ಆ್ಯಪ್ನಗರ

ಬಿಎಸ್ಸೆನ್ನೆಲ್‌ ಕಚೇರಿಗೆ ಗ್ರಾಹಕರ ಮುತ್ತಿಗೆ

ನೆಟ್‌ವರ್ಕ್‌ನಲ್ಲಿ ಪದೇ ಪದೆ ವ್ಯತ್ಯಯವಾಗುತ್ತಿದ್ದರೂ ಸರಿಪಡಿಸದ ಅಧಿಕಾರಿಗಳ ಧೋರಣೆ ವಿರೋಧಿಸಿ ಬಸ್ರಿಕಟ್ಟೆ ಗ್ರಾಹಕರು ಸೋಮವಾರ ಬಸ್ರಿಕಟ್ಟೆಯಲ್ಲಿ ಹಾಗೂ ಮಂಗಳವಾರ ಜಯಪುರದಲ್ಲಿ ಬಿಎಸ್ಸೆನ್ನೆಲ್‌ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

ವಿಕ ಸುದ್ದಿಲೋಕ 22 Mar 2017, 9:00 am

ಚಿಕ್ಕಮಗಳೂರು:ನೆಟ್‌ವರ್ಕ್‌ನಲ್ಲಿ ಪದೇ ಪದೆ ವ್ಯತ್ಯಯವಾಗುತ್ತಿದ್ದರೂ ಸರಿಪಡಿಸದ ಅಧಿಕಾರಿಗಳ ಧೋರಣೆ ವಿರೋಧಿಸಿ ಬಸ್ರಿಕಟ್ಟೆ ಗ್ರಾಹಕರು ಸೋಮವಾರ ಬಸ್ರಿಕಟ್ಟೆಯಲ್ಲಿ ಹಾಗೂ ಮಂಗಳವಾರ ಜಯಪುರದಲ್ಲಿ ಬಿಎಸ್ಸೆನ್ನೆಲ್‌ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

ದಶಕಗಳ ಹಿಂದೆ ಆರಂಭಗೊಂಡ ಬಿಎಸ್ಸೆನ್ನೆಲ್‌ ಮೊಬೈಲ್‌ ಸೇವೆ ನೇರಳಕಟ್ಟೆ, ಕವನಹಳ್ಳ ಭಾಗಕ್ಕೆ ಸಂಪರ್ಕದ ಕೊರತೆ, ವಿದ್ಯುತ್‌ ನಿಲುಗಡೆಯಾದರೆ ನೆಟ್‌ವರ್ಕ್‌ ಕಡಿತ, ಇಂಟರ್ನೆಟ್‌ ವ್ಯತ್ಯಯದಿಂದ ಎಟಿಎಂ, ಅಂಚೆ ಕಚೇರಿ, ಬ್ಯಾಂಕ್‌ಗಳು, ಗ್ರಾ.ಪಂ ಕಚೇರಿಗಳ ನಿತ್ಯದ ಕೆಲಸಗಳಿಗೆ ಅಡ್ಡಿ ಸೇರಿದಂತೆ ಹಲವು ರೀತಿಯಲ್ಲಿ ಸಮಸ್ಯೆಯಾಗುತ್ತಿದೆ. ಈ ಹಿಂದೆ ಎರಡು ಬಾರಿ ಪ್ರತಿಭಟನೆ ನಡೆಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.

ಅಧಿಕಾರಿಗಳ ನಿರ್ಲಕ್ಷ್ಯ ವಿರೋಧಿಸಿ ಸೋಮವಾರ ಬಸ್ರಿಕಟ್ಟೆಯಲ್ಲಿ ಗ್ರಾಹಕರು ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಟೆಕ್ನಿಷಿಯನ್‌ ಆಗಮಿಸಿದ್ದರಿಂದ ಅಸಮಾಧಾನಗೊಂಡು ಹಿರಿಯ ಅಧಿಕಾರಿಗಳನ್ನು ಕರೆಸುವಂತೆ ಪಟ್ಟು ಹಿಡಿದರು. ಕೊಪ್ಪದಲ್ಲಿರುವ ಬಿಎಸ್ಸೆನ್ನೆಲ್‌ ಅಧಿಕಾರಿಯೊಬ್ಬರು ದೂರವಾಣಿಯಲ್ಲಿ ಉಡಾಫೆ ಉತ್ತರ ಕೊಟ್ಟಿದ್ದರಿಂದ ಆಕ್ರೋಶಗೊಂಡ ಗ್ರಾಹಕರು ಮಂಗಳವಾರ ಜಯಪುರದ ಬಿಎಸ್ಸೆನ್ನೆಲ್‌ ಕಚೇರಿಗೆ ಮುತ್ತಿಗೆ ಹಾಕಿದರು.

ಕೊಪ್ಪ ವಿಭಾಗೀಯ ಎಂಜಿನಿಯರ್‌ ನೀಡಿದ ಹಾರಿಕೆ ಉತ್ತರಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಮಣಿಕಂಠನ್‌ ಕಂದಸ್ವಾಮಿ, ಮುರುಳಿ ಪಟೇಲ್‌, ಬಸ್ರಿಕಟ್ಟೆ ಚೇತನ್‌, ಗ್ರಾ.ಪಂ ಸದಸ್ಯೆ ರೇಖಾ ಮತ್ತಿತರರು ಕಳೆದ 10 ದಿನಗಳಿಂದ ಬಿಎಸ್ಸೆನ್ನೆಲ್‌ ನೆಟ್‌ವರ್ಕ್‌ ಸಮಸ್ಯೆಯಿಂದ ಕಡತ ವಿಲೇವಾರಿಗೆ ತೊಂದರೆಯಾಗಿದೆ. ಜನರ ಕೆಲಸ ಕಾರ‍್ಯಗಳಿಗೆ ಅಡಚಣೆಯಾಗುತ್ತಿದೆ ಎಂದು ದೂರಿದರು.

ಗ್ರಾ.ಪಂ ಮಾಜಿ ಅಧ್ಯಕ್ಷ ಧರ್ಮರಾಜ್‌, ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ಸದಸ್ಯರು, ಸೋಮೇಶ್ವರ ಎಸ್ಟೇಟ್‌ ವ್ಯವಸ್ಥಾಪಕ ಎಡ್ವಿನ್‌, ಗ್ರಾ.ಪಂ ಮಾಜಿ ಅಧ್ಯಕ್ಷ ವಿಜಯಕುಮಾರ್‌, ಸದಸ್ಯೆ ನವ್ಯಾ, ಬಿಳಾಲುಕೊಪ್ಪ ಅರುಣಕುಮಾರ್‌ ಹಾಜರಿದ್ದರು.

ಸಮಸ್ಯೆ ಪರಿಹರಿಸ್ತೀವಿ

Vijaya Karnataka Web
ಬಿಎಸ್ಸೆನ್ನೆಲ್‌ ಕಚೇರಿಗೆ ಗ್ರಾಹಕರ ಮುತ್ತಿಗೆ

ಸೇವೆಗೆ ಸಂಬಂಧಿಸಿದ ನ್ಯೂನತೆಗಳ ಬಗ್ಗೆ ಗ್ರಾಹಕರು ಗಮನ ಸೆಳೆದಿದ್ದಾರೆ. ಕೆಟ್ಟುಹೋದ ಜನರೇಟರ್‌ನ್ನು ದುರಸ್ತಿಗೊಳಿಸಲಾಗಿದೆ. ಇತರೆ ಸೇವಾ ನ್ಯೂನತೆ ಕಂಡುಬಂದರೆ ಶೀಘ್ರ ಪರಿಹಾರಕ್ಕೆ ಕ್ರಮ ಕೈಗೊಳ್ಳುತ್ತೇವೆ. ಬದಲಿ ಜನರೇಟರ್‌ ಕೇಳಿದ್ದು, ಒಂದು ತಿಂಗಳಲ್ಲಿ ಬರುವ ನಿರೀಕ್ಷೆ ಇದೆ.

-ಬಿಎಸ್ಸೆನ್ನೆಲ್‌ ವಿಭಾಗೀಯ ಎಂಜಿನಿಯರ್‌, ಕೊಪ್ಪ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ