ಆ್ಯಪ್ನಗರ

ಮಲೆನಾಡು ಉತ್ಸವದಿಂದ ದೇಶಿ ಕಲೆ ರಕ್ಷಣೆ

ಮಲೆನಾಡು ಉತ್ಸವದ ಮೂಲಕ ಸಾಂಸ್ಕೃತಿಕ ಸಂಘಟನೆಯ ವೈಶಿಷ್ಟ್ಯಕ್ಕೆ ನಾಡಿನ ಗಮನ ಸೆಳೆಯುತ್ತಿರು ವುದು ಉತ್ತಮ ಬೆಳವಣಿಗೆ ಎಂದು ಚಲನಚಿತ್ರ ನಿರ್ಮಾಪಕ ರಘುನಾಥ್ ಹೇಳಿದರು.

ವಿಕ ಸುದ್ದಿಲೋಕ 1 Mar 2016, 5:27 am
ಶೃಂಗೇರಿ: ಮಲೆನಾಡು ಉತ್ಸವದ ಮೂಲಕ ಸಾಂಸ್ಕೃತಿಕ ಸಂಘಟನೆಯ ವೈಶಿಷ್ಟ್ಯಕ್ಕೆ ನಾಡಿನ ಗಮನ ಸೆಳೆಯುತ್ತಿರು ವುದು ಉತ್ತಮ ಬೆಳವಣಿಗೆ ಎಂದು ಚಲನಚಿತ್ರ ನಿರ್ಮಾಪಕ ರಘುನಾಥ್ ಹೇಳಿದರು.
Vijaya Karnataka Web
ಮಲೆನಾಡು ಉತ್ಸವದಿಂದ ದೇಶಿ ಕಲೆ ರಕ್ಷಣೆ


ಅವರು ಭಾನುವಾರ ಪಟ್ಟಣದ ಗೌರಿಶಂಕರ್ ಸಭಾಂಗಣದಲ್ಲಿ ಆಯೋಜಿಸಿದ್ದ ಮಲೆನಾಡು ಉತ್ಸವದಲ್ಲಿ ಮಲೆನಾಡು ಉತ್ಸವ ಸಮರ್ಪಣಾ ಗೌರವ ಸ್ವೀಕರಿಸಿ ಮಾತನಾಡಿದರು.

ಮಲೆನಾಡು ಉತ್ಸವ ಮಲೆನಾಡಿಗರ ಅಭಿರುಚಿ ಪ್ರತೀಕವಾಗಿದ್ದು ಇದರ ದೇಸೀ ತನದಿಂದ ಸಂಸ್ಕೃತಿ ಸಂರಕ್ಷಣೆಯಾಗುತ್ತಿದೆ. ಇದು ಮಲೆನಾಡಿನ ಕಲೆಗಳಿಗೆ ಪ್ರೋತ್ಸಾಹ ನೀಡುತ್ತಿದ್ದು, ಈ ಉತ್ಸವ ಮಲೆನಾಡನ್ನು ದಾಟಿ ರಾಜ್ಯ, ದೇಶ ಮತ್ತು ವಿಶ್ವಮಟ್ಟದಲ್ಲಿ ಬೆಳೆಯಲಿ ಎಂದರು.

ಯಕ್ಷಗಾನ ಸಂಘಟಕ ಮಣೂರು ವಾಸುದೇವಮಯ್ಯ ಬೀಸುಕಲ್ಲಿನಲ್ಲಿ ಅಕ್ಕಿ ಬೀಸುವ ಮೂಲಕ ಉತ್ಸವವನ್ನು ವಿಶಿಷ್ಟ ವಾಗಿ ಉದ್ಘಾಟಿಸಿ ಮಾತನಾಡಿ, ಮಲೆ ನಾಡು ಉತ್ಸವದ ವೇದಿಕೆ ಪ್ರತಿ ವರ್ಷ ಇವುಗಳ ಸಂಗಮ ರೂಪವಾಗಿ ಮೂಡಿ ಬರುತ್ತಿರುವುದು ಮಾದರಿಯಾಗಿದೆ ಎಂದರು.

ಇದೇ ಸಂದರ್ಭ ಕಲ್ಕುಳಿ ದೇವೇಂದ್ರ ಹೆಗ್ಡೆ ಸ್ಮಾರಕ ಕೃಷಿ ಪ್ರಶಸ್ತಿಯನ್ನು ತೀರ್ಥಹಳ್ಳಿಯ ಪ್ರಗತಿಪರ ಕೃಷಿಕ ಕೂಳೂರು ಸತ್ಯನಾರಾಯಣ್ ಅವರಿಗೆ ಪ್ರದಾನ ಮಾಡಲಾಯಿತು.

ಪ್ರಶಸ್ತಿ ಸ್ವೀಕರಿಸಿ ಸತ್ಯನಾರಾಯಣ್ ಮಾತನಾಡಿ, ಅಡಕೆ ಬೆಳೆಗಾರರ ಕಾರ್ಮಿಕ ಸಮಸ್ಯೆಗೆ ಆಧುನಿಕ ತಂತ್ರಜ್ಞಾನದಲ್ಲಿ ಪರಿಹಾರವಿದ್ದು ರೈತರು ಪರಿಷ್ಕೃತ ತಾಂತ್ರಿಕತೆಯ ಮೊರೆ ಹೋಗಬೇಕೆಂದರು.ಕಲ್ಕಟ್ಟೆ ಮಲ್ಲೇಶರಾವ್ ಅವರ ಸಂಸ್ಮರಣಾ ನುಡಿಯನ್ನು ನಾಗೇಂದ್ರ ಭಟ್ ನೆರವೇರಿಸಿ ದರು. ರಂಗಭೂಮಿ ಕಲಾವಿದ ಬಿ.ಎಲ್. ರವಿಕುಮಾರ್ ಪ್ರಾಸ್ತಾವಿಕ ಮಾತ ನಾಡಿದರು. ಕಲ್ಕುಳಿ ಜಗದೀಶ ಹೆಗ್ಡೆ, ರೇಖಾ ನಾಗರಾಜ್ ರಾವ್ ಹಾಜರಿದ್ದರು. ಸಂಘಟಕ ರಮೇಶ್ ಬೇಗಾರ್ ನಿರೂಪಿಸಿ, ಸುಬ್ರಹ್ಮಣ್ಯ ಆಚಾರ್ ವಂದಿಸಿದರು. ಶ್ರೀ ಭಾರತೀತೀರ್ಥ ಸಾಂಸ್ಕೃತಿಕ ಮತ್ತು ಜಾನಪದ ಅಧ್ಯಯನ ಕೇಂದ್ರ ಟ್ರಸ್ಟ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಉತ್ಸವ ಆಯೋಜಿಸಿದೆ.

ಕಳೆಗಟ್ಟಿದ ನೃತ್ಯ ನಾಟಕ, ಕೊಳಲ ನಾದ: ಉತ್ಸವದಲ್ಲಿ ಮಂಗಳೂರಿನ ಚಿದಂಬರ ಕಾಕತ್ಕರ್ ಕೊಳಲಿನಲ್ಲಿ ಹಳೆ ಚಿತ್ರ ಗೀತೆಗಳನ್ನು ನುಡಿಸಿ ನೆನಪಿನ ನಾದ ಕಟ್ಟಿದರು. ಮಧುರ ಮಧುರವೀ ಮಂಜುಳಗಾನ, ಮಂಗಳದ ಈ ಸುದಿನ, ದೋಣಿಸಾಗಲಿ ಮುಂತಾದ ಹಾಡುಗಳಿಗೆ ಪ್ರೇಕ್ಷಕರ ಕರ ತಾಂಡನ ಸಾಕ್ಷಿಯಾಯಿತು. ನಂತರ ಬೆಂಗಳೂರಿನ ಸೂರ್ಯ ಕಲಾವಿದರಾದ ವಿಕ್ರಂಸೂರಿ ಹಾಗೂ ನಮಿತಾ ರಾವ್ ತಂಡದಿಂದ ಮೋಹಿನಿ- ಭಸ್ಮಾಸುರ, ಪುಣ್ಯಕೋಟಿ ಎಂಬ ಎರಡು ನೃತ್ಯ ನಾಟಕಗಳು ಆಕರ್ಷಣೀಯವಾಗಿ ಪ್ರದರ್ಶನಗೊಂಡಿತು. ಖ್ಯಾತ ಕಿರುತೆರೆ ನಟಿ ನಮಿತಾ ರಾವ್ ಅವರು ಮೋಹಿನಿ ಹಾಗೂ ಪುಣ್ಯಕೋಟಿಯ ಎರಡು ವೈವಿಧ್ಯಮಯ ಪಾತ್ರಗಳನ್ನು ನಿರೂಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ