ಚಿಕ್ಕಮಗಳೂರು:ಚಂದ್ರಯ್ಯನಾಯ್ಡು ಅವರಿಗೆ ವಾಕ್ಚಾತುರ್ಯ ಮತ್ತು ಸಂಘಟನಾ ಕೌಶಲ್ಯ ದೈವದತ್ತವಾಗಿತ್ತು. ಅವರ ಪ್ರತಿಭೆ ಸಾಮರ್ಥ್ಯ, ಸಂಘಟನೆ ಜಿಲ್ಲೆಯನ್ನು ಸಾಂಸ್ಕೃತಿಕವಾಗಿ ಶ್ರೀಮಂತಗೊಳಿಸಿದೆ ಎಂದು ಮಾಧ್ಯಮ ಸಂಸ್ಕೃತಿ ಪ್ರತಿಷ್ಠಾನದ ಅಧ್ಯಕ್ಷೆ ಗೌರಮ್ಮ ಹೇಳಿದರು.
ಐಡಿಎಸ್ಜಿ ಸರಕಾರಿ ಕಾಲೇಜಿನ ಕನ್ನಡ ವಿಭಾಗ ಹಾಗೂ ಮಾಧ್ಯಮ ಸಂಸ್ಕೃತಿ ಪ್ರತಿಷ್ಠಾನದ ಸಹಯೋಗದಲ್ಲಿ ಐ.ಎನ್.ಮಲ್ಲೇಗೌಡ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ''ಚಂದ್ರಸ್ಮೃತಿ'' ಪ್ರೊ.ಚಂದ್ರಯ್ಯನಾಯ್ಡು ಬದುಕು-ಬರಹ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ಸಮಾರಂಭಗಳನ್ನು ಅಚ್ಚುಕಟ್ಟಾಗಿ ಸಂಘಟಿಸುತಾ,್ತ ಉತ್ಸಾಹ ತುಂಬುವ ಜನಾಕರ್ಷಣೆ ಅವರಲ್ಲಿತ್ತು. ನಿಸ್ವಾರ್ಥತತೆಯಿಂದ ಕಾರ್ಯನಿರ್ವಹಿಸಿದರೆ ತೃಪ್ತಿ, ಸಮಾಧಾನ ನಮ್ಮದಾಗುತ್ತದೆ. ಜಿಲ್ಲೆಯ ಸಾಹಿತ್ಯ, ಕಲೆ, ಶಿಕ್ಷ ಣ, ಸೇರಿದಂತೆ ವಿವಧ ಕ್ಷೇತ್ರಗಳ ಉನ್ನತಿಗೆ ನಾಯ್ಡು ಕೊಡುಗೆ ಸ್ಮರಣೀಯ ಎಂದ ಗೌರಮ್ಮ, ಒಳ್ಳೆಯದನ್ನು ಗುರುತಿಸುವ, ಗೌರವಿಸುವ, ಪ್ರೋತ್ಸಾಹಿಸುವ ಗುಣ ಲಕ್ಷ ಣ ಆದರ್ಶಪ್ರಾಯ ಎಂದರು.
ಚಂದ್ರಯ್ಯ ನಾಯ್ಡು ಅಂಕಣ ಬರಹದ ಬಗ್ಗೆ ಉಪನ್ಯಾಸ ನೀಡಿದ ಪ್ರೊ.ಎಚ್.ಎಂ.ಮಹೇಶ್, ಪತ್ರಿಕೆಗಳಿಗಾಗಿ ಹುಟ್ಟಿದ, ಪತ್ರಿಕೆಗಳೇ ಬೆಳೆಸಿದ ಸಾಹಿತ್ಯ 'ಅಂಕಣ'. ಅನೇಕ ಬರಹಗಾರರ ಹುಟ್ಟಿಗೆ ಕಾರಣವಾಗಿದೆ. ಡಾ.ಹಾ.ಮಾ.ನಾಯಕ್ರಿಂದ ಅಂಕಣ ಸಾಹಿತ್ಯಕ್ಕೆ ಹೆಚ್ಚಿನ ಬೆಲೆ ಬಂತು. ನಾಯ್ಡುರ ಬರಹಕ್ಕಿಂತ ಅವರ ಭಾಷಣವೇ ಹೆಚ್ಚು ಜನಪ್ರಿಯ. ವ್ಯಕ್ತಿ ಚಿತ್ರದ ಮೂಲಕ ಅಂಕಣ ಸಾಹಿತ್ಯವನ್ನು ಪತ್ರಿಕೆ ಮೂಲಕ ಪ್ರಾರಂಭಿಸಿದ ನಾಯ್ಡು, 200ಕ್ಕೂ ಹೆಚ್ಚು ಅಂಕಣ ಬರೆದರು. ಅವರ ವ್ಯಕ್ತಿ ಚಿತ್ರಗಳನ್ನೊಳಗೊಂಡ ಅಂಕಣ ಮುಂದೊಂದು ದಿನ ಜಿಲ್ಲೆಯ ಸಾಂಸ್ಕೃತಿಕ ಚರಿತ್ರೆಯನ್ನು ರೂಪಿಸಲಿದೆ ಎಂದು ಹೇಳಿದರು.
ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ.ಎನ್.ಸುಂದರೇಶ್ ಮಾತನಾಡಿ, ಕ್ರಿಯಾಶೀಲ ಮನಸ್ಸುಗಳನ್ನು ಎಚ್ಚರವಾಗಿಡುವಲ್ಲಿ ನಾಯ್ಡು ಶ್ರಮ ವಹಿಸಿದವರು. ಸಾಹಿತ್ಯ ಕೃಷಿಗೆ ತೊಡಗಿಸಿಕೊಳ್ಳುವ ಮೂಲಕ ಅವರಿನ್ನೂ ಜೀವಂತವಾಗಿದ್ದಾರೆ. ಸಾಹಿತ್ಯ ಕೃಷಿಯಲ್ಲಿ ಕ್ರಿಯಾಶೀಲಗೊಂಡರೆ ಮನಸ್ಸು ಅರಳುತ್ತದೆ. ಹೆಚ್ಚು ಕೃತಿಗಳನ್ನು ವಿದ್ಯಾರ್ಥಿಗಳು ಓದಬೇಕೆಂದು ಪ್ರೋತ್ಸಾಹಿಸುತ್ತಿದ್ದ ನಾಯ್ಡು, ಅನೇಕ ಆಧುನಿಕ ವಚನಗಳಲ್ಲಿ ಸಮಾಜದ ವಿವಿಧ ಮಗ್ಗಲುಗಳನ್ನು ಪರಿಚಯಿಸಿದ್ದಾರೆ ಎಂದರು.
ಮಾ.ಸಂ.ಪ್ರ.ಕಾರಾರಯಧ್ಯಕ್ಷ ಪ್ರಭುಲಿಂಗಶಾಸ್ತ್ರಿ ಪ್ರಾಸ್ತಾವಿಸಿದರು.
ಪ್ರಾಂಶುಪಾಲ ಪ್ರೊ.ಟಿ.ಸಿ.ಬಸವರಾಜಪ್ಪ, ಪತ್ರಕರ್ತ ಸ.ಗಿರಿಜಾ ಶಂಕರ್, ಸಾಹಿತಿ ಪ್ರೊ.ಕೆ.ಓಂಕಾರಪ್ಪ ಉಪನ್ಯಾಸಕರಾದ ಯು.ಸಿ.ಮಹೇಶ್, ಪರ್ವತೇ ಗೌಡ, ಸುಪ್ರಿತಾ, ವಾಣಿ, ಪ್ರೊ.ಜಗದೀಶಪ್ಪ, ಪ್ರೊ.ಸುಧಾ ಹಾಜರಿದ್ದರು.