ಆ್ಯಪ್ನಗರ

ಲಾರಿ, ಬೈಕ್‌ ಡಿಕ್ಕಿ: ಮೂವರು ಸಾವು

ವಿಕ ಸುದ್ದಿಲೋಕ ಕಡೂರು ಬೈಕ್‌ ಮತ್ತು ಲಾರಿ ಮುಖಾಮುಖಿ ಡಿಕ್ಕಿಯಾಗಿ ಮೂವರು ಸ್ಥಳದಲ್ಲಿಯೇ ಮೃತಪಟ್ಟ ಧಾರುಣ ಘಟನೆ ಮಂಗಳವಾರ ನಡೆದಿದೆ...

Vijaya Karnataka Web 6 Feb 2018, 10:16 pm

ಕಡೂರು: ಬೈಕ್‌ ಮತ್ತು ಲಾರಿ ಮುಖಾಮುಖಿ ಡಿಕ್ಕಿಯಾಗಿ ಮೂವರು ಸ್ಥಳದಲ್ಲಿಯೇ ಮೃತಪಟ್ಟ ಧಾರುಣ ಘಟನೆ ಮಂಗಳವಾರ ನಡೆದಿದೆ.

Vijaya Karnataka Web
ಲಾರಿ, ಬೈಕ್‌ ಡಿಕ್ಕಿ: ಮೂವರು ಸಾವು


ತಾಲೂಕಿನ ಮುಗಳೀಕಟ್ಟೆ ಗ್ರಾಮದ ವಾಸಿಗಳಾದ ನರಸಿಂಹಮೂರ್ತಿ(18), ಸಂತೋಷ್‌(19) ಮತ್ತು ಭಾಸ್ಕರ(20) ಮೃತಪಟ್ಟವರು.

ಪಟ್ಟಣದಿಂದ 9ನೇ ಮೈಲಿಕಲ್ಲಿಗೆ ಸಂಪರ್ಕಿಸುವ ರಸ್ತೆಯಲ್ಲಿ ಮಲ್ಲಿದೇವಿಹಳ್ಳಿ ಬಳಿಯ ಕುಂತೀಹೊಳೆ ಸಮೀಪ ಅಪಘಾತ ಉಂಟಾಗಿದೆ. ಮೃತರು ಕಡೂರಿನಿಂದ ಮುಗಳೀಕಟ್ಟೆಗೆ ಬೈಕ್‌ನಲ್ಲಿ ತೆರಳುತ್ತಿದ್ದರು.

ಕಡೂರು ಕಡೆಗೆ ಗೊಬ್ಬರ ತುಂಬಿದ ಲಾರಿ ಬರುತ್ತಿತ್ತು. ಘಟನೆ ಬಳಿಕ ಲಾರಿ ಚಾಲಕ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಪಿಎಸ್‌ಐ ಸಿ.ರಾಕೇಶ್‌ ಮತ್ತು ಸಿಬ್ಬಂದಿ ಭೇಟಿ ನೀಡಿದ್ದರು. ಪಟ್ಟಣದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ