ಆ್ಯಪ್ನಗರ

ಹೆತ್ತ ತಾಯಿ ಮತ್ತು ಸಂಬಂಧಿಕರಿಂದಲೇ ನಡೆಯಿತು ಯುವತಿಯ ಮರ್ಯಾದಾ ಹತ್ಯೆ..!

ಜೂನ್ 26ಕ್ಕೆ ಚಿಕ್ಕಬಳ್ಳಾಪುರದ ಗೌರಿಬಿದನೂರು ತಾಲೂಕಿನ ಹುಲಿಕುಂಟೆ ಗ್ರಾಮದ ಬಳಿ ಸಿಕ್ಕ ಮಹಿಳೆಯೊಬ್ಬಳ ಅನಾಥ ಶವ ಪತ್ತೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಆಕೆಯನ್ನು ಹೆತ್ತ ತಾಯಿ ಮತ್ತು ಮನೆಯವರೇ ಸೇರಿ ಕೊಲೆ ಮಾಡಿದ್ಧಾರೆ ಎಂದು ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ.

Vijaya Karnataka 29 Jun 2020, 3:47 pm
ಚಿಕ್ಕಬಳ್ಳಾಪುರ: ಜಿಲ್ಲೆಯ ಹುಲಿಕುಂಟೆ ಸಮೀಪ ಎರಡು ದಿನಗಳ ಹಿಂದೆ ಸಿಕ್ಕಿದ ಅನಾಥ ಮಹಿಳೆಯ ಶವ ಪತ್ತೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ.
Vijaya Karnataka Web CKB ARRESTED


ಅನಾಥ ಮಹಿಳೆಯ ಕೊಲೆಯನ್ನು ಆಕೆಯ ಮನೆಯವರೇ ಮಾಡಿದ್ದಾರೆ ಅನ್ನೋದು ತನಿಖೆಯಲ್ಲಿ ಬಯಲಾಗಿದ್ದು, ಇದೊಂದು ಮರ್ಯಾದಾ ಹತ್ಯೆ ಎಂದು ತಿಳಿದು ಬಂದಿದೆ. ಕೊಲೆಯಾದ ಯುವತಿ ಅನ್ಯ ಜಾತಿಯ ಯುವಕನನ್ನು ಪ್ರೀತಿಸುತ್ತಿದ್ದಳು. ಅವನನ್ನು ಪ್ರೀತಿಸಬೇಡ ಎಂದು ಮನೆಯವರು ಒತ್ತಾಯ ಮಾಡಿದರೂ ಆಕೆ ಕೇಳಿರಲಿಲ್ಲ. ಇದರಿಂದ ಬೇಸತ್ತ ಯುವತಿಯ ತಾಯಿ ಮತ್ತು ಸಂಬಂಧಿಕರು ಆಕೆಯನ್ನು ಕೊಲೆ ಮಾಡಿ ಶವವನ್ನು ಎಸೆದು ಬಂದಿದ್ದಾರೆ ಎಂದು ತನಿಖೆಯಲ್ಲಿ ಬಯಲಾಗಿದೆ.

ಗೌರಿಬಿದನೂರಿನಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆ..!...

ಮೃತ ಯುವತಿ ಹೆಸರು ಸಂಧ್ಯಾ (18) ಎಂದು ತಿಳಿದುಬಂದಿದ್ದು, ಆಕೆಯನ್ನು ಆಂಧ್ರಪ್ರದೇಶದಲ್ಲಿ ಕೊಲೆ ಮಾಡಿದ ಆರೋಪಿಗಳು ಗೌರಿಬಿದನೂರು ತಾಲೂಕಿನ ಹುಲಿಕುಂಟೆ ಬಳಿಯ ಕೆರೆ ಸಮೀಪ ಶವವನ್ನು ಎಸೆದಿದ್ದರು. ಇನ್ನು ಯುವತಿಯ ಪ್ರಿಯಕರ ಪ್ರಕರಣವೊಂದರಲ್ಲಿ ಜೈಲಿಗೆ ಹೋಗಿ ಬಂದಿದ್ದ. ಇತ್ತೀಚೆಗೆ ಮತ್ತೆ ಜೈಲುಪಾಲಾಗಿದ್ದ ಆತನನ್ನು ಪ್ರೀತಿಸಬಾರದೆಂದು ಮನೆಯವರು ಕೇಳಿದ್ದಾರೆ. ಆಕೆ ಕೇಳದೇ ಇದ್ದಾಗ ಯುವತಿಯ ತಾಯಿ, ಅಕ್ಕ, ಅಣ್ಣ ಮತ್ತು ಭಾವ ಸೇರಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಕೊಲೆ ಮಾಡಿದ ನಂತರ ಆಕೆಯ ದೇಹಕ್ಕೆ ಸೈಜುಗಲ್ಲು ಕಟ್ಟಿ ಕೆರೆಯ ಬಳಿ ಎಸೆದಿದ್ದರು.

ಬೆಂಗಳೂರು: ಕೊರೊನಾ ಆರೈಕೆ ಕೇಂದ್ರ ಸಿದ್ಧತೆ ಚುರುಕು; ಎಲ್ಲೆಲ್ಲಿ ಇದೆ ಕೋವಿಡ್‌ ಕೇರ್‌ ಸೆಂಟರ್‌?

ಪೊಲೀಸರ ತನಿಖೆಯಲ್ಲಿ ಮನೆಯವರ ಕೃತ್ಯ ಬಯಲಾಗಿದ್ದು, ಸದ್ಯ ಘಟನೆ ಸಂಬಂಧ ಮೃತ ಯುವತಿಯ ತಾಯಿ ರಾಮಾಂಜಿನಮ್ಮ, ಅಕ್ಕ ನೇತ್ರಾವತಿ, ಬಾವ ಬಾಲು ಮತ್ತು ಅಣ್ಣ ಅಶೋಕ್‌ನನ್ನು ಪೊಲೀಸರು ಬಂಧಿಸಿದ್ದಾರೆ.

ಕೊರೊನಾ ಲಸಿಕೆ ಹೆಸರಲ್ಲಿ 13 ಲಕ್ಷ ರೂ. ವಂಚನೆ; ಕಮೀಷನ್‌ ಕೊಡಿಸುವುದಾಗಿ ನಂಬಿಸಿದ ಸೈಬರ್‌ ಖದೀಮರು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ