ಆ್ಯಪ್ನಗರ

ಅರಣ್ಯ ಉತ್ಪನ್ನ ಸಂಗ್ರಹಕ್ಕೆ ಅನುಮತಿ ಖಂಡನೀಯ

ಕೊಪ್ಪ, ನರಸಿಂಹರಾಜಪುರ, ಮೂಡಿಗೆರೆ, ಶೃಂಗೇರಿ ತಾಲೂಕಿನ ನೂರಾರು ಗಿರಿಜನ ಜನಾಂಗದವರು ದಾಲ್ಚಿನ್ನಿ, ಮುರುಗನ ಹುಳಿ, ರಾಮಪತ್ರೆ, ಮರಾಠಿ ಮೊಗ್ಗು ಮುಂತಾದ ಕಿರು ಅರಣ್ಯ ಉತ್ಪನ್ನಗಳನ್ನು ಸಂಗ್ರಹಿಸುವುದಕ್ಕೆ ಅರಣ್ಯ ಅಪರಾಧ ತನಿಖಾ ದಳವು ಸರಕಾರದ ಅನುಮತಿ ಬೇಕೆಂದು ಹೇಳಿರುವುದು ಖಂಡನೀಯ ಎಂದು ಮೆಣಸಿನ ಹಾಡ್ಯದ ಆದಿವಾಸಿ ಹಿತ ರಕ್ಷ ಣಾ ಸಮಿತಿ ಸದಸ್ಯ ಸಿ.ಎಸ್‌.ಚೇತನ್‌ ಗುರುಪ್ರಸಾದ್‌ ತಿಳಿಸಿದ್ದಾರೆ.

ವಿಕ ಸುದ್ದಿಲೋಕ 27 Apr 2016, 9:00 am

ಜಯಪುರ: ಕೊಪ್ಪ, ನರಸಿಂಹರಾಜಪುರ, ಮೂಡಿಗೆರೆ, ಶೃಂಗೇರಿ ತಾಲೂಕಿನ ನೂರಾರು ಗಿರಿಜನ ಜನಾಂಗದವರು ದಾಲ್ಚಿನ್ನಿ, ಮುರುಗನ ಹುಳಿ, ರಾಮಪತ್ರೆ, ಮರಾಠಿ ಮೊಗ್ಗು ಮುಂತಾದ ಕಿರು ಅರಣ್ಯ ಉತ್ಪನ್ನಗಳನ್ನು ಸಂಗ್ರಹಿಸುವುದಕ್ಕೆ ಅರಣ್ಯ ಅಪರಾಧ ತನಿಖಾ ದಳವು ಸರಕಾರದ ಅನುಮತಿ ಬೇಕೆಂದು ಹೇಳಿರುವುದು ಖಂಡನೀಯ ಎಂದು ಮೆಣಸಿನ ಹಾಡ್ಯದ ಆದಿವಾಸಿ ಹಿತ ರಕ್ಷ ಣಾ ಸಮಿತಿ ಸದಸ್ಯ ಸಿ.ಎಸ್‌.ಚೇತನ್‌ ಗುರುಪ್ರಸಾದ್‌ ತಿಳಿಸಿದ್ದಾರೆ.

ಪಟ್ಟಣವನ್ನೇ ನೋಡದ ಎಷ್ಟೋ ಹಳ್ಳಿಗರಿಗೆ ಸಂಗ್ರಹಕ್ಕಾಗಿ ಲ್ಯಾಂಪ್‌ ಸಹಕಾರ ಸಂಘದಿಂದ ಗುರುತಿನ ಚೀಟಿ ಪಡೆಯುವಂತೆ ಅಪರಾಧ ತನಿಖಾ ದಳದ ಮುಖ್ಯಸ್ಥ ಕೆ.ಎಸ್‌.ಕಿಶನ್‌ ಸಿಂಗ್‌ ಹೇಳಿರುವುದು ಹಾಸ್ಯಾಸ್ಪದವಾಗಿದೆ. ಪರೋಕ್ಷ ವಾಗಿ ಮೂಲ ನಿವಾಸಿಗಳಿಗೆ ಮಾನಸಿಕ ಕಿರುಕುಳ ಕೊಟ್ಟು ಸ್ವಯಂ ಪ್ರೇರಿತರಾಗಿ ಒಕ್ಕಲೆಬ್ಬಿಸುವ ಹುನ್ನಾರವಾಗಿದೆ. ಇಂತಹ ಪ್ರಯೋಜನಕ್ಕೆ ಬಾರದ ನಿಯಮಗಳನ್ನು ಬಡ ವರ್ಗದ ಮೇಲೆ ಹೇರುವ ಬದಲಾಗಿದೆ ಗ್ರಾಮೀಣ ಪ್ರದೇಶಗಳಿಗೆ ಮೂಲಸೌಲಭ್ಯ ಕಲ್ಪಿಸಲು ಗಮನ ಹರಿಸಬೇಕೆಂದು ಅವರು ತಿಳಿಸಿದ್ದಾರೆ.

ಮೂಲ ನಿವಾಸಿಗಳ ಮೇಲೆ ದೌರ್ಜನ್ಯ

Vijaya Karnataka Web
ಅರಣ್ಯ ಉತ್ಪನ್ನ ಸಂಗ್ರಹಕ್ಕೆ ಅನುಮತಿ ಖಂಡನೀಯ

ಕುದುರೆಮುಖದಲ್ಲಿ ಮೀನು ಹಿಡಿಯಲು ಹೋದ ಕೆಲ ಸ್ಥಳೀಯರ ಮೇಲೆ ಎನ್‌ಜಿಒಗಳಿಂದ ಹಲ್ಲೆ, ಜೀವ ಬೆದರಿಕೆ ನಡೆದು ಜಾಮೀನು ರಹಿತ ಪ್ರಕರಣ ದಾಖಲಿಸಿರುವುದು ಖಂಡನೀಯ. ಕಬ್ಬಿಣದ ಅದಿರು ಕಂಪನಿ ರದ್ದತಿಗೆ ಹೋರಾಟ ನಡೆಸಲು ಮುಂದಾದಾಗ ಎನ್‌ಜಿಒಗಳು ಧ್ವನಿಗೂಡಿಸದೆ ತಲೆ ಮರೆಸಿಕೊಂಡಿದ್ದರು. ಗಣಿಗಾರಿಕೆ ರದ್ದಾದ ಬಳಿಕ ನಮ್ಮದೇ ಹೋರಾಟದ ಫಲವೆಂದು ಬಡಾಯಿ ಕೊಚ್ಚಿಕೊಳ್ಳುತ್ತಿದ್ದಾರೆ. ವಿದೇಶಿ ನಿಧಿಯ ಆಸೆಗಾಗಿ ಗಿರಿಜನರ ಮೇಲೆ ದೌರ್ಜನ್ಯವೆಸಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಇಂತವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ