ಆ್ಯಪ್ನಗರ

ನೀರೆತ್ತುವುದನ್ನು ತಡೆಯದಂತೆ ರೈತರ ಮನವಿ

ರೈತರು ಕೃಷಿ ಉದ್ದೇಶಗಳಿಗಾಗಿ ಅಳವಡಿಸಿರುವ ಪಂಪ್‌ಸೆಟ್‌ಗಳನ್ನು ನಿಷೇಧಿಸಿ ನೀರೆತ್ತದಂತೆ ತಡೆಯಬಾರದು ಎಂದು ತಾಲೂಕು ರೈತ ಸಂಘ ಸೋಮವಾರ ತಹಸೀಲ್ದಾರ್ ಶಾರದಾಂಬ ಅವರಿಗೆ ಮನವಿ ಸಲ್ಲಿಸಿತು.

ವಿಕ ಸುದ್ದಿಲೋಕ 6 Apr 2016, 5:22 am
ಶೃಂಗೇರಿ: ರೈತರು ಕೃಷಿ ಉದ್ದೇಶಗಳಿಗಾಗಿ ಅಳವಡಿಸಿರುವ ಪಂಪ್‌ಸೆಟ್‌ಗಳನ್ನು ನಿಷೇಧಿಸಿ ನೀರೆತ್ತದಂತೆ ತಡೆಯಬಾರದು ಎಂದು ತಾಲೂಕು ರೈತ ಸಂಘ ಸೋಮವಾರ ತಹಸೀಲ್ದಾರ್ ಶಾರದಾಂಬ ಅವರಿಗೆ ಮನವಿ ಸಲ್ಲಿಸಿತು.
Vijaya Karnataka Web
ನೀರೆತ್ತುವುದನ್ನು ತಡೆಯದಂತೆ ರೈತರ ಮನವಿ


ರೈತ ಸಂಘದ ಅಧ್ಯಕ್ಷ ಕೆಲವಳ್ಳಿ ಗುಂಡಪ್ಪ ಮಾತನಾಡಿ, ಜಿಲ್ಲಾಧಿಕಾರಿಗಳು ಹಳ್ಳ ಮತ್ತು ನದಿಗಳಲ್ಲಿ ನೀರೆತ್ತುವುದನ್ನು ನಿಷೇಧಿಸಿ ಆದೇಶಿಸಿದ್ದಾರೆ. ಬೇಸಿಗೆಯಲ್ಲಿ ತೋಟಗಾರಿಕಾ ಬೆಳೆಗಳಿಗೆ ನೀರು ಹೆಚ್ಚು ಅಗತ್ಯವಾಗಿದ್ದು, ನೀರು ಸಕಾಲಕ್ಕೆ ನೀಡದಿದ್ದರೆ ಮುಂದಿನ ಫಸಲಿನ ಕೊರತೆ ಮತ್ತು ಗಿಡಗಳೆ ಸಾಯುವ ಸ್ಥಿತಿ ನಿರ್ಮಾಣವಾಗಲಿದೆ. ರೈತರು ಈಗಾಗಲೇ ಸಂಕಷ್ಟದಲ್ಲಿದ್ದು, ಕೃಷಿ ಪಂಪ್‌ಸೆಟ್‌ಗಳಿಂದ ನೀರೆತ್ತದಂತೆ ನಿಷೇಧಿಸಿದರೆ ರೈತರಿಗೆ ತೀವ್ರ ತೊಂದರೆಯಾಗಲಿದೆ. ವರ್ಷವಿಡಿ ಗಿಡಗಳಿಗೆ ಗೊಬ್ಬರ, ಔಷಧಿ ಮತ್ತಿತರ ಕೃಷಿ ಚಟುವಟಿಕೆ ನಡೆಸಿ, ಅಗತ್ಯವಿರುವ ನೀರು ಉಣಿಸದಿದ್ದರೆ ಗಿಡಗಳು ಬದುಕಿ ಉಳಿಯುವುದಿಲ್ಲ. ಈ ನೀರಿನ ಮೂಲವನ್ನು ನಂಬಿ ಸಾಲ ಮಾಡಿ ಪಂಪ್ ಸೆಟ್ ಮತ್ತು ಪೈಪ್ ಲೈನ್‌ಗಳನ್ನು ಮಾಡಿದ್ದು, ಅತ್ಯಧಿಕ ವೆಚ್ಚ ಮಾಡಿದ್ದಾರೆ. ಮಾರ್ಚ್‌ನಿಂದ ಮಳೆ ಆರಂಭವಾಗುವರೆಗೂ ತೋಟಗಾರಿಕಾ ಬೆಳೆಗಳಿಗೆ ನೀರಿನ ಅಗತ್ಯವಿದೆ. ಇಲ್ಲದಿದ್ದರೆ ಕೃಷಿ ಸಂಪೂರ್ಣ ನಾಶ ಹೊಂದುವುದ ರೊಂದಿಗೆ ರೈತರು ಆತ್ಮಹತ್ಯೆಯಂತಹ ಕೃತ್ಯಕ್ಕೆ ಒಳಗಾಗುತ್ತಾರೆ. ಕುಡಿಯುವ ನೀರಿಗೆ ತೊಂದರೆಯಾಗದಂತಹ ಪರಿಸ್ಥಿತಿ ಇಲ್ಲಿದ್ದು, ಸರಕಾರ ಈ ಆದೇಶವನ್ನು ಹಿಂಪಡೆಯಬೇಕು ಎಂದು ರೈತ ಸಂಘ ಮನವಿ ಮಾಡಿದೆ.

ರೈತ ಸಂಘದ ಪದಾಧಿಕಾರಿಗಳಾದ ಕಾರ್ಯದರ್ಶಿ ಪೂರ್ಣೇಶ್ ಮತ್ತು ಅಂಗುರುಡಿ ದಿನೇಶ್, ಚಂದ್ರಶೇಖರ, ಶ್ರೀಧರ್ ರಾವ್, ಚನ್ನಕೇಶವ ಮತ್ತಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ