ಆ್ಯಪ್ನಗರ

ನಿರಂತರ ಶ್ರಮ,ಶ್ರದ್ಧೆಯಿಂದ ಸಾಧನೆ ಸಾಧ್ಯ

ಪಟ್ಟಣದ ಪ್ರತಿಭೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭರತನಾಟ್ಯ ವಿಭಾಗದಲ್ಲಿ ಸ್ಪರ್ಧಿಸಲು ತೆರಳುತ್ತಿರುವುದು ಹೆಮ್ಮೆಯ ಸಂಗತಿ ಎಂದು ಜಿ.ಪಂ. ಸದಸ್ಯ ಕೆ.ಆರ್‌.ಮಹೇಶ್‌ಒಡೆಯರ್‌ ಹೇಳಿದರು.

Vijaya Karnataka 14 Jul 2019, 5:00 am
ಕಡೂರು : ಪಟ್ಟಣದ ಪ್ರತಿಭೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭರತನಾಟ್ಯ ವಿಭಾಗದಲ್ಲಿ ಸ್ಪರ್ಧಿಸಲು ತೆರಳುತ್ತಿರುವುದು ಹೆಮ್ಮೆಯ ಸಂಗತಿ ಎಂದು ಜಿ.ಪಂ. ಸದಸ್ಯ ಕೆ.ಆರ್‌.ಮಹೇಶ್‌ಒಡೆಯರ್‌ ಹೇಳಿದರು.
Vijaya Karnataka Web CKM-13KDR1


ಪಟ್ಟಣದ ಶಾಸಕರ ಮಾದರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಅಂತಾರಾಷ್ಟ್ರೀಯ ಭರತನಾಟ್ಯ ಸ್ಪರ್ಧೆಗೆ ಮಲೇಷಿಯಾಕ್ಕೆ ತೆರಳುತ್ತಿರುವ ನಟನಂ ಬಾಲ ನಾಟ್ಯ ಕೇಂದ್ರದ ವಿದ್ಯಾರ್ಥಿನಿ ಎಸ್‌.ಪಿ.ಭೂಮಿಕಾ ಅವರಿಗೆ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿ, ಅಂತಾರಾಷ್ಟ್ರೀಯ ಮಹಿಳಾ ಕ್ರಿಕೆಟ್‌ ಭಾಗದಲ್ಲಿ ಕಡೂರಿನ ವೇದಾ ಕೃಷ್ಣಮೂರ್ತಿ ಅವರು ಪಾಲ್ಗೊಂಡು ಕೀರ್ತಿ ತಂದಿದ್ದಾರೆ.ತಾಲೂಕಿನ ನೂರಾರು ಇಂತಹ ಕಿರು ಪ್ರತಿಭೆಗಳು ಯೋಗಾಸನ ವಿಭಾಗದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಸಾಧನೆ ಪ್ರತಿಬಿಂಭಿಸಿದ್ದಾರೆ.ಈ ಮಟ್ಟಕ್ಕೆ ಬೆಳೆಯಬೇಕಾದರೆ ನಿರಂತರ ಶ್ರಮ,ಶ್ರದ್ಧೆಯಿಂದ ಮಾತ್ರ ಸಾಧ್ಯ ಎಂದರು.

ಅಧ್ಯಕ್ಷ ತೆ ವಹಿಸಿದ್ದ ರಾಜ್ಯ ಸರಕಾರಿ ನೌಕರರ ಸಂಘದ ತಾಲೂಕು ಘಟಕದ ಅಧ್ಯಕ್ಷ ಎಸ್‌.ಬಸವರಾಜು ಮಾತನಾಡಿ, ವೆಂಕಲಕ್ಷ ್ಮಮ್ಮ ಅವರ ಸ್ಮಾರಕ ನಿರ್ಮಾಣಕ್ಕೆ ನೌಕರರ ಸಂಘದ ವತಿಯಿಂದ 10 ಸಾವಿರ ರೂ.ಗಳ ದೇಣಿಗೆ ನೀಡಲಾಗುವುದು ಎಂದರು. ಜಿ.ಪಂ. ಸದಸ್ಯ ಶರತ್‌ಕೃಷ್ಣಮೂರ್ತಿ ಮಾತನಾಡಿದರು.

ನಟನಂ ಬಾಲ ನಾಟ್ಯ ಕೇಂದ್ರದ ಸ್ಥಾಪಕ ಮತ್ತು ವಿಧ್ವಾನ್‌ ಕೇಶವಕುಮಾರ್‌ಪಿಳ್ಳೈ ಮಾತನಾಡಿ, ಜು.21ರಂದು ಮಲೇಷಿಯಾ ದೇಶದಲ್ಲಿ ಅಲ್ಲಿನ ಅಂತಾರಾಷ್ಟ್ರೀಯ ಭರತನಾಟ್ಯ ಕಲಾ ಮತ್ತು ಸಾಂಸ್ಕೃತಿಕ ಸಂಘವು ಭರತನಾಟ್ಯ ಸ್ಪರ್ಧೆಯು ಆಯೋಜಿಸಿದೆ. ಸ್ಪರ್ಧೆ ಬಳಿಕ ಜುಲೈ. 23 ರಂದು ವಿಜೇತರಾದವರಿಂದ ಸಾರ್ವಜನಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಜಿ.ಪಂ ಸದಸ್ಯೆ ಕಾವೇರಿ, ನಿವೃತ್ತ ಮುಖ್ಯ ಶಿಕ್ಷಕ ಟಿ.ಆರ್‌.ಲಕ್ಕಪ್ಪ, ಸರಕಾರಿ ನೌಕರರ ಸಂಘದ ನಿರ್ದೇಶಕರಾದ ವೈ.ಎಂ.ತಿಪ್ಪೇಶ್‌, ಮಲ್ಲಿಕಾರ್ಜುನ್‌, ಉದ್ಯಮಿ ಬೋರ್‌ವೆಲ್‌ ರವಿ ಉಪಸ್ಥಿತರಿದ್ದರು. ಈ ಸಂದರ್ಭ ವಿದ್ಯಾರ್ಥಿನಿ ಭೂಮಿಕಾ ಅವರನ್ನು ಅಭಿನಂದಿಸಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ