ಆ್ಯಪ್ನಗರ

ತಗ್ಗಿದ ಮಳೆ, ಆವರಿಸಿದ ಥಂಡಿ

ಮೂಡಿಗೆರೆ, ಶೃಂಗೇರಿ, ಕೊಪ್ಪ, ನರಸಿಂಹರಾಜಪುರ ತಾಲೂಕುಗಳಲ್ಲಿ ಮಳೆ ಆರ್ಭಟ ಕಡಿಮೆಯಾಗಿದ್ದು, ಥಂಡಿ ಆವರಿಸಿದೆ. ಗಾಳಿಯ ಆರ್ಭಟ, ಸಾಧಾರಣ ಮಳೆಗೆ ಹಲವು ಕಡೆಗಳಲ್ಲಿ ಮರಗಳು ಉರುಳಿ ಅನಾಹುತ ಸಂಭವಿಸಿದೆ.

Vijaya Karnataka 18 Jul 2018, 9:38 pm
Vijaya Karnataka Web
ತಗ್ಗಿದ ಮಳೆ, ಆವರಿಸಿದ ಥಂಡಿ
ಚಿಕ್ಕಮಗಳೂರು: ಮೂಡಿಗೆರೆ, ಶೃಂಗೇರಿ, ಕೊಪ್ಪ, ನರಸಿಂಹರಾಜಪುರ ತಾಲೂಕುಗಳಲ್ಲಿ ಮಳೆ ಆರ್ಭಟ ಕಡಿಮೆಯಾಗಿದ್ದು, ಥಂಡಿ ಆವರಿಸಿದೆ. ಗಾಳಿಯ ಆರ್ಭಟ, ಸಾಧಾರಣ ಮಳೆಗೆ ಹಲವು ಕಡೆಗಳಲ್ಲಿ ಮರಗಳು ಉರುಳಿ ಅನಾಹುತ ಸಂಭವಿಸಿದೆ.

ಮೂಡಿಗೆರೆ ತಾಲೂಕು ಕೂವೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಲಿಹಿತ್ಲು ಗ್ರಾಮದ ಲ್ಯಾನ್ಸಿ ಲೋಬೊ ಅವರ ಮನೆ ಮೇಲೆ ಭಾರಿ ಗಾತ್ರದ ಮರ ಉರುಳಿ ಅಪಾರ ಹಾನಿ ಸಂಭವಿಸಿದೆ. ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಾಳೆಹೊನ್ನೂರು ಸುತ್ತಮುತ್ತ ಮಳೆ ಗಾಳಿಗೆ ಭೂ ಕುಸಿತ ಉಂಟಾಗಿದೆ.

ಭೂ ಕುಸಿತದಿಂದ ಸುಧಾಕರ ಅವರಿಗೆ ಸೇರಿದ ಬಾವಿ, ತೋಟಕ್ಕೆ ಹಾನಿಯಾಗಿದೆ. ಅಡಕೆ ಮರಗಳು ಮುರಿದು ಬಿದ್ದಿವೆ. ಕೊಪ್ಪ, ಶೃಂಗೇರಿ, ಮೂಡಿಗೆರೆ ತಾಲೂಕಿನ ಹಲವು ಕಡೆಗಳಲ್ಲಿ ಮರಗಳು ಬಿದ್ದು ಹಾನಿಯಾಗಿದೆ. ಮಳೆ, ಗಾಳಿ ಮತ್ತು ಚಳಿಯಲ್ಲಿ ಮಲೆನಾಡು ಮುದುಡಿದ್ದು, ವಿದ್ಯುತ್‌ ಇಲ್ಲದೆ ನೂರಾರು ಗ್ರಾಮಗಳು ಕತ್ತಲೆಯಲ್ಲಿ ಮುಳುಗಿವೆ.

ಮಂಗಳವಾರ ಬೆಳಗ್ಗೆ 8ಕ್ಕೆ ಮುಕ್ತಾಯವಾದಂತೆ ಶೃಂಗೇರಿ ತಾಲೂಕಿನ ಕೆರೆಕಟ್ಟೆಯಲ್ಲಿ ಅತಿಹೆಚ್ಚು 111ಮಿ.ಮೀ. ಮಳೆಯಾಗಿದೆ. ಕಿಗ್ಗ 78, ಶೃಂಗೇರಿ 54.2, ಕೊಪ್ಪ 62, ಹರಿಹರಪುರ 70.9, ಮೂಡಿಗೆರೆ 42.8, ಕೊಟ್ಟಿಗೆಹಾರ 96.2,ಚಿಕ್ಕಮಗಳೂರು 9 ಮಿ.ಮೀ. ಮಳೆಯಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ