ಆ್ಯಪ್ನಗರ

ಭೂ ಕುಸಿತ: ರಸ್ತೆ ಕಾಮಗಾರಿ ಮುಗಿಯುವುದೆಂತು, ಆ 'ನಂದಿ'ಗೇ ಗೊತ್ತು

ರಸ್ತೆ ನಿರ್ಮಾಣಕ್ಕೆ ಇನ್ನೂ 1 ತಿಂಗಳು ಬೇಕಾಗಿದ್ದು, ಸರಕಾರದ ಅನುಮತಿಯ ನಿರೀಕ್ಷೆಯಲ್ಲಿದೆ. ಭಾರಿ ಮಳೆ ಹಿನ್ನೆಲೆ ಆ.24 ರಂದು ನಂದಿ ಬೆಟ್ಟದ ರಸ್ತೆ ಕುಸಿದಿತ್ತು. ಒಂದೇ ದಿನದಲ್ಲಿ ತಾತ್ಕಾಲಿಕವಾಗಿ ನಿರ್ಮಿಸಿದ್ದ ರಸ್ತೆ್ತಯೂ ಕೊಚ್ಚಿ ಹೋಗಿತ್ತು.

Vijaya Karnataka Web 18 Sep 2021, 1:57 pm
ಕಣಿತಹಳ್ಳಿ ಎನ್‌ ಚಂದ್ರೇಗೌಡ, ಚಿಕ್ಕಬಳ್ಳಾಪುರ
Vijaya Karnataka Web ನಂದಿ ಬೆಟ್ಟ ರಸ್ತೆ
ನಂದಿ ಬೆಟ್ಟ ರಸ್ತೆ


ನಂದಿಬೆಟ್ಟದಲ್ಲಿ ವೀಕೆಂಡ್‌ ಬಂದರೆ ಪ್ರವಾಸಿ ಗರು ತುಂಬಿ ತುಳುಕುತ್ತಿದ್ದರು. ರಸ್ತೆ ತುಂಬೆಲ್ಲಾ ಬೈಕ್‌ಗಳು, ಕಾರುಗಳ ಕಾರುಬಾರು ಇರು ತ್ತಿತ್ತು. ಆದರೆ ಕಳೆದ ಆ.24ರಂದು ಸಂಭವಿಸಿದ ಭೂ ಕುಸಿತದಿಂದ ಇದಕ್ಕೆಲ್ಲಾ ಬ್ರೇಕ್‌ ಬಿದ್ದಿದೆ.

ಸದ್ಯದ ಅಂದಾಜಿನ ಪ್ರಕಾರ, ರಸ್ತೆ ನಿರ್ಮಾಣಕ್ಕೆ ಇನ್ನೂ 1 ತಿಂಗಳು ಬೇಕಾಗಿದ್ದು, ಸರಕಾರದ ಅನುಮತಿಯ ನಿರೀಕ್ಷೆಯಲ್ಲಿದೆ. ಭಾರಿ ಮಳೆ ಹಿನ್ನೆಲೆ ಆ.24 ರಂದು ನಂದಿ ಬೆಟ್ಟದ ರಸ್ತೆ ಕುಸಿದಿತ್ತು. ಒಂದೇ ದಿನದಲ್ಲಿ ತಾತ್ಕಾಲಿಕವಾಗಿ ನಿರ್ಮಿಸಿದ್ದ ರಸ್ತೆ್ತಯೂ ಕೊಚ್ಚಿ ಹೋಗಿತ್ತು. ಹೀಗಾಗಿ ಸಾದಾ ರಸ್ತೆ ನಿರ್ಮಿಸಿದರೆ ಇದು ಆಗಲ್ಲಎಂಬ ಅಭಿಪ್ರಾಯದಿಂದ ಈಗ ಸುಮಾರು 80 ಲಕ್ಷ ರೂ. ವೆಚ್ಚದಲ್ಲಿ ಫ್ಲೈಓವರ್‌ ನಿರ್ಮಿಸಲು ವರದಿ ತಯಾರಿಸಿ ಸರಕಾರಕ್ಕೆ ಅನುಮೋದನೆಗಾಗಿ ಕಳುಹಿಸಲಾಗಿದೆ.

ಸಿದ್ಧವಾಗಿದೆ ಯೋಜನಾ ವರದಿ

ಇನ್ನೊಂ ದು ವಾರ ಕಳೆದರೆ ನಂದಿಬೆಟ್ಟದಲ್ಲಿ ಭೂ ಕುಸಿತ ವಾಗಿ 1 ತಿಂಗಳಾಗುತ್ತದೆ. ತಾತ್ಕಾಲಿಕ ರಸ್ತೆ ನಿರ್ಮಾಣವಾದರೆ ಮತ್ತೆ ಅದೇ ಪರಿಸ್ಥಿತಿ ಎದುರಾಗುವ ಆತಂಕದಿಂದ ಫ್ಲೈಓವರ್‌ ನಿರ್ಮಿ ಸಲು ಲೋಕೋಪಯೋಗಿ ಇಲಾಖೆ ಮುಂದಾಗಿದೆ. ಈಗಾಗಲೇ ಲೋಕೋಪಯೋಗಿ ಇಲಾಖೆಯ ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷ ಜಯಪ್ರಕಾಶ್‌ ಸೇರಿದಂತೆ ಹಲವರು ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ವರದಿ ತಯಾರಿಸಿ ಅನುಮೋದನೆಗಾಗಿ ರಾಜ್ಯ ಸರಕಾರಕ್ಕೆ ಸಲ್ಲಿಸಲಾಗಿದೆ.

ರಸ್ತೆ ಹಾಳಾಗದಂತೆ ಯೋಜನೆ

ಬೆಟ್ಟದ ಮೇಲಿನಿಂದ ಹರಿದು ಬರುವ ನೀರಿನ ರಭಸ ತಾಳಲಾರದೆ ರಸ್ತೆ ಹಾಳಾಗುವುದು ಸಹಜ. ಹೀಗಾಗಿ 40 ಮೀಟರ್‌ ಉದ್ದದ ಸ್ಟೀಲ್‌ ಬ್ರಿಡ್ಜ್‌ ನಿರ್ಮಾಣವಾಗಲಿದೆ. ಅಲ್ಲದೆ, 5-6 ಪೈಪ್‌ಗಳನ್ನು ಅಳವಡಿಸಿ ಅದರ ಮೇಲೆ ಕಾಂಕ್ರಿಟ್‌ ರಸ್ತೆ ಬರಲಿದ್ದು ಬೆಟ್ಟದ ಮೇಲಿನಿಂದ ಬರುವ ನೀರು ಸರಾಗವಾಗಿ ಹರಿದು ಹೋಗಲಿದೆ. ರಸ್ತೆ ಮತ್ತೆ ಹಾಳಾಗದಂತೆ ತಡೆಯಬೇಕಾದರೆ ಇದು ಅನಿವಾರ್ಯವಾಗಿದ್ದು, ತಡವಾದರೂ ಅವಘಡ ಸಂಭವಿಸಿದಂತೆ ಮಾಡಬೇಕು ಎಂಬುದು ಯೋಜನೆಯ ಉದ್ದೇಶ.

ಕಾಮಗಾರಿಗೆ ಬೇಕು ತಿಂಗಳು

ಸ್ಟೀಲ್‌ ಬ್ರಿಡ್ಜ್‌ ನಿರ್ಮಾಣ ಸಂಬಂಧ ಈಗಾಗಲೇ ವರದಿ ತಯಾರಿಸಿ ಅನುಮೋದನೆಗಾಗಿ ಸರಕಾರಕ್ಕೆ ಸಲ್ಲಿಸಲಾಗಿದ್ದು ಶೀಘ್ರವೇ ಅನುಮತಿ ಸಿಗುವ ನಿರೀಕ್ಷೆಯಲ್ಲಿಅಧಿಕಾರಿಗಳಿದ್ದಾರೆ. 4ಜಿ ಅಡಿ ವಿನಾಯಿತಿ ಪಡೆದು ರಸ್ತೆ ನಿರ್ಮಾಣಕ್ಕೆ ಕಸರತ್ತು ನಡೆದಿದೆ.

ಅನುಮತಿ ಸಿಕ್ಕ ಮೇಲೆ ರಸ್ತೆ ನಿರ್ಮಾಣಕ್ಕೆ ಕನಿಷ್ಠ 1 ತಿಂಗಳು ಅವಧಿ ಬೇಕಾಗಲಿದೆ. ಅದು ಯಾವುದೇ ಪ್ರಕೃತಿ ವಿಕೋಪಗಳು ಎದುರಾಗದಿದ್ದರೆ. ಸದ್ಯಕ್ಕೆ ಇನ್ನೊಂದು ತಿಂಗಳ ಮಟ್ಟಿಗೆ ನಂದಿಬೆಟ್ಟಕ್ಕೆ ಪ್ರವೇಶ ನಿರ್ಬಂಧ ಇರುತ್ತದೆ. ದ್ವಿಚಕ್ರ ವಾಹನಗಳೇ ಆಧಾರ: ಸದ್ಯಕ್ಕೆ ನಂದಿಬೆಟ್ಟದಲ್ಲಿ ಬಹುತೇಕ ಅಂಗಡಿ ಮತ್ತು ಹೋಟೆಲ್‌ಗಳನ್ನು ಮುಚ್ಚಲಾಗಿದ್ದು, ಬೆಟ್ಟಕ್ಕೆ ಹೋಗಬೇಕಾದರೆ ದ್ವಿಚಕ್ರ ವಾಹನಗಳಲ್ಲೇ ಸರ್ಕಸ್‌ ಮಾಡಿ ಮೇಲತ್ತಬೇಕು. ತೋಟಗಾರಿಕೆ ಇಲಾಖೆ ಅಧಿಕಾರಿಗಳು ಹಾಗೂ ನಿರ್ವ ಹಣಾ ಸಿಬ್ಬಂದಿ ಪ್ರತಿನಿತ್ಯ ದ್ವಿಚಕ್ರ ವಾಹನಗಳಲ್ಲೇ ಬೆಟ್ಟಕ್ಕೆ ಹೋಗಬೇಕಿದೆ. ಸ್ಟೀಲ್‌ ಬ್ರಿಡ್ಜ್‌ ನಿರ್ಮಾಣವಾಗುವ ತನಕ ದ್ವಿಚಕ್ರ ವಾಹನ ಗಳಲ್ಲೇ ಹೋಗಬೇಕಿದೆ. ಆದಷ್ಟು ಬೇಗ ರಸ್ತೆ ನಿರ್ಮಾಣವಾಗಲಿ. ನಂದಿಬೆಟ್ಟದ ಸೌಂದರ್ಯವನ್ನು ಕಣ್ಣುಗಳು ತುಂಬಿಕೊಳ್ಳಲಿ ಎಂಬುದು ಪ್ರವಾಸಿಗರ ಆಶಯಯವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ