ಚಿಕ್ಕಮಗಳೂರು: ಜಗದ್ಗುರು ಶ್ರೀ ಆದಿಶಂಕರಾಚಾರ್ಯರು ಸನಾತನ ಹಿಂದು ಧರ್ಮ, ಸಂಸ್ಕೃತಿ ಮತ್ತು ಪರಂಪರೆಯ ಉದ್ಧಾರಕ್ಕಾಗಿ ಜನ್ಮ ತಳೆದವರು ಎಂದು ಬ್ರಾಹ್ಮಣ ಮಹಾಸಭಾದ ನಿಕಟಪೂರ್ವ ಅಧ್ಯಕ್ಷ ಡಿ.ಎಚ್.ನಟರಾಜ್ ಹೇಳಿದರು.
ಶೃಂಗೇರಿ ಶಂಕರಮಠ ಮತ್ತು ಬ್ರಾಹ್ಮಣ ಮಹಾಸಭಾ, ಜಗದ್ಗುರು ಶ್ರೀ ಶಂಕರಾಚಾರ್ಯರು ಮತ್ತು ರಾಮಾನುಜಾಚಾರ್ಯರ ಜಯಂತಿ ಅಂಗವಾಗಿ ನಗರದ ರಂಗಣ್ಣನವರ ಕಲ್ಯಾಣ ಮಂಟಪದಲ್ಲಿ ಆಯೋಜಿಸಿರುವ ನಾಲ್ಕು ದಿನದ ಧಾರ್ಮಿಕ ಪ್ರವಚನ ಕಾರ್ಯಕ್ರಮಕ್ಕೆ ಸೋಮವಾರ ಚಾಲನೆ ನೀಡಿ ಮಾತನಾಡಿದರು. ಶಂಕರಾಚಾರ್ಯರ ತತ್ವ ,ಸಿದ್ಧಾಂತಗಳು ಹಾಗೂ ಸಂದೇಶಗಳು ಸಾರ್ವಕಾಲಿಕ ಸತ್ಯ. ಅವರು ಅದ್ವೈತ ಸಿದ್ಧಾಂತವನ್ನು ಪ್ರತಿಪಾದಿಸಿದ್ದರಿಂದ ನಂತರ ಅನೇಕ ಸಿದ್ಧಾಂತಗಳು ಹುಟ್ಟಲು ಕಾರಣವಾಯಿತು ಎಂದರು.
ಅದ್ವೈತ ವಾಚಸ್ಪತಿ ಡಾ.ಪಾವಗಡ ಪ್ರಕಾಶ್ರಾವ್ಧಾರ್ಮಿಕ ಪ್ರವಚನ ನೀಡಿ, ಒಂದು ವಸ್ತು ನಮ್ಮ ಕಣ್ಣಿಗೆ ಕಾಣುವುದಿಲ್ಲ ಎಂದ ಮಾತ್ರಕ್ಕೆ ಅದು ಇಲ್ಲವೇ ಇಲ್ಲ ಎನ್ನುವುದು ತಪ್ಪು. ಗಾಳಿ ಕಣ್ಣಿಗೆ ಕಾಣುವುದಿಲ್ಲ. ಆದರೆ ಅದಿಲ್ಲದಿದ್ದರೆ ಯಾರೂ ಬದುಕಲು ಸಾಧ್ಯವಿಲ್ಲ. ಅದೇ ರೀತಿ ಆತ್ಮ ಕಣ್ಣಿಗೆ ಕಾಣುವುದಿಲ್ಲ. ಆದರೂ ಅದು ಇದೆ. ದೇವರು ಸಹ ಕಾಣುವುದಿಲ್ಲ ಆದರೂ ದೇವರಿದ್ದಾನೆ ಎಂದು ಹೇಳಿದರು.
ಪ್ರವಚನದುದ್ದಕ್ಕೂ ಧರ್ಮದ ಸೂಕ್ಷ ್ಮತೆಯ ಪರಿಚಯ ಮಾಡಿಕೊಟ್ಟ ಅವರು, ಧರ್ಮ ಎಂದರೆ ಧರಿಸಿರುವುದು ಎಂದರ್ಥ ಎಂದು ತಿಳಿಸಿದರು. ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಪಿ.ಮಂಜುನಾಥ ಜೋಷಿ ಅಧ್ಯಕ್ಷ ತೆ ವಹಿಸಿದ್ದರು. ಖಜಾಂಚಿ ಎಚ್.ಆರ್.ಮೋಹನ್, ಪತ್ರಕರ್ತ ಸ.ಗಿರಿಜಾಶಂಕರ್ ಹಾಜರಿದ್ದರು.ಸುಮಾ ಪ್ರಸಾದ್ ನಿರೂಪಿಸಿ, ಮಹಾಸಭಾದ ಜಂಟಿ ಕಾರ್ಯದರ್ಶಿ ಗೋಪಾಲಕೃಷ್ಣ ಸ್ವಾಗತಿಸಿದರು. ಶಂಕರ ಜಯಂತಿ ಉಪ ಸಮಿತಿ ಅಧ್ಯಕ್ಷ ಎ.ಎನ್.ಮೂರ್ತಿ ವಂದಿಸಿದರು.
ಶೃಂಗೇರಿ ಶಂಕರಮಠ ಮತ್ತು ಬ್ರಾಹ್ಮಣ ಮಹಾಸಭಾ, ಜಗದ್ಗುರು ಶ್ರೀ ಶಂಕರಾಚಾರ್ಯರು ಮತ್ತು ರಾಮಾನುಜಾಚಾರ್ಯರ ಜಯಂತಿ ಅಂಗವಾಗಿ ನಗರದ ರಂಗಣ್ಣನವರ ಕಲ್ಯಾಣ ಮಂಟಪದಲ್ಲಿ ಆಯೋಜಿಸಿರುವ ನಾಲ್ಕು ದಿನದ ಧಾರ್ಮಿಕ ಪ್ರವಚನ ಕಾರ್ಯಕ್ರಮಕ್ಕೆ ಸೋಮವಾರ ಚಾಲನೆ ನೀಡಿ ಮಾತನಾಡಿದರು. ಶಂಕರಾಚಾರ್ಯರ ತತ್ವ ,ಸಿದ್ಧಾಂತಗಳು ಹಾಗೂ ಸಂದೇಶಗಳು ಸಾರ್ವಕಾಲಿಕ ಸತ್ಯ. ಅವರು ಅದ್ವೈತ ಸಿದ್ಧಾಂತವನ್ನು ಪ್ರತಿಪಾದಿಸಿದ್ದರಿಂದ ನಂತರ ಅನೇಕ ಸಿದ್ಧಾಂತಗಳು ಹುಟ್ಟಲು ಕಾರಣವಾಯಿತು ಎಂದರು.
ಅದ್ವೈತ ವಾಚಸ್ಪತಿ ಡಾ.ಪಾವಗಡ ಪ್ರಕಾಶ್ರಾವ್ಧಾರ್ಮಿಕ ಪ್ರವಚನ ನೀಡಿ, ಒಂದು ವಸ್ತು ನಮ್ಮ ಕಣ್ಣಿಗೆ ಕಾಣುವುದಿಲ್ಲ ಎಂದ ಮಾತ್ರಕ್ಕೆ ಅದು ಇಲ್ಲವೇ ಇಲ್ಲ ಎನ್ನುವುದು ತಪ್ಪು. ಗಾಳಿ ಕಣ್ಣಿಗೆ ಕಾಣುವುದಿಲ್ಲ. ಆದರೆ ಅದಿಲ್ಲದಿದ್ದರೆ ಯಾರೂ ಬದುಕಲು ಸಾಧ್ಯವಿಲ್ಲ. ಅದೇ ರೀತಿ ಆತ್ಮ ಕಣ್ಣಿಗೆ ಕಾಣುವುದಿಲ್ಲ. ಆದರೂ ಅದು ಇದೆ. ದೇವರು ಸಹ ಕಾಣುವುದಿಲ್ಲ ಆದರೂ ದೇವರಿದ್ದಾನೆ ಎಂದು ಹೇಳಿದರು.
ಪ್ರವಚನದುದ್ದಕ್ಕೂ ಧರ್ಮದ ಸೂಕ್ಷ ್ಮತೆಯ ಪರಿಚಯ ಮಾಡಿಕೊಟ್ಟ ಅವರು, ಧರ್ಮ ಎಂದರೆ ಧರಿಸಿರುವುದು ಎಂದರ್ಥ ಎಂದು ತಿಳಿಸಿದರು. ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಪಿ.ಮಂಜುನಾಥ ಜೋಷಿ ಅಧ್ಯಕ್ಷ ತೆ ವಹಿಸಿದ್ದರು. ಖಜಾಂಚಿ ಎಚ್.ಆರ್.ಮೋಹನ್, ಪತ್ರಕರ್ತ ಸ.ಗಿರಿಜಾಶಂಕರ್ ಹಾಜರಿದ್ದರು.ಸುಮಾ ಪ್ರಸಾದ್ ನಿರೂಪಿಸಿ, ಮಹಾಸಭಾದ ಜಂಟಿ ಕಾರ್ಯದರ್ಶಿ ಗೋಪಾಲಕೃಷ್ಣ ಸ್ವಾಗತಿಸಿದರು. ಶಂಕರ ಜಯಂತಿ ಉಪ ಸಮಿತಿ ಅಧ್ಯಕ್ಷ ಎ.ಎನ್.ಮೂರ್ತಿ ವಂದಿಸಿದರು.