ ಹೆಚ್ಚು ಮಂದಿ ಅಸ್ವತ್ಥಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಜಿಲ್ಲೆಯ ಬಾಗೇಪಲ್ಲಿ ತಾಲೂಕು ಪಾತಪಾಳ್ಯ ಹೋಬಳಿಯ ಮಂಗಲಮಡಗುವಾರಿಪಲ್ಲಿ ಗ್ರಾಮದಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ.

ತಾಲೂಕಿನ ಮಂಗಲಮಡಗುವಾರಿಪಲ್ಲಿ ಗ್ರಾಮದ ನಿವಾಸಿ ಚಿನ್ನಗಂಗುಲಪ್ಪ ಎಂಬುವವರ ಮಗಳ ಮದುವೆ ಭಾನುವಾರ ಮತ್ತು ಸೋಮವಾರ ನಡೆಯುತ್ತಿತ್ತು. ಭಾನುವಾರ ರಾತ್ರಿ ಮದುವೆಗೆ ಬಂದಿದ್ದವರಿಗೆ ಮದುವೆ ಮಂಟಪದಲ್ಲಿ ಊಟ ತಯಾರು ಮಾಡಲಾಗಿತ್ತು. ಊಟ ಸೇವಿಸಿದ ಸುಮಾರು 20ಕ್ಕೂ ಹೆಚ್ಚು ಮಂದಿಗೆ ಬೆಳಗ್ಗೆ ವಾಂತಿ, ಬೇಧಿ ಶುರುವಾಗಿ ಅಸ್ವತ್ಥರಾಗಿದ್ದಾರೆ. ಆಗ ಕೂಡಲೇ ಅವರನ್ನು ಪಾತಪಾಳ್ಯದ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರವಾನಿಸಿ ಚಿಕಿತ್ಸೆ ನೀಡಲಾಗಿದೆ. ಅದೃಷ್ಟವಶಾತ್‌ ಯಾವುದೇ ಪ್ರಾಣಹಾನಿಯಾಗಿಲ್ಲ. ಚಿಕಿತ್ಸೆಗೆ ದಾಖಲಾದ ಎಲ್ಲರೂ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಗೆ ತೆರಳಿದ್ದಾರೆ.

ಅಡುಗೆ ಮಾಡಲು ಸಂಪು ನೀರು ಬಳಕೆ ಮಾಡಿದ್ದೇ ವಾಂತಿ ಬೇಧಿಯಾಗಲು ಕಾರಣ ಎಂದು ತಿಳಿದುಬಂದಿದೆ. ರಾತ್ರಿ ಊಟ ಮಾಡಿ ಮಲಗಿದವರಿಗೆ ಬೆಳಗ್ಗೆ ವಾಂತಿ, ಬೇಧಿ ಕಾಣಿಸಿಕೊಂಡಿದೆ. ಸಂಪಿನ ಅಶುದ್ಧ ನೀರನ್ನು ಅಡುಗೆಗೆ ಬಳಸಿದ್ದ ಆಹಾರ ವಿಷಾಹಾರವಾಗಿದ್ದು, ಈ ಅವಘಡಕ್ಕೆ ಕಾರಣವಾಗಿದೆ. ತಕ್ಷಣ ಚಿಕಿತ್ಸೆ ಕೊಡಿಸಿರುವುದರಿಂದ ಎಲ್ಲರೂ ಗುಣಮುಖರಾಗಿದ್ದಾರೆ.

ಮಂಗಲಮಡಗುವಾರಿಪಲ್ಲಿ ಗ್ರಾಮದಲ್ಲಿ ಮದುವೆ ಊಟ ಸೇವಿಸಿ 20 ಮಂದಿಗೆ ವಾಂತಿ, ಬೇಧಿಯಾಗಿ ಅಸ್ವತ್ಥರಾಗಿರುವುದಕ್ಕೆ ಹಲವು ದಿನಗಳಿಂದ ಶೇಖರಣೆ ಮಾಡಿದ್ದ ಸಂಪು ನೀರೇ ಕಾರಣ. ಪ್ರಸ್ತುತ ಎಲ್ಲರಿಗೂ ಚಿಕಿತ್ಸೆ ನೀಡಲಾಗಿದ್ದು, ಸದ್ಯ ಎಲ್ಲರೂ ಆರೋಗ್ಯವಾಗಿದ್ದಾರೆ. ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಹೆಚ್ಚಿನ ಚಿಕಿತ್ಸೆ ಬೇಕಾದಲ್ಲಿ ಒದಗಿಸಲಾಗುವುದು.
-ಡಾ.ರವಿಶಂಕರ್‌, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ.

ಭಾನುವಾರ ರಾತ್ರಿ ಮದುವೆಗೆ ಬಂದವರಿಗೆ ಅಡುಗೆ ಮಾಡಲಾಗಿತ್ತು. ಮದುವೆಗೆ ಬಂದವರ ಪೈಕಿ ಊಟ ಸೇವಿಸಿದ 20ಕ್ಕೂ ಅಧಿಕ ಮಂದಿ ಬೆಳಗ್ಗೆ ವಾಂತಿ ಬೇಧಿಯಾಗಿದ್ದು, ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತು. ಎಲ್ಲರೂ ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದು, ಹಲವು ದಿನಗಳಿಂದ ತುಂಬಿಸಿದ್ದ ಸಂಪು ನೀರು ಬಳಕೆ ಮಾಡಿರುವುದೇ ಈ ಘಟನೆ ಕಾರಣ.
-ರಸೂಲ್‌ಖಾನ್‌, ಪಾತಪಾಳ್ಯ ಗ್ರಾ.ಪಂ. ಅಧ್ಯಕ್ಷ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ