ಕಡೂರು: ಬೈಕ್ ಮತ್ತು ಲಾರಿ ಮುಖಾಮುಖಿ ಡಿಕ್ಕಿಯಾಗಿ ಮೂವರು ಸ್ಥಳದಲ್ಲಿಯೇ ಮೃತಪಟ್ಟ ಧಾರುಣ ಘಟನೆ ಮಂಗಳವಾರ ನಡೆದಿದೆ.
ತಾಲೂಕಿನ ಮುಗಳೀಕಟ್ಟೆ ಗ್ರಾಮದ ವಾಸಿಗಳಾದ ನರಸಿಂಹಮೂರ್ತಿ(18), ಸಂತೋಷ್(19) ಮತ್ತು ಭಾಸ್ಕರ(20) ಮೃತಪಟ್ಟವರು.
ಪಟ್ಟಣದಿಂದ 9ನೇ ಮೈಲಿಕಲ್ಲಿಗೆ ಸಂಪರ್ಕಿಸುವ ರಸ್ತೆಯಲ್ಲಿ ಮಲ್ಲಿದೇವಿಹಳ್ಳಿ ಬಳಿಯ ಕುಂತೀಹೊಳೆ ಸಮೀಪ ಅಪಘಾತ ಉಂಟಾಗಿದೆ. ಮೃತರು ಕಡೂರಿನಿಂದ ಮುಗಳೀಕಟ್ಟೆಗೆ ಬೈಕ್ನಲ್ಲಿ ತೆರಳುತ್ತಿದ್ದರು.
ಕಡೂರು ಕಡೆಗೆ ಗೊಬ್ಬರ ತುಂಬಿದ ಲಾರಿ ಬರುತ್ತಿತ್ತು. ಘಟನೆ ಬಳಿಕ ಲಾರಿ ಚಾಲಕ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಪಿಎಸ್ಐ ಸಿ.ರಾಕೇಶ್ ಮತ್ತು ಸಿಬ್ಬಂದಿ ಭೇಟಿ ನೀಡಿದ್ದರು. ಪಟ್ಟಣದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.