ಚಿಕ್ಕಮಗಳೂರು: ಸನಾತನ ಗುರುಕುಲ ಪದ್ದತಿಯ ಶಿಕ್ಷ ಣದ ಜತೆ ಆಧುನಿಕ ಪದ್ದತಿಯ ಶಿಕ್ಷ ಣವು ಮೇಳೈಸಿದಾಗ ಮಾತ್ರ ಮೌಲ್ಯಯುತ ಸಮಾಜ ನಿರ್ಮಾಣವಾಗುತ್ತದೆ ಎಂದು ಸುದ್ದಿ ವಿಶ್ಲೇಷಕ ಡಾ. ಮನೀಶ್ ಮೋಕ್ಷ ಗುಂಡಂ ಹೇಳಿದರು.
ನಾದಾ ಚೈತನ್ಯ ಸಂಸ್ಥೆ, ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷ ಣ ಇಲಾಖೆ ಸಹಯೋಗದೊಂದಿಗೆ ಎಂಇಎಸ್ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಮೌಲ್ಯಯುತ ಶಿಕ್ಷ ಣ ಜವಾಬ್ದಾರಿ ಎಂಬ ಮಾತು ಮಂಥನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶಿಕ್ಷ ಣವೆಂದರೆ ಮೌಲ್ಯ,ಕೌಶಲ್ಯ ಕಲಿಸುವಂಥದ್ದು. ಆದರೆ, ಬ್ರಿಟೀಷರು ಬಿಟ್ಟು ಹೋದ ನಂತರವೂ ನಾವು ಉಳಿಸಿಕೊಂಡ ಮೆಕಾಲೆ ಶಿಕ್ಷ ಣ ಪದ್ದತಿಯ ಫಲ ಇಂದಿನ ಈ ನಮ್ಮ ಶಿಕ್ಷ ಣದ ದುಃಸ್ಥಿತಿಗೆ ಕಾರಣವಾಗಿದೆ ಎಂದರು.
ಎಲ್ಲ ಮಕ್ಕಳೂ ಅಂಕ ಗಳಿಕೆಯ ಹಿಂಬಾಲಕರಾಗುವಂತೆ ಮಾಡುತ್ತಿರುವ ಶಿಕ್ಷ ಣದಲ್ಲಿ ಮೌಲ್ಯ, ಕೌಶಲ್ಯಗಳು ಕ್ಷೀಣಿಸುತ್ತಿವೆ. ನಮ್ಮ ಪ್ರಾಚೀನ ಪರಂಪರೆಯ ಪಂಚತಂತ್ರ ಕಥೆಗಳ ಮೂಲಕ ಬದಲಾವಣೆ ತರಬಹುದೆಂದು ಅಭಿಪ್ರಾಯ ಪಟ್ಟರು.
ಸರ್ವ ಶಿಕ್ಷ ಣ ಅಭಿಯಾನದ ಸಹ ನಿರ್ದೇಶಕ ಡಾ. ಎಚ್. ಬಿ. ಚಂದ್ರಶೇಖರ್ಮಾತನಾಡಿ, ಮಕ್ಕಳಿಗೆ ಸಂಸ್ಕೃತಿ, ಸಂಸ್ಕಾರಗಳನ್ನು ಹೊರಗಿನಿಂದ ತಂದು ತುಂಬಲು ಸಾಧ್ಯವಾಗುವುದಿಲ್ಲ. ಮಕ್ಕಳ ಮುಂದೆ ತಂದೆ-ತಾಯಿ, ಶಿಕ್ಷ ಕರು ಸುತ್ತಲಿನ ಸಮಾಜ ಉದಾಹರಣೆಯಾಗಿ ನಿಂತಾಗ ಉತ್ತಮ ವ್ಯಕ್ತಿತ್ವದ ವ್ಯಕ್ತಿ ನಿರ್ಮಾಣವಾಗಲು ಸಾಧ್ಯ ಎಂದರು.
ಜಿಲ್ಲಾ ಪಂಚಾಯಿತಿ ಶಿಕ್ಷ ಣ ಸ್ಥಾಯಿ ಸಮಿತಿ ಅಧ್ಯಕ್ಷ ಶಾಮಣ್ಣ ಬಣಕಲ್ ಮಾತನಾಡಿದರು. ಸಾರ್ವಜನಿಕ ಶಿಕ್ಷ ಣ ಇಲಾಖೆಯ ಡಿಡಿಪಿಐ ನಾಗೇಶ್ ಶಿಕ್ಷ ಣದ ಸ್ವರೂಪಗಳನ್ನು ಪರಿಚಯಿಸಿದರು. ಎಂಇಎಸ್ ಪದವಿ ಕಾಲೇಜಿನ ಪ್ರಾಂಶುಪಾಲ ವಿಷ್ಣುವರ್ಧನ್, ನಾದಾ ಚೈತನ್ಯದ ಅಧ್ಯಕ್ಷ ಹಾಗೂ ಮಾಜಿ ನಗರಸಭೆ ಅಧ್ಯಕ್ಷ ಪ್ರೇಂಕುಮಾರ್ ಮತ್ತಿತರರು ಹಾಜರಿದ್ದರು.
ನಾದಾ ಚೈತನ್ಯದ ಮಕ್ಕಳು ಪ್ರಾರ್ಥಿಸಿ, ಉಜ್ವಲ್ ಸ್ವಾಗತಿಸಿ, ಸತ್ಯನಾರಾಯಣ ವಂದಿಸಿದರು. ಸದಾ ಶಿವಮೂರ್ತಿ ನಿರೂಪಿಸಿದರು.