ಆ್ಯಪ್ನಗರ

ಕ್ಯಾಂಟರ್‌ಗೆ ವಿದ್ಯುತ್‌ ಸ್ಪರ್ಶಿಸಿ ಇಬ್ಬರು ಕಾರ್ಮಿಕರ ಸಾವು

ಕೋಳಿಫಾರಂಗೆ ಫೀಡ್‌ ಸಾಗಾಣಿಕೆ ಮಾಡುತ್ತಿದ್ದ ಕ್ಯಾಂಟರ್‌ಗೆ ವಿದ್ಯುತ್‌ ಸ್ಪರ್ಶಿಸಿ ಕ್ಯಾಂಟರ್‌ನಲ್ಲಿದ್ದ ಇಬ್ಬರು ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲೂಕಿನ ಯಲ್ಲಂಪಲ್ಲಿಗ್ರಾಮದ ಬಳಿ ನಡೆದಿದೆ.

Vijaya Karnataka 30 Sep 2019, 4:14 pm
Vijaya Karnataka Web two workers died in electrical accident
ಕ್ಯಾಂಟರ್‌ಗೆ ವಿದ್ಯುತ್‌ ಸ್ಪರ್ಶಿಸಿ ಇಬ್ಬರು ಕಾರ್ಮಿಕರ ಸಾವು
ಬಾಗೇಪಲ್ಲಿ: ಕೋಳಿಫಾರಂಗೆ ಫೀಡ್‌ ಸಾಗಾಣಿಕೆ ಮಾಡುತ್ತಿದ್ದ ಕ್ಯಾಂಟರ್‌ಗೆ ವಿದ್ಯುತ್‌ ಸ್ಪರ್ಶಿಸಿ ಕ್ಯಾಂಟರ್‌ನಲ್ಲಿದ್ದ ಇಬ್ಬರು ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲೂಕಿನ ಯಲ್ಲಂಪಲ್ಲಿಗ್ರಾಮದ ಬಳಿ ನಡೆದಿದೆ.

ಮೃತರನ್ನು ಯಲ್ಲಂಪಲ್ಲಿಗ್ರಾಪಂ ವ್ಯಾಪ್ತಿಯ ಲಕ್ಷಿತ್ರ್ಮೕನಾರಾಯಣಪುರ ಗ್ರಾಮದ ಬಿ.ವಿ.ಆನಂದ್‌ ಹಾಗೂ ಬಿಹಾರ ರಾಜ್ಯದ ಮೊತಿಹಾರ್‌ ಜಿಲ್ಲೆಯ ಹರ್‌ಪುರ ಗ್ರಾಮದ ಕಾರೇಶ್‌ ಮಿಶ್ರ ಎಂದು ಗುರುತಿಸಲಾಗಿದೆ. ಕೋಳಿಫಾರಂ ಮಾಲೀಕ ಆನಂದರೆಡ್ಡಿ ಅವರು ಬೆಂಗಳೂರಿನ ಸುಗಣ ಸಂಸ್ಥೆಯಿಂದ ಕೋಳಿಗಳನ್ನು ಸಾಕಾಣೆ ಮಾಡಲು ಫೀಡ್‌ ಅನ್ನು ಖರೀದಿಸಿ ಯಲ್ಲಂಪಲ್ಲಿಗ್ರಾಮದ ಬಳಿ ಇರುವ ಕೋಳಿಫಾರಂಗೆ ತರಿಸಿದ್ದರು. ಕ್ಯಾಟರ್‌ ಕೋಳಿಫಾರಂ ಒಳಗೆ ಪ್ರವೇಶಿಸಿದ ನಂತರ ಕಾರ್ಮಿಕರಾದ ಆನಂದ, ಕಾರೇಶ್‌ ಮಿಶ್ರ ಫೀಡ್‌ ಅನ್ನು ಕೆಳಗಿಸಲು ಮುಂದಾದಾಗ ವಿದ್ಯುತ್‌ ಸ್ಪರ್ಶಿಸಿ ಸ್ಥಳದಲ್ಲೇ ಮೃತಪಟ್ಟರು. ಕೋಳಿಫಾರಂಗೆ ಅಂಟಿಕೊಂಡು ಹಾದು ಹೋಗಿರುವ ವೈರ್‌ ಮೇಲೆ ಇದ್ದ ಪ್ಲಾಸ್ಟಿಕ್‌ ಪದರ ಕಿತ್ತುಹೋಗಿರುವ ಕಾರಣ ಈ ಅವಘಡ ಸಂಭವಿಸಿದೆ. ಚಾಲಕ ಶಾಕ್‌ ಹೊಡೆದ ಕೂಡಲೇ ವಾಹನದಿಂದ ಜಿಗಿದು ಪ್ರಾಣಾಪಾಯಿಂದ ಪಾರಾಗಿದ್ದಾರೆ. ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ