ಆ್ಯಪ್ನಗರ

ಮರ ಬಿದ್ದು ಮನೆಗೆ ಹಾನಿ

ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಸಾಮಾನ್ಯ ಜನಜೀವನ ಅಸ್ತವ್ಯಸ್ತವಾಗಿದ್ದು, ಕುದುರೆಮುಖ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಬಲೆಕಡಿ ಗ್ರಾಮದಲ್ಲಿ ಕಾಡು ಮರವೊಂದು ಉರುಳಿ ಕೊಡಿಗೆ ಗೀತಾ ಅವರ ಮನೆ ಜಖಂಗೊಂಡಿದೆ.

Vijaya Karnataka 19 Sep 2017, 5:00 am

ಶೃಂಗೇರಿ: ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಸಾಮಾನ್ಯ ಜನಜೀವನ ಅಸ್ತವ್ಯಸ್ತವಾಗಿದ್ದು, ಕುದುರೆಮುಖ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಬಲೆಕಡಿ ಗ್ರಾಮದಲ್ಲಿ ಕಾಡು ಮರವೊಂದು ಉರುಳಿ ಕೊಡಿಗೆ ಗೀತಾ ಅವರ ಮನೆ ಜಖಂಗೊಂಡಿದೆ.

ಮನೆಯ ಸಮೀಪದ ಮರ ಸೋಮವಾರ ಬೆಳಗ್ಗೆ ಮನೆಯ ಮೇಲೆ ಉರುಳಿಬಿದ್ದಿದ್ದು, ಚಾವಣಿ ಸಹಿತ ಮನೆಗೆ ಹಾನಿ ಸಂಭವಿಸಿದೆ. ದೂರದ ಒಳನಾಡು ಪ್ರದೇಶವಾದ ಕಾರಣ ಹಳ್ಳಿಯ ಜನರು ಮೂರು ತಿಂಗಳಿಗೆ ಬೇಕಾಗುವಷ್ಟು ದಿನ ಬಳಕೆಯ ದಿನಸಿ ಸಾಮಾನುಗಳನ್ನು ದಾಸ್ತಾನುಗೊಳಿಸಿದ್ದರು. ಮಳೆಯಿಂದಾಗಿ ದಿನಸಿ ಸಾಮಾನುಗಳು ಹಾನಿಗೊಳಗಾಗಿವೆ. ಸುಮಾರು ಐದು ಲಕ್ಷ ರೂ.ಗೂ ಹೆಚ್ಚು ನಷ್ಟ ಸಂಭವಿಸಿದೆ ಎಂದು ದೂರಲಾಗಿದೆ.

ಘಟನಾ ಸ್ಥಳಕ್ಕೆ ಜಿ.ಪಂ ಸದಸ್ಯ ಬಿ.ಶಿವಶಂಕರ್‌. ತಾ.ಪಂ ಅಧ್ಯಕ್ಷೆ ಜಯಶೀಲಾ, ಸ್ಥಾಯಿ ಸಮಿತಿ ಅಧ್ಯಕ್ಷ ರಾಮಕೃಷ್ಣರಾವ್‌, ಸದಸ್ಯೆ ಪುಷ್ಪಲತಾ, ಸ್ಥಳೀಯ ಗ್ರಾ.ಪಂ ಅಧ್ಯಕ್ಷೆ ಸುಶೀಲಾ, ಕಂದಾಯ ಇಲಾಖೆ ಅಧಿಕಾರಿಗಳಾದ ಷಣ್ಮುಖ ಹಾಗೂ ಚಂದ್ರಶೇಖರ್‌ ಭೇಟಿ ನೀಡಿ ಪರಿಶೀಲಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ