ಆ್ಯಪ್ನಗರ

ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಸ್ವಾಗತಿಸಿ ವಿಜಯೋತ್ಸವ

ದೇಶದ ಕಾನೂನು ಕಟ್ಟಲೆಗಳಿಂದ ದೂರ ಉಳಿದಿದ್ದ ರಾಜ್ಯವೊಂದರ ವಿಶೇಷ ಸ್ಥಾನಮಾನ ರದ್ದು ಮಾಡುವ ಮೂಲಕ ಎಲ್ಲ ಪ್ರಜೆಗಳಿಗೂ ಒಂದೇ ಕಾನೂನು ಎಂಬುದನ್ನು ತೋರಿಸಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರಾಧ್ಯP್ಷÜ ಅಮಿತ್‌ ಶಾ ಅವರ ತೀರ್ಮಾನವನ್ನು ಇಡೀ ಭಾರತ ಸ್ವಾಗತಿಸಬೇಕು ಎಂದು ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸಿ.ಬಿ. ಕಿರಣ್‌ ತಿಳಿಸಿದರು.

Vijaya Karnataka 6 Aug 2019, 5:00 am
ಚಿಕ್ಕಬಳ್ಳಾಪುರ: ದೇಶದ ಕಾನೂನು ಕಟ್ಟಲೆಗಳಿಂದ ದೂರ ಉಳಿದಿದ್ದ ರಾಜ್ಯವೊಂದರ ವಿಶೇಷ ಸ್ಥಾನಮಾನ ರದ್ದು ಮಾಡುವ ಮೂಲಕ ಎಲ್ಲ ಪ್ರಜೆಗಳಿಗೂ ಒಂದೇ ಕಾನೂನು ಎಂಬುದನ್ನು ತೋರಿಸಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರಾಧ್ಯP್ಷÜ ಅಮಿತ್‌ ಶಾ ಅವರ ತೀರ್ಮಾನವನ್ನು ಇಡೀ ಭಾರತ ಸ್ವಾಗತಿಸಬೇಕು ಎಂದು ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸಿ.ಬಿ. ಕಿರಣ್‌ ತಿಳಿಸಿದರು.
Vijaya Karnataka Web welcome to the cancellation of the special status of jammu and kashmir
ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಸ್ವಾಗತಿಸಿ ವಿಜಯೋತ್ಸವ


ನಗರದ ಎಂ.ಜಿ. ರಸ್ತೆಯ ಮರಳುಸಿದ್ದೇಶ್ವರ ದೇವಾಲಯ ವೃತ್ತದಲ್ಲಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರಿಂದ ಸೋಮವಾರ ಆಯೋಜಿಸಿದ್ದ ಜಮ್ಮುಕಾಶ್ಮೀರ ವಿಶೇಷ ಸ್ಥಾನಮಾನ ರದ್ದು ಮಾಡಿರುವುದನ್ನು ಬೆಂಬಲಿಸಿ ವಿಜಯೋತ್ಸ ಆಚರಿಸಿ, ಅವರು ಮಾತನಾಡಿದರು.

ಭಾರತ ಸುಭದ್ರ ಹೆಜ್ಜೆ: ಕಳೆದ ಲೋಕಸಭೆ ಚುನಾವಣೆಗೂ ಪೂರ್ವದಲ್ಲಿ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳಲ್ಲಿ ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಮಾಡುವುದು ಪ್ರಮುಖವಾಗಿತ್ತು. ಕೇಂದ್ರ ಸರಕಾರ ಅಧಿಕಾರಕ್ಕೆ ಬಂದ ಎರಡು ತಿಂಗಳಿನಲ್ಲಿಯೇ ನೀಡಿದ್ದ ಭರವಸೆ ಈಡೇರಿಸುವ ಮೂಲಕ ಬಿಜೆಪಿ ಜನಪರ ಆಡಳಿತ ನೀಡುತ್ತಿದೆ ಎಂಬುದಕ್ಕೆ ಉತ್ತರ ನೀಡಿದೆ. ಇವತ್ತು ಭಾರತ ಸುಭದ್ರ ಹೆಜ್ಜೆ ಇಡುತ್ತಿದೆ ಎಂದು ಹೇಳಿದರು.

ಮತ ಬ್ಯಾಂಕಿಗಾಗಿ ವಿರೋಧ: ಈಗಲೂ ಮತ ಬ್ಯಾಂಕಿಗಾಗಿ ಕೆಲ ಪಟ್ಟಭದ್ರ ಹಿತಾಸಕ್ತಿಗಳು ವಿಶೇಷ ಸ್ಥಾನಮಾನ ರದ್ದು ವಿರೋಧಿಸಿ ಮಾತನಾಡುತ್ತಿರುವುದು ಹಾಸ್ಯಾಸ್ಪದ. ಇಡೀ ದೇಶಕ್ಕೆ ಒಂದು ಕಾನೂನು, ಕಣಿವೆ ರಾಜ್ಯಕ್ಕೆ ಮಾತ್ರ ಪ್ರತ್ಯೇಕ ಕಾನೂನು ಎಂಬುದನ್ನು ಸ್ವತಃ ಸಂವಿಧಾನ ಶಿಲ್ಪಿ ಅಂಬೇಡ್ಕರ್‌ ಅವರೇ ವಿರೋಧಿಸಿದ್ದರು. ಆದರೆ ಕಳೆದ 70 ವರ್ಷಗಳಿಂದ ವಿಶೇಷ ಸ್ಥಾನ ಮಾನ ಮುಂದುವರಿಸಿದ್ದು ಕೇವಲ ಮತ ಬ್ಯಾಂಕಿಗಾಗಿ ಎಂಬುದು ಈಗ ಸ್ಪಷ್ಟವಾಗಿದೆ ಎಂದರು.

ಜನ ಮನ್ನಣೆ
: ನೋಟ್‌ ಬ್ಯಾನ್‌ ಮೂಲಕ ದೇಶದ ಜನತೆಯ ಮನ ಗೆದ್ದಿದ್ದ ಮೋದಿ ಅವರು ಈಗ ಜಮ್ಮು ಕಾಶ್ಮೀರವನ್ನು ದೇಶದಲ್ಲಿ ವಿಲೀನ ಮಾಡುವ ಮೂಲಕ ಮತ್ತೊಮ್ಮೆ ದೇಶದ ಪ್ರಜೆಗಳ ಜನ ಮನ್ನಣೆ ಪಡೆದಿದ್ದಾರೆ ಎಂದು ಹೇಳಿದರು.

ವಿಜಯೋತ್ಸವದಲ್ಲಿ ಬಿಜೆಪಿ ಮುಖಂಡ ಪಿ.ಎಂ.ರಘು, ಬಿಜೆಪಿ ಎಸ್ಸಿ ಮೋರ್ಚಾ ಜಿಲ್ಲಾಧ್ಯP್ಷÜ ಹನುಮಂತಪ್ಪ, ಯುವ ಮೋರ್ಚಾ ನಗರಾಧ್ಯP್ಷÜ ಮಧುಚಂದ್ರ, ಪ್ರಧಾನ ಕಾರ್ಯದರ್ಶಿ ಮನೋಜ್‌, ಉಪಾಧ್ಯP್ಷÜ ಪ್ರಮೋದ್‌, ಗಂಗಾಧರ್‌, ವಿಜಯ್‌ ಕುಮಾರ್‌, ಮುನಿರಾಮ್‌, ಶ್ರೀನಿವಾಸ್‌ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ