ಆ್ಯಪ್ನಗರ

ತಳ್ಳಿಹಳ್ಳಕ್ಕೆ 2 ಕೋಟಿ ವಿಶೇಷ ಅನುದಾನ

ಮೂಡಿಗೆರೆ ಕ್ಷೇತ್ರದ ಶಾಸಕ ಎಂ.ಪಿ.ಕುಮಾರಸ್ವಾಮಿ 4 ಕೋಟಿ ಅನುದಾನ ನೀಡಿದರೆ ನಾನು 2 ಕೋಟಿ ವಿಶೇಷ ಅನುದಾನ ನೀಡಿ ತಳಿಹಳ್ಳ ಗ್ರಾಮ ಪಂಚಾಯಿತಿ ವ್ಯಾಪ್ತಿಯನ್ನು ಸಮಗ್ರ ಅಭಿವೃದ್ಧಿಪಡಿಸುವುದಾಗಿ ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಭರವಸೆ ನೀಡಿದರು

Vijaya Karnataka 1 Jul 2018, 5:00 am
ಚಿಕ್ಕಮಗಳೂರು: ಮೂಡಿಗೆರೆ ಕ್ಷೇತ್ರದ ಶಾಸಕ ಎಂ.ಪಿ.ಕುಮಾರಸ್ವಾಮಿ 4 ಕೋಟಿ ಅನುದಾನ ನೀಡಿದರೆ ನಾನು 2 ಕೋಟಿ ವಿಶೇಷ ಅನುದಾನ ನೀಡಿ ತಳಿಹಳ್ಳ ಗ್ರಾಮ ಪಂಚಾಯಿತಿ ವ್ಯಾಪ್ತಿಯನ್ನು ಸಮಗ್ರ ಅಭಿವೃದ್ಧಿಪಡಿಸುವುದಾಗಿ ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಭರವಸೆ ನೀಡಿದರು.
Vijaya Karnataka Web 2 crore special grant to tallihalla
ತಳ್ಳಿಹಳ್ಳಕ್ಕೆ 2 ಕೋಟಿ ವಿಶೇಷ ಅನುದಾನ


ತಾಲೂಕಿನ ತಳಿಹಳ್ಳ ಗ್ರಾಮ ಪಂಚಾಯಿತಿ ಹಾಗೂ ಐದೂರು ಗ್ರಾಮಸ್ಥರು ಶನಿವಾರ ಶಾಸಕದ್ವಯರಿಗೆ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.

ಚುನಾವಣೆಯಲ್ಲಿ ಮಾತ್ರ ಪಕ್ಷ ರಾಜಕೀಯ. ಗೆದ್ದ ನಂತರ ನಾವೆಲ್ಲರೂ ಪಕ್ಷಾತೀತವಾಗಿ ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಮಾತ್ರ ಗ್ರಾಮಗಳ ಅಭಿವೃದ್ಧಿ ಸಾಧ್ಯ. 6 ಕೋಟಿ ಅನುದಾನ ನೀಡಿದರೆ ಇಲ್ಲಿನ ಬಹುತೇಕ ರಸ್ತೆಗಳು ಸಂಪೂರ್ಣ ಅಭಿವೃದ್ಧಿ ಕಾಣುತ್ತವೆ. ಗ್ರಾಮದಲ್ಲಿ ದೊಡ್ಡ ಬಾವಿ ನಿರ್ಮಿಸಿ ಕುಡಿವ ನೀರಿಗೆ ಶಾಶ್ವತ ಪರಿಹಾರ ಕಲ್ಪಿಸಬಹುದು. ದೇವಸ್ಥಾನದ ಅಭಿವೃದ್ಧಿಯೂ ಆಗುತ್ತದೆ ಎಂದರು.

ಮಣ್ಣಿನ ಋುಣ ತೀರಿಸಲು ಕಾಲ ಕೂಡಿ ಬಂದಿದೆ. ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ಸ್ವಾರ್ಥ, ದ್ವೇಷ, ಅಸೂಯೆ ಬಿಟ್ಟು ಬಡವರ ಸೇವೆ ಮಾಡಿದರೆ ದೇವರು ನಮ್ಮನ್ನು ಕಾಯುತ್ತಾನೆ. ಆರ್‌ಎಸ್‌ಎಸ್‌ ಮತ್ತು ಬಿಜೆಪಿ ಹುಟ್ಟಿದ ಶೃಂಗೇರಿಯಲ್ಲಿ ಪ್ರಜ್ಞಾವಂತ ಮತದಾರರು ನನ್ನನ್ನು ನಂಬಿ ಆಯ್ಕೆ ಮಾಡಿದ್ದಾರೆ. ಅವರ ಪ್ರೀತಿ, ವಿಶ್ವಾಸಕ್ಕೆ ಎಂದೂ ದ್ರೋಹ ಬಗೆಯದೆ ಶ್ರೀಗಳ ಆಶೀರ್ವಾದದಿಂದ ಜನರ ಸೇವೆ ಮಾಡುತ್ತೇನೆ ಎಂದು ಹೇಳಿದರು.

ಕೃಷಿ ಅವಲಂಬಿಸಿದ್ದ ನಾನು ರಾಜಕೀಯವನ್ನು ಹೆಚ್ಚು ದ್ವೇಷಿಸುತ್ತಿದ್ದೆ. ಮಾಜಿ ಶಾಸಕ ಐ.ಬಿ.ಶಂಕರ್‌, ಪದ್ಮಾಕ್ಷೇಗೌಡ ಸೇರಿದಂತೆ ಹಲವು ಸ್ನೇಹಿತರ ಪ್ರೇರಣೆಯಿಂದ ಜಿಲ್ಲಾ ಪಂಚಾಯಿತಿಗೆ ಸ್ಪರ್ಧಿಸಿ 2 ಬಾರಿ ಗೆದ್ದು ಅಧ್ಯಕ್ಷನಾಗಿ ಜನಸೇವೆ ಮಾಡುವ ಅವಕಾಶ ದೊರೆಯಿತು. ಜಿಲ್ಲೆಯ ಯಾವುದೇ ಭಾಗವನ್ನು ಕಡೆಗಣಿಸದೆ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕ ಕೆಲಸ ಮಾಡಿದ್ದರ ಫಲವಾಗಿ ಇಂದು ನನ್ನನ್ನು ಶಾಸಕನನ್ನಾಗಿ ಆಯ್ಕೆ ಮಾಡಿದ್ದಾರೆ. ಇಲ್ಲಿ ಬಾಲ್ಯದ ದಿನಗಳನ್ನು ಕಳೆದಿದ್ದು, ಹುಟ್ಟೂರಿನ ಋುಣ ತೀರಿಸುವ ಜವಾಬ್ದಾರಿ ನನ್ನ ಮೇಲಿದೆ ಎಂದರು.

ಶಾಸಕ ಎಂ.ಪಿ.ಕುಮಾರಸ್ವಾಮಿ ಮಾತನಾಡಿ, ಈ ಚುನಾವಣೆಯಲ್ಲಿ ನಾನು ಸೋತಿದ್ದರೆ ನನ್ನ ಭವಿಷ್ಯ ಏನಾಗುತ್ತಿತ್ತೋ ಗೊತ್ತಿಲ್ಲ. ಮತದಾರರ ಪ್ರೀತಿ, ವಿಶ್ವಾಸದಿಂದ ಗೆದ್ದಿದ್ದೇನೆ. ಸುಮ್ಮನೆ ಕೂರುವ ಮನೋಭಾವ ನನ್ನದಲ್ಲ. ಜನರ ಆಶೋತ್ತರಗಳಿಗೆ ಸ್ಪಂದಿಸಿ ಬಡವರ ಸೇವೆ ಮಾಡುವುದೇ ಮುಖ್ಯ ಗುರಿ. ಗ್ರಾಮೀಣ ಪ್ರದೇಶಗಳಿಗೆ ಮೂಲಸೌಲಭ್ಯ ಕಲ್ಪಿಸಲು ಆದ್ಯತೆ ನೀಡಲಾಗುವುದು ಎಂದು ಹೇಳಿದರು.ಮಾಜಿ ಶಾಸಕ ಬಿ.ಬಿ.ನಿಂಗಯ್ಯ, ಜಿ.ಪಂ. ಸದಸ್ಯ ಸೋಮಶೇಖರ್‌, ಗ್ರಾ.ಪಂ. ಅಧ್ಯಕ್ಷ ವಿಜೇಂದ್ರ, ಎಪಿಎಂಸಿ ಮಾಜಿ ಅಧ್ಯಕ್ಷ ಕವೀಶ್‌, ಟಿ.ಡಿ.ಮಲ್ಲೇಶ್‌ ಮಾತನಾಡಿದರು. ತಾ.ಪಂ. ಮಾಜಿ ಅಧ್ಯಕ್ಷ ಉದ್ದಪ್ಪ, ಯು.ಪಿ.ಚಂದ್ರಶೇಖರ್‌, ಕೃಷ್ಣಪ್ಪ, ರತೀಶ್‌, ನರೇಂದ್ರ, ಧ್ರುವ, ಗಿರೀಶ್‌, ಬಿಂದು, ವರುಣ, ಮುಖ್ಯ ಶಿಕ್ಷಕ ಜಯದೇವಪ್ಪ, ಪದ್ಮಾವತಿ, ಕೆ.ರಾಜೇಗೌಡ, ಶಿವಪ್ಪಗೌಡ, ಕೃಷ್ಣೇಗೌಡ, ದೇವರಾಜ್‌, ರಾಜು, ಮನು, ಸಂಪತ್‌ ಮತ್ತಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ