ಆ್ಯಪ್ನಗರ

ಸಾಹಿತ್ಯದ ಸಂಗ ಸನ್ನಡತೆಗೆ ದಾರಿ

ಮೌಲ್ಯಯುತವಾದ ಸಾಹಿತ್ಯ ಬದುಕನ್ನು ರೂಪಿಸಿಕೊಳ್ಳಲು ಸಹಕಾರಿಯಾಗಿದೆ ಎಂದು ಕ್ಷೇತ್ರ ಶಿಕ್ಷ ಣಾಧಿಕಾರಿ ಎನ್‌.ಜಿ.ರಾಘವೇಂದ್ರ ಹೇಳಿದರು.

Vijaya Karnataka 22 Nov 2018, 9:22 pm
ಶೃಂಗೇರಿ : ಮೌಲ್ಯಯುತವಾದ ಸಾಹಿತ್ಯ ಬದುಕನ್ನು ರೂಪಿಸಿಕೊಳ್ಳಲು ಸಹಕಾರಿಯಾಗಿದೆ ಎಂದು ಕ್ಷೇತ್ರ ಶಿಕ್ಷ ಣಾಧಿಕಾರಿ ಎನ್‌.ಜಿ.ರಾಘವೇಂದ್ರ ಹೇಳಿದರು.
Vijaya Karnataka Web
ಸಾಹಿತ್ಯದ ಸಂಗ ಸನ್ನಡತೆಗೆ ದಾರಿ


ಪಟ್ಟಣದ ಜ್ಞಾನಭಾರತಿ ವಿದ್ಯಾಕೇಂದ್ರದಲ್ಲಿ ರಾಷ್ಟ್ರಕವಿ ಕುವೆಂಪು ವೇದಿಕೆಯಲ್ಲಿ ಬುಧವಾರ ಏರ್ಪಡಿಸಿದ್ದ ಮಕ್ಕಳ ಸಾಹಿತ್ಯ ಕಾರ್ಯಕ್ರಮದಲ್ಲಿ ಮಾತನಾಡಿದರು.

ದೃಶ್ಯ ಮಾಧ್ಯಮದ ಪ್ರಭಾವದಿಂದ ವಿದ್ಯಾರ್ಥಿಗಳ ಓದಿನಲ್ಲಿ ಆಸಕ್ತಿ ಕಡಿಮೆಯಾಗಿದೆ. ಸಾಮಾಜಿಕ ಸಮಸ್ಯೆ, ಸ್ಥಿತಿ ಗತಿ ಅರಿವು ಮೂಡಿಸಲು ಓದು ಸಹಕಾರಿಯಾಗಲಿದೆ. ಈ ಹಿಂದೆ ಮಕ್ಕಳ ಪತ್ರಿಕೆಯಾದ ಚಂದಮಾಮ, ಬಾಲಮಿತ್ರದಂತಹ ಪತ್ರಿಕೆ ಮಕ್ಕಳನ್ನು ಆಕರ್ಷಿಸುತ್ತಿದ್ದವು. ಆದರೆ ಈಗ ಮಕ್ಕಳು ಕಥೆ ಪುಸ್ತಕ ಓದುವ ಹವ್ಯಾಸವನ್ನು ಮರೆಯುತ್ತಿದ್ದಾರೆ ಎಂದರು.

ಸಮ್ಮೇಳನಾಧ್ಯಕ್ಷ ಕಲ್ಮಕ್ಕಿ ಸುರೇಶ್‌ ಮಾತನಾಡಿ, ಸಾಹಿತ್ಯದಲ್ಲಿ ವಿದ್ಯಾರ್ಥಿಗಳು ಆಸಕ್ತಿ ಬೆಳಸಿಕೊಳ್ಳಬೇಕು. ಸಾಹಿತ್ಯ ಉತ್ತಮ ಬದುಕಿಗೆ ಸಹಾಯಕವಾಗಲಿದೆ. ಸನ್ನಡತೆ ಇಲ್ಲದವರೂ ಸಾಹಿತ್ಯದ ಪ್ರೇರಣೆಯಿಂದ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗುತ್ತಾರೆ ಎಂದರು.

ಶಿಕ್ಷ ಣ ಸಂಸ್ಥೆಯ ಕೆ.ಶ್ರೀಕಾಂತ್‌ ಅಧ್ಯಕ್ಷ ತೆ ವಹಿಸಿದ್ದರು. ಲಕ್ಷ್ಮೀನಾರಾಯಣಭಟ್‌, ಜಿ.ಎಂ.ಸತೀಶ್‌, ನೆ.ಲ.ಸುಬ್ರಮಣ್ಯ, ಮುಖ್ಯ ಶಿಕ್ಷ ಕ ಶಂಕರನಾರಾಯಣ ಇದ್ದರು.

ಇದಕ್ಕೂ ಮೊದಲು ಶಾಲಾ ವಿದ್ಯಾರ್ಥಿಗಳು ಮುಖ್ಯ ರಸ್ತೆಯಲ್ಲಿ ಮೆರವಣಿಗೆ ಮೂಲಕ ಸಮ್ಮೇಳನಾಧ್ಯಕ್ಷ ರನ್ನು ಕರೆತರಲಾಯಿತು. ಮೆರವಣಿಗೆಯಲ್ಲಿ ಶಾಲೆಯ ವಿದ್ಯಾರ್ಥಿಗಳ ಸ್ಥಬ್ದಚಿತ್ರ, ಮರಗಾಲು, ವೀರಾಗಾಸೆ, ಕೋಲಾಟ, ಕಲಾ ತಂಡ ಉತ್ಸವಕ್ಕೆ ಮೆರಗು ನೀಡಿತ್ತು. ಮಕ್ಕಳಿಂದಲೇ ನಡೆದ ಸಾಹಿತ್ಯ ಸಮ್ಮೆಳನದ ಉಸ್ತುವಾರಿ, ನಿರ್ವಹಣೆ ಮಕ್ಕಳೇ ಮಾಡಿದ್ದು ವಿಶೇಷವಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ