ಆ್ಯಪ್ನಗರ

ಆಂಧ್ರದಲ್ಲಿ ವೈಎಸ್‌ಆರ್‌ ಪಾರ್ಟಿ ಗೆಲ್ಲುವ ವಿಶ್ವಾಸ

ಈ ಬಾರಿ ಆಂಧ್ರದಲ್ಲಿ ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷ ದ್ದೇ ಗೆಲುವು. ವೈಎಸ್‌ಆರ್‌ ಅವರ ಜನಪರವಾದ ಕಾರ್ಯಕ್ರಮಗಳನ್ನು ಮೆಚ್ಚಿ ಜನ ಈ ಬಾರಿ ವೈ.ಎಸ್‌.ಜಗನ್‌ ಅವರಿಗೆ ಅಧಿಕಾರ ಕೊಡುತ್ತಾರೆ ಎಂದು ಆಂಧ್ರಪ್ರದೇಶದ ತಂಬಳ್ಳಪಲ್ಲಿ ವಿಧಾನಸಭೆ ಕ್ಷೇತ್ರದ ವೈಎಸ್‌ಆರ್‌ ಕಾಂಗ್ರೆಸ್‌ ಅಭ್ಯರ್ಥಿ ದ್ವಾರಕಾನಾಥ್‌ ರೆಡ್ಡಿ ವಿಶ್ವಾಸ ವ್ಯಕ್ತಪಡಿಸಿದರು.

Vijaya Karnataka 17 May 2019, 5:00 am
ಚಿಂತಾಮಣಿ: ಈ ಬಾರಿ ಆಂಧ್ರದಲ್ಲಿ ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷ ದ್ದೇ ಗೆಲುವು. ವೈಎಸ್‌ಆರ್‌ ಅವರ ಜನಪರವಾದ ಕಾರ್ಯಕ್ರಮಗಳನ್ನು ಮೆಚ್ಚಿ ಜನ ಈ ಬಾರಿ ವೈ.ಎಸ್‌.ಜಗನ್‌ ಅವರಿಗೆ ಅಧಿಕಾರ ಕೊಡುತ್ತಾರೆ ಎಂದು ಆಂಧ್ರಪ್ರದೇಶದ ತಂಬಳ್ಳಪಲ್ಲಿ ವಿಧಾನಸಭೆ ಕ್ಷೇತ್ರದ ವೈಎಸ್‌ಆರ್‌ ಕಾಂಗ್ರೆಸ್‌ ಅಭ್ಯರ್ಥಿ ದ್ವಾರಕಾನಾಥ್‌ ರೆಡ್ಡಿ ವಿಶ್ವಾಸ ವ್ಯಕ್ತಪಡಿಸಿದರು.
Vijaya Karnataka Web ysr party hopes to win in andhra
ಆಂಧ್ರದಲ್ಲಿ ವೈಎಸ್‌ಆರ್‌ ಪಾರ್ಟಿ ಗೆಲ್ಲುವ ವಿಶ್ವಾಸ


ನಗರದಲ್ಲಿ ದಿ. ಕೆ.ಎಂ.ಕೃಷ್ಣಾರೆಡ್ಡಿ ಅವರ ನಿವಾಸದಲ್ಲಿ ಪುತ್ರ ಕೆ.ಎಂ.ರಾಜಶೇಖರ ರೆಡ್ಡಿ ಮತ್ತು ಅನುಯಾಯಿಗಳನ್ನು ಭೇಟಿಯಾಗಿ ನಂತರ ಮಾಧ್ಯಮದೊಂದಿಗೆ ಅವರು ಮಾತನಾಡಿದರು.

ದಿ. ಕೆ.ಎಂ.ಕೃಷ್ಣಾರೆಡ್ಡಿ ಅವರು ನಮ್ಮ ಸಹೋದರ ಮತ್ತು ಆಂಧ್ರಪ್ರದೇಶದ ವಿಧಾನಸಭೆ ಕ್ಷೇತ್ರದ ಎಂಎಲ್‌ಎ ಪೆದ್ದಿರೆಡ್ಡಿ ಅವರೊಂದಗಿಎ ಆತ್ಮೀಯ ಸಂಬಂಧವನ್ನು ಹೊಂದಿದ್ದರು. ಆ ಸಂಬಂಧ ಈಗಲೂ ಮುಂದುವರಿದಿದ್ದು, ಆ ಭಾಗದಲ್ಲಿ ದಿ.ಕೆಎಂಕೆ ಅವರ ಸೇವೆ ನಮಗೆ ಮಾದರಿಯಾಗಿದೆ ಎಂದರು.

ಈ ಸಂದರ್ಭದಲ್ಲಿ ಕೆ.ಎಂ.ರಾಜಶೇಖರ ರೆಡ್ಡಿ, ಅಬ್ಬುಗುಂಡು ನಾಗರಾಜ ರೆಡ್ಡಿ, ಮಂಜು, ದೇವಳಂ ಶಂಕರ್‌, ರೆಡ್ಡಪ್ಪ, ಮಟ್ಟ ಶ್ರೀನಿವಾಸಮೂರ್ತಿ, ಕುಬೇರಾ ವೆಂಕಟೇಶ್‌, ರಾಗುಟ್ಟಹಳ್ಳಿ ಶ್ರೀನಿವಾಸ್‌, ರಾಜಶೇಖರ ರೆಡ್ಡಿ, ರವಿಚಂದ್ರ ರೆಡ್ಡಿ, ವೆಂಕಟ ರೆಡ್ಡಿ, ಸಂದೀಪ್‌ ರೆಡ್ಡಿ ಮುಂತಾದವರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ