ಆ್ಯಪ್ನಗರ

ಒಂದೇ ಕುಟುಂಬದ 6 ಮಂದಿಗೆ ಹೆಜ್ಜೇನು ಕಡಿತ

ಮನೆ ಮುಂದಿನ ಕೈತೋಟದಲ್ಲಿ ಕೆಲಸ ಮಾಡುತ್ತಿದ್ದ ಒಂದೇ ಕುಟುಂಬದ 6 ಮಂದಿಗೆ ಹೆಜ್ಜೇನು ನೊಣಗಳು ಕಚ್ಚಿದ್ದು ಅವರಲ್ಲಿ ಶತಾಯುಷಿ ನಿಂಗಮ್ಮ ಅವರ ಸ್ಥಿತಿ ಗಂಭೀರವಾಗಿದೆ.

ವಿಕ ಸುದ್ದಿಲೋಕ 18 Mar 2016, 5:52 am
ಚಿಕ್ಕಮಗಳೂರು: ಮನೆ ಮುಂದಿನ ಕೈತೋಟದಲ್ಲಿ ಕೆಲಸ ಮಾಡುತ್ತಿದ್ದ ಒಂದೇ ಕುಟುಂಬದ 6 ಮಂದಿಗೆ ಹೆಜ್ಜೇನು ನೊಣಗಳು ಕಚ್ಚಿದ್ದು ಅವರಲ್ಲಿ ಶತಾಯುಷಿ ನಿಂಗಮ್ಮ ಅವರ ಸ್ಥಿತಿ ಗಂಭೀರವಾಗಿದೆ.
Vijaya Karnataka Web  6
ಒಂದೇ ಕುಟುಂಬದ 6 ಮಂದಿಗೆ ಹೆಜ್ಜೇನು ಕಡಿತ


ತಾಲೂಕಿನ ಕೆ.ಆರ್.ಪೇಟೆ ಸಮೀಪದ ತಿರುಗುಣ ಗ್ರಾಮದಲ್ಲಿ ಘಟನೆ ನಡೆದಿದ್ದು ಗ್ರಾಮದ ನಿಂಗಮ್ಮ (105), ಮಗ ರುದ್ರಯ್ಯ, ಸೊಸೆ ಮಂಜುಳ, ಮೊಮ್ಮಕ್ಕಳಾದ ಆನಂದ, ದಿಲೀಪ್ ಹಾಗೂ ಬಿಂದು ಎಂಬುವರಿಗೆ ಹೆಜ್ಜೇನು ಹುಳುಗಳು ಮುತ್ತಿಗೆ ಹಾಕಿ ಕಚ್ಚಿವೆ. ಇವರೊಂದಿಗಿದ್ದ ಸಾಕುನಾಯಿ ಜೇನುಹುಳು ಕಡಿತಕ್ಕೆ ಮೃತಪಟ್ಟಿದೆ. ತಕ್ಷಣ ಚಿಕಿತ್ಸೆ ಕೊಡಿಸಿದ್ದರಿಂದ ಹಸುವಿನ ಕರುವೊಂದು ಸಾವಿನಿಂದ ಪಾರಾಗಿದೆ. ಘಟನೆ ನಡೆದ ಕೂಡಲೇ ಸಂಬಂಧಿಕರ ವಾಹನದಲ್ಲಿ ಗಾಯಾಳುಗಳನ್ನು ಇಲ್ಲಿನ ಸರಕಾರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಿದ್ದು ನಿಂಗಮ್ಮ ಅವರ ಮೈಮೇಲಿದ್ದ 100ಕ್ಕೂ ಹೆಚ್ಚು ಜೇನ್ನೊಳಗಳ ಮುಳ್ಳುಗಳನ್ನು ದಾದಿಯರು ತೆಗೆದು ಚಿಕಿತ್ಸೆ ನೀಡಿದ್ದಾರೆ.

ಮನೆ ಮುಂದಿನ ಕಾಫಿ ತೋಟದಲ್ಲಿ ಹೆಜ್ಜೇನು ಕಟ್ಟಿರುವುದು ನಮ್ಮ ಗಮನಕ್ಕೆ ಬಂದಿರಲಿಲ್ಲ. ಗುರುವಾರ ಬೆಳಗ್ಗೆ ಎಂದಿನಂತೆ ತೋಟಕ್ಕೆ ಹೋದಾಗ ಗಿಡುಗವೊಂದು ಹೆಜ್ಜೇನು ಹುಟ್ಟಿಗೆ ರೆಕ್ಕೆಬಡಿದು ಹಾರಿಹೋಯಿತು. ಜೇನು ಸವಿಯಲು ಆ ಪಕ್ಷಿ ಈ ರೀತಿ ಮಾಡುವುದು ಸಾಮಾನ್ಯ. ಇದರಿಂದ ರೊಚ್ಚಿಗೆದ್ದ ಜೇನ್ನೊಣಗಳು ಸಮೀಪದಲ್ಲಿದ್ದ ತಮ್ಮ ಮನೆ ಮಂದಿಗೆಲ್ಲಾ ಕಡಿದವು ಎಂದು ಗಾಯಾಳು ಟಿ.ಪಿ.ರುದ್ರಯ್ಯ ಆಸ್ಪತ್ರೆಯಲ್ಲಿ ತಿಳಿಸಿದರು. ಆ ಸಂದರ್ಭದಲ್ಲಿ ತನೆಗೆ ಏನು ಮಾಡಬೇಕೆಂದು ತೋಚಲಿಲ್ಲ. ಕೂಡಲೇ ಸಮೀಪದಲ್ಲಿದ್ದ ಬಿಳಿಹುಲ್ಲಿನ ಬಣವೆಯಿಂದ ಒಂದು ಕಂತೆ ಹುಲ್ಲು ತಂದು ಬೆಂಕಿಹಚ್ಚಿದಾಗ ಹುಳುಗಳು ದೂರಾದವು ಎಂದು ಘಟನೆ ಬಗ್ಗೆ ವಿವರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ