ಆ್ಯಪ್ನಗರ

ಒಕ್ಕಲಿಗರ ಪ್ರತಿಭಟನೆ ಕಾಂಗ್ರೆಸ್‌ಗೆ ಸೀಮಿತ, ಅದಕ್ಕೂ ಬಿಜೆಪಿಗೂ ಸಂಬಂಧವಿಲ್ಲ: ಬಚ್ಚೇಗೌಡ

ಸುಮ್ಮನೆ ಎಲ್ಲದ್ದಕ್ಕೂ ರಾಜಕೀಯ ಬಣ್ಣ ಹಚ್ಚುತ್ತಾರೆ. ಡಿಕೆಶಿ ಬೆಂಬಲಿಸಿ ಒಕ್ಕಲಿಗರು ಪ್ರತಿಭಟನೆ ನಡೆಸಿರುವುದು ತಪ್ಪು. ಇಂಥಹ ವಿಷಯದಲ್ಲಿ ಗೊಂದಲ ಮಾಡಬಾರದು ಎಂಬುದಾಗಿ ಸಂಸದ ಬಿ.ಎನ್.ಬಚ್ಚೇಗೌಡ ಪ್ರತಿಪಾದಿಸಿದ್ದಾರೆ.

Vijaya Karnataka Web 11 Sep 2019, 1:07 pm
ಚಿಕ್ಕಬಳ್ಳಾಪುರ: ಒಕ್ಕಲಿಗರ ಪ್ರತಿಭಟನೆ ಕಾಂಗ್ರೆಸ್‌ಗೆ ಸೀಮಿತವಾಗಿರುವ ಪ್ರತಿಭಟನೆ, ಅದಕ್ಕೂ ಬಿಜೆಪಿಗೂ ಸಂಬಂಧವಿಲ್ಲ ಎಂದು ಸಂಸದ ಬಿ.ಎನ್‌. ಬಚ್ಚೇಗೌಡ ಹೇಳಿದರು.
Vijaya Karnataka Web Bache Gowda BN


ಜಿಲ್ಲಾಡಳಿತ ಭವನದಲ್ಲಿ ತಮ್ಮ ನೂತನ ಕಚೇರಿ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, “ದೇಶದಲ್ಲಿ, ರಾಜ್ಯದಲ್ಲಿ ಎಲ್ಲರೂ ರಾಜಕಾರಣ ಮಾಡಬೇಕು‌. ಅದು ಬಿಟ್ಟು ಒಕ್ಕಲಿಗರಿಗೆ ಮಾತ್ರ ರಾಜಕಾರಣವನ್ನು ಸೀಮಿತಗೊಳಿಸಿದರೆ ಯಾವ ಸಂದೇಶ ರವಾನೆಯಾಗುತ್ತದೆ. ಹಾಗಾದರೆ ಉಳಿದವರು ಬೇಡವೆ? ಜಾತಿ, ಸಮುದಾಯ ತಂದು ರಾಜಕೀಯ ಮಾಡುವುದು ಎಷ್ಟು ಸರಿ?” ಎಂದು ಅವರು ಪ್ರಶ್ನಿಸಿದರು.

"ಇಡಿ, ಐಟಿ, ಸಿಬಿಐ ಸ್ವಾಯತ್ತ ಸಂಸ್ಥೆಗಳಾಗಿದ್ದು ತಮ್ಮ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿವೆ. ತನಿಖೆ ಮುಗಿದ ಬಳಿಕ ನಾವು ಮಾತನಾಡುತ್ತೇವೆ. ಬಿಜೆಪಿ ದ್ವೇಷದ ರಾಜಕಾರಣ ಮಾಡುವುದಿಲ್ಲ. ಅವರವರು ಮಾಡಿದ್ದು ಅವರು ಅನುಭವಿಸುತ್ತಾರೆ,” ಎಂದು ಪರೋಕ್ಷವಾಗಿ ಡಿ.ಕೆ. ಶಿವಕುಮಾರ್ ವಿರುದ್ಧ ಬಚ್ಚೇಗೌಡ ಆಕ್ರೋಶ ವ್ಯಕ್ತಪಡಿಸಿದರು.

ಸುಮ್ಮನೆ ಎಲ್ಲದ್ದಕ್ಕೂ ರಾಜಕೀಯ ಬಣ್ಣ ಹಚ್ಚುತ್ತಾರೆ. ಡಿಕೆಶಿ ಬೆಂಬಲಿಸಿ ಒಕ್ಕಲಿಗರು ಪ್ರತಿಭಟನೆ ನಡೆಸಿರುವುದು ತಪ್ಪು. ಇಂಥಹ ವಿಷಯದಲ್ಲಿ ಗೊಂದಲ ಮಾಡಬಾರದು ಬಿ.ಎನ್.ಬಚ್ಚೇಗೌಡ ಪ್ರತಿಪಾದಿಸಿದರು.

ಹರಿದು ಬಂದ ಡಿಕೆಶಿ ಅಭಿಮಾನಿಗಳು, ಬಂಧನ ಖಂಡಿಸಿ ಬೆಂಗಳೂರಿನಾದ್ಯಂತ ಪ್ರತಿಭಟನೆ

ಇನ್ನು ಕೋಲಾರದಲ್ಲಿ ಮಾತನಾಡಿದ ಸಂಸದ ಮುನಿಸ್ವಾಮಿ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದರು.

ಡಿ.ಕೆ. ಶಿವಕುಮಾರ್‌ ಬಂಧನ ಪ್ರಕರಣವನ್ನು ಜಾತಿ ಲೆಕ್ಕಾಚಾರದಲ್ಲಿ ನೋಡುವುದು ಬೇಡ. ಭಾರತದ ಪ್ರಥಮ ಪ್ರಜೆಯಿಂದ ಹಿಡಿದು ಕಟ್ಟಕಡೆಯ ವ್ಯಕ್ತಿಗೂ ಒಂದೇ ಕಾನೂನು. ಇಡಿ ಸ್ವತಂತ್ರ ಸಂಸ್ಥೆಯಾಗಿದ್ದು, ಡಿಕೆಶಿ ನಿರಪರಾಧಿಯಾದರೆ ಪ್ರಕರಣವನ್ನು ಎದುರಿಸಿ ಪ್ರಕರಣದಿಂದ ಹೊರ ಬರಲಿ,” ಎಂದರು.

“ಎಲ್ಲಾ ಜಾತಿ, ಪಕ್ಷದವರು ಸಹ ಇಡಿ ಸಂಸ್ಥೆಯನ್ನು ಎದುರಿಸಿದ್ದಾರೆ, ಇದಕ್ಕೆ ಜಾತಿ ಬಣ್ಣ ಕಟ್ಟುವುದು ಬೇಡ,” ಎಂದವರು ಮನವಿ ಮಾಡಿಕೊಂಡರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ