ಆ್ಯಪ್ನಗರ

ರೈತರಿಗೆ ಕೃಷಿ ತಂತ್ರಜ್ಞಾನ ಮಾಹಿತಿ ಅಗತ್ಯ

ಆತ್ಮ ಯೋಜನೆ ಮೂಲಕ ಭತ್ತದ ಬಿತ್ತನೆ ಕಾರ್ಯದಿಂದ ಕಟಾವುವರೆಗಿನ ತಂತ್ರಜ್ಞಾನದ ಬಗ್ಗೆ ರೈತರ ಜಮೀನಿನಲ್ಲಿ ಮಾಹಿತಿ ಒದಗಿಸಲಾಗುತ್ತದೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಸಚಿನ್‌ ಹೆಗಡೆ ಹೇಳಿದರು.

Vijaya Karnataka 7 Jul 2019, 5:00 am
ಶೃಂಗೇರಿ: ಆತ್ಮ ಯೋಜನೆ ಮೂಲಕ ಭತ್ತದ ಬಿತ್ತನೆ ಕಾರ್ಯದಿಂದ ಕಟಾವುವರೆಗಿನ ತಂತ್ರಜ್ಞಾನದ ಬಗ್ಗೆ ರೈತರ ಜಮೀನಿನಲ್ಲಿ ಮಾಹಿತಿ ಒದಗಿಸಲಾಗುತ್ತದೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಸಚಿನ್‌ ಹೆಗಡೆ ಹೇಳಿದರು.
Vijaya Karnataka Web CKM-6SRI3


ಕೃಷಿ ಇಲಾಖೆಯಲ್ಲಿ ಶನಿವಾರ ಏರ್ಪಡಿಸಿದ್ದ ಆತ್ಮ ಯೋಜನೆಯ ಸಭೆಯಲ್ಲಿ ಮಾತನಾಡಿದರು.

ಆತ್ಮ ಯೋಜನೆಯ ಮೂಲಕ ರೈತರಿಗೆ ಹೊಸ ತಳಿಯ ಭತ್ತ, ಆಧುನಿಕ ತಂತ್ರಜ್ಞಾನದ ಮಾಹಿತಿ ನೀಡಲಾಗುತ್ತದೆ. ಆತ್ಮ ಯೋಜನೆ ಸಮಿತಿ ಎರಡು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ವಿವಿಧ ಇಲಾಖೆಯಿಂದ ಸದಸ್ಯರ ಪಟ್ಟಿ ನೀಡುವಂತೆ ಕೇಳಲಾಗಿದೆ ಎಂದರು.

ತಾ.ಪಂ. ಸದಸ್ಯ ರಾಮಕೃಷ್ಣ ಮಾತನಾಡಿ, ಆತ್ಮ ಯೋಜನೆ ರೈತರಿಗೆ ಉಪಯುಕ್ತ ಯೋಜನೆಯಾಗಿದ್ದರೂ, ಸಮಿತಿ ಸಭೆ ನಡೆಯದೇ ಸದಸ್ಯರಿಗೆ ಮಾಹಿತಿ ದೊರಕುತ್ತಿಲ್ಲ. ಅಧಿಕಾರಿಗಳು ಇಲ್ಲ ಎಂಬ ಸಬೂಬು ನೀಡುವುದು ಸರಿಯಲ್ಲ. ಎರಡು ವರ್ಷದಲ್ಲಿ ಎರಡು ಸಭೆ ನಡೆಸುವುದಾದಲ್ಲಿ ಸಮಿತಿಗೆ ಅರ್ಥ ಇಲ್ಲ. ಮುಂದಿನ ಸಮಿತಿ ರಚನೆಯಾದ ನಂತರ ರೈತರಿಗೆ ಉಪಯುಕ್ತ ಮಾಹಿತಿ ನೀಡುವ ಯೋಜನೆ ರೂಪಿಸಬೇಕು ಎಂದರು.

ಆತ್ಮ ಯೋಜನೆಯ ಕಾವ್ಯ ಮಾತನಾಡಿ, ಎರಡು ಹೊಸ ತಳಿ ಭತ್ತದ ಬೀಜ ಪ್ರಾತ್ಯಕ್ಷಿಕೆ ನಡೆಸಲು ಲಭ್ಯವಿದ್ದು, ಅದು ಇಲ್ಲಿಗೆ ಸೂಕ್ತವಾಗುತ್ತದೆಯೇ ಎಂದು ಪರೀಕ್ಷಿಸಲು ಜಮೀನಿನಲ್ಲಿ ಬಿತ್ತನೆ ಮಾಡಲಾಗುತ್ತದೆ. ಆತ್ಮ ಯೋಜನೆಯ ಮುಂದಿನ ಸಮಿತಿ ಸದಸ್ಯರನ್ನು ಆಯ್ಕೆ ಮಾಡಿಕೊಂಡು ಶೀಘ್ರವೇ ಸಭೆ ನಡೆಸಲಾಗುತ್ತದೆ ಎಂದರು.

ತಾ.ಪಂ. ಅಧ್ಯಕ್ಷೆ ಜಯಶೀಲ ಅಧ್ಯಕ್ಷ ತೆ ವಹಿಸಿದ್ದರು. ಆತ್ಮ ಯೋಜನೆ ಸಮಿತಿ ಅಧ್ಯಕ್ಷ ಕಾಡಪ್ಪಗೌಡ, ತೋಟಗಾರಿಕೆ ಇಲಾಖೆಯ ಶ್ರೀ ಕೃಷ್ಣ, ಪಶು ವೈದ್ಯ ಇಲಾಖೆಯ ಡಾ.ಪ್ರದೀಪ್‌, ಸಮಿತಿ ಸದಸ್ಯರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ