ಅಜ್ಜಂಪುರ : ಹೊಸ ಮೋಟಾರು ವಾಹನ ಕಾಯಿದೆ ಜಾರಿಗೊಂಡ ನಂತರ ಪ್ರಥಮವಾಗಿ ಅಜ್ಜಂಪುರ ಠಾಣೆ ವ್ಯಾಪ್ತಿಯಲ್ಲಿಡ್ರಿಂಕ್ ಅಂಡ್ ಡ್ರೈವ್, ಇತರೆ ನಿಯಮ ಪಾಲನೆ ಮಾಡದಕ್ಕೆ ತರೀಕೆರೆ ಸಿವಿಲ್ ನ್ಯಾಯಾಧೀಶರು 15 ಸಾವಿರ ರೂ. ದಂಡ ವಿಧಿಸಿದ್ದಾರೆ.
ಹೊಸದುರ್ಗ ತಾಲೂಕು ಗೊರವಿನಕಲ್ಲುವಾಸಿ ಕುಮಾರ್ ಎಂಬುವರು ಡ್ರಿಂಕ್ ಅಂಡ್ ಡ್ರೈವ್ ಮಾಡಿದ್ದಲ್ಲದೆ ವಾಹನ ಚಾಲನ ಪರವಾನಗಿ, ವಾಹನದ ವಿಮೆ ಇಲ್ಲದ್ದರಿಂದ ಅಜ್ಜಂಪುರ ಠಾಣೆ ಪಿಎಸ್ಐ ಕೇಸು ದಾಖಲಿಸಿದ್ದರು.
ವಿಚಾರಣೆ ನಡೆಸಿದ ತರೀಕೆರೆ ಸಿವಿಲ್ ನ್ಯಾಯಾಧೀಶರು ಶುಕ್ರವಾರ 15 ಸಾವಿರ ದಂಡ ವಿಧಿಸಿದ್ದಾರೆ. ಯೂನಿಫಾರಂ, ಸೀಟ್ ಬೆಲ್ಟ್ ಧರಿಸದವರು, ಹೆಲ್ಮೆಟ್, ದಾಖಲಾತಿ ಇಲ್ಲದವರು, ಅನುಚಿತ ವರ್ತನೆ ಸೇರಿದಂತೆ ನಿಯಮ ಪಾಲನೆ ಮಾಡದವರಿಂದ ಒಟ್ಟು 91,900 ರೂ. ದಂಡ ವಸೂಲಿ ಮಾಡಲಾಗಿದೆ.
ಅಜ್ಜಂಪುರ ಟೌನ್, ತಮ್ಮಟದಹಳ್ಳಿ ಗೇಟ್, ಅಂತರಗಟ್ಟೆ, ಶಿವನಿ, ಬುಕ್ಕಾಂಬುಧಿಯ ಪ್ರಮುಖ ಸ್ಥಳಗಳಲ್ಲಿಪೊಲೀಸರು ದಂಡದ ಬ್ಯಾನರ್ ಹಾಕಿ, ಜನರಲ್ಲಿಜಾಗೃತಿ ಮೂಡಿಸುತ್ತಿದ್ದಾರೆ.
ದಂಡದ ಮೊತ್ತ ಹೆಚ್ಚಾಗಿದ್ದರಿಂದ ಹಲವು ಚಾಲಕರು ಕೇಂದ್ರ ಸರಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.ದ್ವಿಚಕ್ರ ವಾಹನ ಸವಾರರು ಕನಿಷ್ಠ ಹೆಲ್ಮೆಟ್ ಹಾಕಿಕೊಂಡು ಚಲಾಯಿಸಿದರೆ ಅಪಘಾತ ನಿಯಂತ್ರಣ ತರಬಹುದು. ಬಹುತೇಕರು ಹೆಲ್ಮೆಟ್ ಇದ್ದರೂ ಧರಿಸದೇ ಓಡಾಡುತ್ತಿದ್ದಾರೆ. ಚಾಲಕರಿಗೆ ವಾಹನ ಚಾಲನಾ ಪರವಾನಗಿ ನೀಡಲು ಪಟ್ಟಣದಲ್ಲಿಕ್ಯಾಂಪ್ ಮಾಡುವಂತೆ ಆರ್ಟಿಒ ಅಧಿಕಾರಿಗಳಿಗೆ ಕೋರಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
-----
ಚನ್ನಾಪುರ ಸಮೀಪ ಇತ್ತೀಚೆಗೆ ಅತಿ ವೇಗದಲ್ಲಿಸಂಚರಿಸಿ ಮಾರುತಿ ವ್ಯಾನೊಂದು ಅಪಘಾತವಾಯ್ತು. ಸ್ಥಳದಲ್ಲೇ ಚಾಲಕ ಅತ್ತಿಮೊಗ್ಗೆಯ ರುದ್ರಪ್ಪ ಮೃತಪಟ್ಟರು. ಉಳಿದವರು ಕೈ ಕಾಲು ಮುರಿದುಕೊಂಡು ವಿಕಲಚೇತನರಾದರು. ಮಾರುತಿ ವ್ಯಾನಿಗೆ ಎರಡು ವರ್ಷವಾದರೂ ರಿಜಿಸ್ಪ್ರೇಷನ್ ಆಗಿಲ್ಲ. ವಿಮೆ ಇಲ್ಲ. ಚಾಲಕನಿಗೆ ಡ್ರೈವಿಂಗ್ ಲೈಸೆನ್ಸ್ ಇಲ್ಲ. ಈ ಎಲ್ಲಕಾರಣಗಳಿಂದ ವಿಮೆ ದೊರಕಲಿಲ್ಲ. ಮೃತನನ್ನು ಆಶ್ರಯಿಸಿದ ಹೆಂಡತಿ-ಮಕ್ಕಳು ಅನಾಥರಾದರು. ಇಂತಹ ನೂರಾರು ಪ್ರಕರಣಗಳು ಠಾಣಾ ವ್ಯಾಪ್ತಿಯಲ್ಲಿನಡೆಯುತ್ತಿವೆ. ಇಂತಹುಗಳಿಗೆ ಕಡಿವಾಣ ಹಾಕಲು ಇಲಾಖೆ ಶ್ರಮಿಸುತ್ತಿದೆ.
-ರಫೀಕ್, ಪಿಎಸ್ಐ, ಅಜ್ಜಂಪುರ.
ಹೊಸದುರ್ಗ ತಾಲೂಕು ಗೊರವಿನಕಲ್ಲುವಾಸಿ ಕುಮಾರ್ ಎಂಬುವರು ಡ್ರಿಂಕ್ ಅಂಡ್ ಡ್ರೈವ್ ಮಾಡಿದ್ದಲ್ಲದೆ ವಾಹನ ಚಾಲನ ಪರವಾನಗಿ, ವಾಹನದ ವಿಮೆ ಇಲ್ಲದ್ದರಿಂದ ಅಜ್ಜಂಪುರ ಠಾಣೆ ಪಿಎಸ್ಐ ಕೇಸು ದಾಖಲಿಸಿದ್ದರು.
ವಿಚಾರಣೆ ನಡೆಸಿದ ತರೀಕೆರೆ ಸಿವಿಲ್ ನ್ಯಾಯಾಧೀಶರು ಶುಕ್ರವಾರ 15 ಸಾವಿರ ದಂಡ ವಿಧಿಸಿದ್ದಾರೆ. ಯೂನಿಫಾರಂ, ಸೀಟ್ ಬೆಲ್ಟ್ ಧರಿಸದವರು, ಹೆಲ್ಮೆಟ್, ದಾಖಲಾತಿ ಇಲ್ಲದವರು, ಅನುಚಿತ ವರ್ತನೆ ಸೇರಿದಂತೆ ನಿಯಮ ಪಾಲನೆ ಮಾಡದವರಿಂದ ಒಟ್ಟು 91,900 ರೂ. ದಂಡ ವಸೂಲಿ ಮಾಡಲಾಗಿದೆ.
ಅಜ್ಜಂಪುರ ಟೌನ್, ತಮ್ಮಟದಹಳ್ಳಿ ಗೇಟ್, ಅಂತರಗಟ್ಟೆ, ಶಿವನಿ, ಬುಕ್ಕಾಂಬುಧಿಯ ಪ್ರಮುಖ ಸ್ಥಳಗಳಲ್ಲಿಪೊಲೀಸರು ದಂಡದ ಬ್ಯಾನರ್ ಹಾಕಿ, ಜನರಲ್ಲಿಜಾಗೃತಿ ಮೂಡಿಸುತ್ತಿದ್ದಾರೆ.
ದಂಡದ ಮೊತ್ತ ಹೆಚ್ಚಾಗಿದ್ದರಿಂದ ಹಲವು ಚಾಲಕರು ಕೇಂದ್ರ ಸರಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.ದ್ವಿಚಕ್ರ ವಾಹನ ಸವಾರರು ಕನಿಷ್ಠ ಹೆಲ್ಮೆಟ್ ಹಾಕಿಕೊಂಡು ಚಲಾಯಿಸಿದರೆ ಅಪಘಾತ ನಿಯಂತ್ರಣ ತರಬಹುದು. ಬಹುತೇಕರು ಹೆಲ್ಮೆಟ್ ಇದ್ದರೂ ಧರಿಸದೇ ಓಡಾಡುತ್ತಿದ್ದಾರೆ. ಚಾಲಕರಿಗೆ ವಾಹನ ಚಾಲನಾ ಪರವಾನಗಿ ನೀಡಲು ಪಟ್ಟಣದಲ್ಲಿಕ್ಯಾಂಪ್ ಮಾಡುವಂತೆ ಆರ್ಟಿಒ ಅಧಿಕಾರಿಗಳಿಗೆ ಕೋರಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
-----
ಚನ್ನಾಪುರ ಸಮೀಪ ಇತ್ತೀಚೆಗೆ ಅತಿ ವೇಗದಲ್ಲಿಸಂಚರಿಸಿ ಮಾರುತಿ ವ್ಯಾನೊಂದು ಅಪಘಾತವಾಯ್ತು. ಸ್ಥಳದಲ್ಲೇ ಚಾಲಕ ಅತ್ತಿಮೊಗ್ಗೆಯ ರುದ್ರಪ್ಪ ಮೃತಪಟ್ಟರು. ಉಳಿದವರು ಕೈ ಕಾಲು ಮುರಿದುಕೊಂಡು ವಿಕಲಚೇತನರಾದರು. ಮಾರುತಿ ವ್ಯಾನಿಗೆ ಎರಡು ವರ್ಷವಾದರೂ ರಿಜಿಸ್ಪ್ರೇಷನ್ ಆಗಿಲ್ಲ. ವಿಮೆ ಇಲ್ಲ. ಚಾಲಕನಿಗೆ ಡ್ರೈವಿಂಗ್ ಲೈಸೆನ್ಸ್ ಇಲ್ಲ. ಈ ಎಲ್ಲಕಾರಣಗಳಿಂದ ವಿಮೆ ದೊರಕಲಿಲ್ಲ. ಮೃತನನ್ನು ಆಶ್ರಯಿಸಿದ ಹೆಂಡತಿ-ಮಕ್ಕಳು ಅನಾಥರಾದರು. ಇಂತಹ ನೂರಾರು ಪ್ರಕರಣಗಳು ಠಾಣಾ ವ್ಯಾಪ್ತಿಯಲ್ಲಿನಡೆಯುತ್ತಿವೆ. ಇಂತಹುಗಳಿಗೆ ಕಡಿವಾಣ ಹಾಕಲು ಇಲಾಖೆ ಶ್ರಮಿಸುತ್ತಿದೆ.
-ರಫೀಕ್, ಪಿಎಸ್ಐ, ಅಜ್ಜಂಪುರ.