ತಗ್ಗಿದ ಮಳೆ, ಆವರಿಸಿದ ಥಂಡಿ
ಮೂಡಿಗೆರೆ, ಶೃಂಗೇರಿ, ಕೊಪ್ಪ, ನರಸಿಂಹರಾಜಪುರ ತಾಲೂಕುಗಳಲ್ಲಿ ಮಳೆ ಆರ್ಭಟ ಕಡಿಮೆಯಾಗಿದ್ದು, ಥಂಡಿ ಆವರಿಸಿದೆ. ಗಾಳಿಯ ಆರ್ಭಟ, ಸಾಧಾರಣ ಮಳೆಗೆ ಹಲವು ಕಡೆಗಳಲ್ಲಿ ಮರಗಳು ಉರುಳಿ ಅನಾಹುತ ಸಂಭವಿಸಿದೆ.
Vijaya Karnataka 18 Jul 2018, 9:38 pm
ಚಿಕ್ಕಮಗಳೂರು: ಮೂಡಿಗೆರೆ, ಶೃಂಗೇರಿ, ಕೊಪ್ಪ, ನರಸಿಂಹರಾಜಪುರ ತಾಲೂಕುಗಳಲ್ಲಿ ಮಳೆ ಆರ್ಭಟ ಕಡಿಮೆಯಾಗಿದ್ದು, ಥಂಡಿ ಆವರಿಸಿದೆ. ಗಾಳಿಯ ಆರ್ಭಟ, ಸಾಧಾರಣ ಮಳೆಗೆ ಹಲವು ಕಡೆಗಳಲ್ಲಿ ಮರಗಳು ಉರುಳಿ ಅನಾಹುತ ಸಂಭವಿಸಿದೆ.
ಮೂಡಿಗೆರೆ ತಾಲೂಕು ಕೂವೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಲಿಹಿತ್ಲು ಗ್ರಾಮದ ಲ್ಯಾನ್ಸಿ ಲೋಬೊ ಅವರ ಮನೆ ಮೇಲೆ ಭಾರಿ ಗಾತ್ರದ ಮರ ಉರುಳಿ ಅಪಾರ ಹಾನಿ ಸಂಭವಿಸಿದೆ. ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಾಳೆಹೊನ್ನೂರು ಸುತ್ತಮುತ್ತ ಮಳೆ ಗಾಳಿಗೆ ಭೂ ಕುಸಿತ ಉಂಟಾಗಿದೆ.
ಭೂ ಕುಸಿತದಿಂದ ಸುಧಾಕರ ಅವರಿಗೆ ಸೇರಿದ ಬಾವಿ, ತೋಟಕ್ಕೆ ಹಾನಿಯಾಗಿದೆ. ಅಡಕೆ ಮರಗಳು ಮುರಿದು ಬಿದ್ದಿವೆ. ಕೊಪ್ಪ, ಶೃಂಗೇರಿ, ಮೂಡಿಗೆರೆ ತಾಲೂಕಿನ ಹಲವು ಕಡೆಗಳಲ್ಲಿ ಮರಗಳು ಬಿದ್ದು ಹಾನಿಯಾಗಿದೆ. ಮಳೆ, ಗಾಳಿ ಮತ್ತು ಚಳಿಯಲ್ಲಿ ಮಲೆನಾಡು ಮುದುಡಿದ್ದು, ವಿದ್ಯುತ್ ಇಲ್ಲದೆ ನೂರಾರು ಗ್ರಾಮಗಳು ಕತ್ತಲೆಯಲ್ಲಿ ಮುಳುಗಿವೆ.
ಮಂಗಳವಾರ ಬೆಳಗ್ಗೆ 8ಕ್ಕೆ ಮುಕ್ತಾಯವಾದಂತೆ ಶೃಂಗೇರಿ ತಾಲೂಕಿನ ಕೆರೆಕಟ್ಟೆಯಲ್ಲಿ ಅತಿಹೆಚ್ಚು 111ಮಿ.ಮೀ. ಮಳೆಯಾಗಿದೆ. ಕಿಗ್ಗ 78, ಶೃಂಗೇರಿ 54.2, ಕೊಪ್ಪ 62, ಹರಿಹರಪುರ 70.9, ಮೂಡಿಗೆರೆ 42.8, ಕೊಟ್ಟಿಗೆಹಾರ 96.2,ಚಿಕ್ಕಮಗಳೂರು 9 ಮಿ.ಮೀ. ಮಳೆಯಾಗಿದೆ.
ಮೂಡಿಗೆರೆ ತಾಲೂಕು ಕೂವೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಲಿಹಿತ್ಲು ಗ್ರಾಮದ ಲ್ಯಾನ್ಸಿ ಲೋಬೊ ಅವರ ಮನೆ ಮೇಲೆ ಭಾರಿ ಗಾತ್ರದ ಮರ ಉರುಳಿ ಅಪಾರ ಹಾನಿ ಸಂಭವಿಸಿದೆ. ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಾಳೆಹೊನ್ನೂರು ಸುತ್ತಮುತ್ತ ಮಳೆ ಗಾಳಿಗೆ ಭೂ ಕುಸಿತ ಉಂಟಾಗಿದೆ.
ಭೂ ಕುಸಿತದಿಂದ ಸುಧಾಕರ ಅವರಿಗೆ ಸೇರಿದ ಬಾವಿ, ತೋಟಕ್ಕೆ ಹಾನಿಯಾಗಿದೆ. ಅಡಕೆ ಮರಗಳು ಮುರಿದು ಬಿದ್ದಿವೆ. ಕೊಪ್ಪ, ಶೃಂಗೇರಿ, ಮೂಡಿಗೆರೆ ತಾಲೂಕಿನ ಹಲವು ಕಡೆಗಳಲ್ಲಿ ಮರಗಳು ಬಿದ್ದು ಹಾನಿಯಾಗಿದೆ. ಮಳೆ, ಗಾಳಿ ಮತ್ತು ಚಳಿಯಲ್ಲಿ ಮಲೆನಾಡು ಮುದುಡಿದ್ದು, ವಿದ್ಯುತ್ ಇಲ್ಲದೆ ನೂರಾರು ಗ್ರಾಮಗಳು ಕತ್ತಲೆಯಲ್ಲಿ ಮುಳುಗಿವೆ.
ಮಂಗಳವಾರ ಬೆಳಗ್ಗೆ 8ಕ್ಕೆ ಮುಕ್ತಾಯವಾದಂತೆ ಶೃಂಗೇರಿ ತಾಲೂಕಿನ ಕೆರೆಕಟ್ಟೆಯಲ್ಲಿ ಅತಿಹೆಚ್ಚು 111ಮಿ.ಮೀ. ಮಳೆಯಾಗಿದೆ. ಕಿಗ್ಗ 78, ಶೃಂಗೇರಿ 54.2, ಕೊಪ್ಪ 62, ಹರಿಹರಪುರ 70.9, ಮೂಡಿಗೆರೆ 42.8, ಕೊಟ್ಟಿಗೆಹಾರ 96.2,ಚಿಕ್ಕಮಗಳೂರು 9 ಮಿ.ಮೀ. ಮಳೆಯಾಗಿದೆ.