ಆ್ಯಪ್ನಗರ

ದಾರುಣ: ಮಗು ಸಮೇತ ಆತ್ಮಹತ್ಯೆಗೆ ಯತ್ನಿಸಿ ಕೈಕಾಲು ಕಳೆದುಕೊಂಡ ತಾಯಿ

ಸಾವನ್ನು ಬಯಸಿ ಹೋದ ಆಕೆ ಈಗ ಶಾಶ್ವತ ಅಂಗವಿಕಲತೆಯನ್ನು ಎದುರಿಸಬೇಕಾಗಿದೆ.

Vijaya Karnataka Web 26 Sep 2019, 2:39 pm
ಚಿಂತಾಮಣಿ : ಕೌಟುಂಬಿಕ ಕಲಹದಿಂದ ಬೇಸತ್ತ ತಾಯಿಯೊಬ್ಬಳು ಆತ್ಮಹತ್ಯೆಗೆ ಯತ್ನಿಸಿ ಕೈಕಾಲು ಕಳೆದುಕೊಂಡ ದಾರುಣ ಘಟನೆ ತಾಲೂಕಿನ‌ ಕರಿಯಪಲ್ಲಿ ಬಳಿ ನಡೆದಿದೆ. ಮಗುವಿಗೂ ಗಂಭೀರ ಗಾಯಗಳಾಗಿದ್ದು ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
Vijaya Karnataka Web S Attempt


ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯನ್ನು ಪಲ್ಲಿಗಡ್ಡ ಗ್ರಾಮದ ಚಂದ್ರಕಲಾ ಮತ್ತು ಆಕೆಯ ಮಗುವನ್ನು ದಿವ್ಯಶ್ರೀ ಎಂದು ಗುರುತಿಸಲಾಗಿದೆ.

ಪತಿಯೊಂದಿಗಿನ ಮನಸ್ತಾಪದಿಂದ ನೊಂದಿದ್ದ ಚಂದ್ರಕಲಾ ಇಂದು ಮುಂಜಾನೆ 6 ಗಂಟೆ ಸುಮಾರಿಗೆ ರೈಲ್ವೆ ಹಳಿಯ ಮೇಲೆ ಮಲಗಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ರೈಲು ಬರುತ್ತಿದ್ದಂತೆ ಅದರಡಿಗೆ ಹಾರಿದ ಆಕೆಯ ಕೈಕಾಲು ಮುರಿದಿದ್ದು , ಮಗುವಿಗೆ ಕೂಡ ಗಂಭೀರ ಗಾಯಗಳಾಗಿವೆ.

ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಚಿಂತಾಮಣಿ ರೈಲು ನಿಲ್ದಾಣದ ಅಧಿಕಾರಿ ಅಮರೇಶ್ ಮತ್ತು ಕೀ ಮ್ಯಾನ್ ನಾರಾಯಣ ಸ್ವಾಮಿ ತಾಯಿ ಮಗುವನ್ನು ನಗರದ ಸಾರ್ವಜನಿಕ ಆಸ್ಪತ್ರೆಗೆ ಸೇರಿಸಿದ್ದಾರೆ.

ಬಾರದ ಕುಟುಂಬಸ್ಥರು
: ಚಂದ್ರಕಲಾ ಆತ್ಮಹತ್ಯೆಗೆ ಬಗ್ಗೆ ಪತಿ ಅಮರನಾಥ ರವರಿಗೆ ದೂರವಾಣಿ ಮೂಲಕ‌ ಮಾಹಿತಿ ನೀಡಿದರೂ ಸ್ಥಳಕ್ಕೆ ಬಾರದೇ ಇರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ