ಆ್ಯಪ್ನಗರ

ಶೃಂಗೇರಿಯಲ್ಲಿ ತನಿ ಎರೆದ ಭಕ್ತರು

ತಾಲೂಕಿನಾದ್ಯಂತ ಶ್ರಾವಣ ಮಾಸದ ಮೊದಲ ಹಬ್ಬ ನಾಗರಪಂಚಮಿಯನ್ನು ಸೋಮವಾರ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.

Vijaya Karnataka 7 Aug 2019, 6:35 pm
ಶೃಂಗೇರಿ : ತಾಲೂಕಿನಾದ್ಯಂತ ಶ್ರಾವಣ ಮಾಸದ ಮೊದಲ ಹಬ್ಬ ನಾಗರಪಂಚಮಿಯನ್ನು ಸೋಮವಾರ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
Vijaya Karnataka Web CKM-5SRI2


ಸುರಿಯುವ ಮಳೆಯನ್ನು ಲೆಕ್ಕಿಸದೆ, ಬೆಳಗ್ಗೆಯೇ ನಾಗರಕಟ್ಟೆಗಳಿಗೆ ತೆರಳಿದ ಭಕ್ತರು, ನಾಗದೇವರಿಗೆ ಹೂವು, ಪತ್ರೆ, ಶಿಂಗಾರ, ಅರಿಶಿನದಿಂದ ಅಲಂಕರಿಸಿ ತನಿ ಎರೆಯಲಾಯಿತು. ನಾಗದೇವರಿಗೆ ಹಾಲು,ಬಾಳೆಹಣ್ಣು,ನೈವೈದ್ಯ ಸಮರ್ಪಿಸಲಾಯಿತು. ತಾಲೂಕಿನ ಕೆಲವು ಮನೆಯಲ್ಲಿ ಮಹಿಳೆಯರು ನಾಗರಪಂಚಮಿಯ ವಿಶೇಷ ವ್ರತವನ್ನು ಆಚರಿಸಿದರು.

ಶ್ರೀಮಠದ ಶ್ರೀಸುಬ್ರಮಣ್ಯ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆದಿದ್ದು, ನೂರಾರು ಭಕ್ತರು ಸ್ವಾಮಿಯ ಸನ್ನಿಧಿಗೆ ಆಗಮಿಸಿದ್ದರು. ಪಟ್ಟಣದ ಜಿಎಸ್‌ಬಿ ಸಭಾಭವನ ಸಮೀಪದ ನಾಗರಕಟ್ಟೆ, ಕೆರೆದಂಡೆ, ಶ್ರೀ ಮಲಹಾನಿಕರೇಶ್ವರಸ್ವಾಮಿ ದೇವಸ್ಥಾನ, ಕಿಗ್ಗಾ, ಮೆಣಸೆ, ಸಂಕ್ಳಾಪುರ, ಅಡ್ಡಗದ್ದೆ,ಕಾವಡಿ,ಕುಂಚೆಬೈಲು,ಕೂತಗೋಡು ಮುಂತಾದೆಡೆಯ ನಾಗ ದೇವರ ಸನ್ನಿಯಲ್ಲಿ ವಿಶೇಷ ಪೂಜೆ ನಡೆಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ