ಆ್ಯಪ್ನಗರ

ಮನೆಗೆ ನುಗ್ಗಿ ಮಹಿಳೆ ಮೇಲೆ ಹಲ್ಲೆ ನಡೆಸಿ ದರೋಡೆ

ಮನೆಯಲ್ಲಿ ಮಹಿಳೆ ಒಬ್ಬಳೆ ಇರುವುದನ್ನೆ ಗುರಿಯಾಗಿಸಿಕೊಂಡ ಚೋರರು ಮನೆಗೆ ನುಗ್ಗಿ ಮಹಿಳೆಯ ಮೇಲೆ ಹಲ್ಲೆ ನಡೆಸಿ ಶೌಚಾಲಯದಲ್ಲಿ ಕೂಡಿ ಹಾಕಿ ಕತ್ತಿನಲ್ಲಿದ್ದ ಚಿನ್ನದ ಸರ, ಕಿವಿಯ ಓಲೆ ಹಾಗೂ ಮನೆಯಲ್ಲಿದ್ದ ಉಂಗುರಗಳನ್ನು ಕದ್ದು ಪರಾರಿಯಾಗಿದ್ದಾರೆ.

Vijaya Karnataka 8 Jun 2018, 5:00 am
ಶಿಡ್ಲಘಟ್ಟ: ಮನೆಯಲ್ಲಿ ಮಹಿಳೆ ಒಬ್ಬಳೆ ಇರುವುದನ್ನೆ ಗುರಿಯಾಗಿಸಿಕೊಂಡ ಚೋರರು ಮನೆಗೆ ನುಗ್ಗಿ ಮಹಿಳೆಯ ಮೇಲೆ ಹಲ್ಲೆ ನಡೆಸಿ ಶೌಚಾಲಯದಲ್ಲಿ ಕೂಡಿ ಹಾಕಿ ಕತ್ತಿನಲ್ಲಿದ್ದ ಚಿನ್ನದ ಸರ, ಕಿವಿಯ ಓಲೆ ಹಾಗೂ ಮನೆಯಲ್ಲಿದ್ದ ಉಂಗುರಗಳನ್ನು ಕದ್ದು ಪರಾರಿಯಾಗಿದ್ದಾರೆ.
Vijaya Karnataka Web woman attacked and robbed in her home
ಮನೆಗೆ ನುಗ್ಗಿ ಮಹಿಳೆ ಮೇಲೆ ಹಲ್ಲೆ ನಡೆಸಿ ದರೋಡೆ


ತಾಲೂಕಿನ ಜಂಗಮಕೋಟೆಯ ನಟರಾಜ್‌ ಎಂಬುವವರ ತಾಯಿ ಚನ್ನಮ್ಮ(65) ಮನೆಯಲ್ಲಿ ಒಂಟಿಯಾಗಿರುವುದನ್ನು ಗಮನಿಸಿ ಒಳ ನುಗ್ಗಿದ ಕಳ್ಳರು ಆಕೆಯ ಮೇಲೆ ಹಲ್ಲೆ ನಡೆಸಿ ಶೌಚಾಲಯದಲ್ಲಿ ಕೂಡಿ ಹಾಕಿ ಆಕೆಯ ಕತ್ತಿನಲ್ಲಿದ್ದ 65 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರ, 10 ಗ್ರಾಂ ತೂಕದ ಓಲೆಗಳು ಹಾಗೂ ಮನೆಯಲ್ಲಿದ್ದ 3 ಉಂಗುರಗಳನ್ನು ಕದ್ದು ಪರಾರಿ ಆಗಿದ್ದಾರೆ.

ನಟರಾಜ್‌ ತಮ್ಮ ಮಗನನ್ನು ಶಾಲೆಯಿಂದ ಕರೆದುಕೊಂಡು ಮನೆಗೆ ಬಿಡಲು ಬಂದಾಗ ಮನೆಯ ಶೌಚಾಲಯದಲ್ಲಿ ಸದ್ದು ಕೇಳಿ ಬಂದಿದ್ದು ನೋಡಿದಾಗ ಅವರ ತಾಯಿ ಪ್ರಜ್ಞೆ ತಪ್ಪಿ ಬಿದ್ದಿದ್ದು ಗಮನಿಸಿದ್ದಾರೆ. ಕತ್ತಿನ ಬಳಿ ತೀವ್ರ ಗಾಯವಾಗಿದ್ದು ರಕ್ತಸ್ರಾವ ಆಗಿದೆ.

ಕೂಡಲೆ ಆಕೆಯನ್ನು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಆಸ್ಪತ್ರೆಗೆ ಬೆಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಚನ್ನಮ್ಮನವರ ಮಗ ನಟರಾಜ್‌ ಹಾಗೂ ಆತನ ಪತ್ನಿ ಪ್ರಾವಿಷನ್‌ ಸ್ಟೋರ್‌ ಇಟ್ಟಿದ್ದು ಅದರಲ್ಲಿದ್ದರು, ಪತಿ ತೋಟಕ್ಕೆ ಹೋಗಿದ್ದು ಮನೆಯಲ್ಲಿ ಚನ್ನಮ್ಮ ಮಾತ್ರ ಇದ್ದರು.

ಸುಮಾರು 90 ಗ್ರಾಂ ತೂಕದ ಚಿನ್ನಾಭರಣಗಳನ್ನು ಕದ್ದೊಯ್ದಿದ್ದು, ಸ್ಥಳಕ್ಕೆ ಶ್ವಾನದಳ ಹಾಗೂ ಬೆರಳಚ್ಚು ತಜ್ಞರ ತಂಡ ಭೇಟಿ ನೀಡಿದೆ. ಸಿಪಿಐ ಬಿ.ಸಿದ್ದರಾಜು ಹಾಗೂ ಎಸ್‌ಐ ನವೀನ್‌ ಸ್ಥಳಕ್ಕೆ ಭೇಟಿ ನೀಡಿದ್ದು ಪರಿಶೀಲಿಸಿದ್ದಾರೆ.

ಎಷ್ಟು ಮಂದಿ ಕಳ್ಳರು ಬಂದಿದ್ದರು, ಏನು ಕೇಳುವ ನೆಪದಲ್ಲಿ ಮನೆಗೆ ನುಗ್ಗಿದರು ಎಂಬಿತ್ಯಾದಿ ವಿವರಗಳು ಸಂಪೂರ್ಣವಾಗಿ ಇನ್ನೂ ತಿಳಿದುಬಂದಿಲ್ಲ. ತೀವ್ರ ರಕ್ತಸ್ರಾವದಿಂದ ನಿತ್ರಾಣಗೊಂಡಿರುವ ಚನ್ನಮ್ಮ ಚೇತರಿಸಿಕೊಂಡ ಮೇಲಷ್ಟೆ ಸಂಪೂರ್ಣ ವಿವರ ತಿಳಿದುಬರಲಿದೆ.

ಸದ್ಯಕ್ಕೆ ಚನ್ನಮ್ಮನ ಪುತ್ರ ನಟರಾಜ್‌ ನೀಡಿರುವ ಹೇಳಿಕೆ ಆಧಾರದಲ್ಲಿ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ