ಆ್ಯಪ್ನಗರ

250 ಅಕ್ರಮ ಗುಡಿಸಲು ತೆರವು

ಪಟ್ಟಣದ 15ನೇ ವಾರ್ಡ್‌ನ ಈದ್ಗಾನಗರದ ಕಂದಾಯ ಇಲಾಖೆಗೆ ಸೇರಿದ ಜಾಗದಲ್ಲಿ ಕಳೆದ ವಾರದ ಹಿಂದೆ ನಿರ್ಮಿಸಿಕೊಂಡಿದ್ದ ಅಕ್ರಮ ಗುಡಿಸಲುಗಳನ್ನು ತಹಶೀಲ್ದಾರ್‌ ಎಂ. ಭಾಗ್ಯ ಅವರ ನೇತೃತ್ವದಲ್ಲಿ ವಿವಿಧ ಇಲಾಖೆ ಸಹಕಾರದಿಂದ ತೆರವುಗೊಳಿಸಿದ ಘಟನೆ ಶನಿವಾರ ನಡೆದಿದೆ.

Vijaya Karnataka 30 Sep 2018, 5:00 am
ಕಡೂರು : ಪಟ್ಟಣದ 15ನೇ ವಾರ್ಡ್‌ನ ಈದ್ಗಾನಗರದ ಕಂದಾಯ ಇಲಾಖೆಗೆ ಸೇರಿದ ಜಾಗದಲ್ಲಿ ಕಳೆದ ವಾರದ ಹಿಂದೆ ನಿರ್ಮಿಸಿಕೊಂಡಿದ್ದ ಅಕ್ರಮ ಗುಡಿಸಲುಗಳನ್ನು ತಹಶೀಲ್ದಾರ್‌ ಎಂ. ಭಾಗ್ಯ ಅವರ ನೇತೃತ್ವದಲ್ಲಿ ವಿವಿಧ ಇಲಾಖೆ ಸಹಕಾರದಿಂದ ತೆರವುಗೊಳಿಸಿದ ಘಟನೆ ಶನಿವಾರ ನಡೆದಿದೆ.
Vijaya Karnataka Web CKM-29KDR2


ಬೆಳಗ್ಗೆ 6 ಗಂಟೆಗೆ ಎರಡು ಜೆಸಿಬಿ, ಪುರಸಭೆಯ ಪೌರ ಕಾರ್ಮಿಕರು, ಕಂದಾಯ ಇಲಾಖೆಯ ನೌಕರರು ಹಾಗೂ ನೂರಾರು ಪೊಲೀಸ್‌ ಪಡೆಯೊಂದಿಗೆ ಸ್ಥಳಕ್ಕೆ ಧಾವಿಸಿದ ತಾಲೂಕು ಆಡಳಿತವು ಕಾರ್ಯಾಚರಣೆ ಆರಂಭಿಸಿತು. ಆದರೆ ಪೊಲೀಸ್‌ ಪಹರೆ ಹೆಚ್ಚಾಗಿದ್ದರಿಂದಲೋ ಅಥವಾ ತಮ್ಮಲ್ಲಿ ಯಾವುದೇ ದಾಖಲೆಗಳಿಲ್ಲದ ಕಾರಣದಿಂದಲೋ ಅಕ್ರಮ ಗುಡಿಸಲು ನಿರ್ಮಾಣ ಮಾಡಿಕೊಂಡವರು ತಾಲೂಕು ಆಡಳಿತವನ್ನು ಪ್ರಶ್ನಿಸಲು ಮುಂದಾಗದೇ ಮೌನವಾದರು.

ಸಂಪೂರ್ಣ ತೆರವು ಕಾರ್ಯಾಚರಣೆ ಮುಗಿದ ಬಳಿಕ ಬಿಸಿಎಂ ಇಲಾಖೆಗೆ ಸೇರಿದ ಜಾಗಕ್ಕೆ ತಂತಿಬೇಲಿ ಅಳವಡಿಸಲಾಗಿದ್ದರೂ ಸಂಜೆಯ ವೇಳೆಗೆ 500ಕ್ಕೂ ಹೆಚ್ಚು ಜನರು ಬಂದು ತಾಲೂಕು ಆಡಳಿತ ಅಳವಡಿಸಿದ್ದ ತಂತಿಬೇಲಿಯನ್ನು ಕಿತ್ತ ಪರಿಣಾಮವಾಗಿ ಸ್ಥಳದಲ್ಲಿ ವಾತಾವರಣ ಬಿಗುವಿನಿಂದ ಕೂಡಿತ್ತು

ಕಡೂರು ಪುರಸಭೆಯ ವ್ಯಾಪ್ತಿಯಲ್ಲಿ ಇರುವ ಅನೇಕ ಬಡಾವಣೆಗಳಲ್ಲಿ ಅಕ್ರಮವಾಗಿ ಮನೆಗಳನ್ನು ನಿರ್ಮಿಸಿಕೊಂಡಿರುವವರನ್ನು ಪುರಸಭೆ ಮತ್ತು ತಾಲೂಕು ಆಡಳಿತ ತೆರವುಗೊಳಿಸಿಲ್ಲ. ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ ಎಂಬ ಗಾದೆಯಂತೆ ಬಡವ, ನಿರ್ಗತಿಕರ ಮೇಲೆ ಸರಕಾರ ಸವಾರಿ ಮಾಡುತ್ತದೆ ಎಂಬ ಮಾತುಗಳು ಕೇಳಿ ಬಂದವು. ಆರಕ್ಷ ಕ ವೃತ್ತ ನಿರೀಕ್ಷ ಕ ಕೆ. ಸತ್ಯನಾರಾಯಣ ನೇತೃತ್ವದಲ್ಲಿ ಪಿಎಸ್‌ಐ ವಿಶ್ವನಾಥ್‌ ಮತ್ತು ಸಿಬ್ಬಂದಿ ವರ್ಗವು ತೆರವು ಕಾರ್ಯದಲ್ಲಿ ಸಂಪೂರ್ಣ ರಕ್ಷ ಣೆಯ ಹೊಣೆ ಹೊತ್ತಿದ್ದರು.

------------

250ಕ್ಕೂ ಹೆಚ್ಚು ಗುಡಿಸಲು ನಿರ್ಮಾಣ ಮಾಡಿಕೊಂಡಿದ್ದರು. ಕಂದಾಯ ಇಲಾಖೆಗೆ ಸೇರಿದ ಸರ್ವೆ ನಂ.53ರಲ್ಲಿ ಸುಮಾರು 8.15 ಎಕರೆ ಭೂಮಿಯಲ್ಲಿ ಈಗಾಗಲೇ ದೇವರಾಜು ಅರಸು ಭವನ ನಿರ್ಮಾಣ ಮಾಡಲಿಕ್ಕೆ ಬಿಸಿಎಂ ಇಲಾಖೆಗೆ 1.10 ಎಕರೆæ ಜಾಗ ನೀಡಲಾಗಿದೆ. ಈ ಜಾಗವೂ ಸೇರಿದಂತೆ 8 ಎಕರೆಯಲ್ಲಿ ಬಹುತೇಕ ತಗ್ಗುಪ್ರದೇಶವಾಗಿದ್ದರೂ, ಅಲ್ಲಿ ನಿಂತಿರುವ ನೀರನ್ನೂ ಲೆಕ್ಕಿಸದೆ ಅಡಕೆ ಮರದ ಬೊಂಬು ಸೋಗೆ ಗರಿಗಳ ಸಹಾಯದಿಂದ ಗುಡಿಸಲು ನಿರ್ಮಾಣ ಮಾಡಿಕೊಂಡಿದ್ದರು. ಕಾರ್ಯಾಚರಣೆಯ ವೇಳೆ ಯಾರೊಬ್ಬರೂ ಜಾಗ ತಮ್ಮದೆಂದು ಪ್ರಶ್ನಿಸಲಿಲ್ಲ. ಅನೇಕ ಗುಡಿಸಲುಗಳಲ್ಲಿ ಮಲಗಲು ವ್ಯವಸ್ಥೆ, ಸೋಲಾರ್‌ ದೀಪದ ವ್ಯವಸ್ಥೆ ಮಾಡಿಕೊಂಡಿದ್ದರು.

-ಎಂ. ಭಾಗ್ಯ ,ತಹಸೀಲ್ದಾರ್‌

---------------------

ಇಲಾಖೆ ವತಿಯಿಂದ ಭವನ ನಿರ್ಮಾಣ ಮಾಡಲು 2016ರಲ್ಲಿ ಕಂದಾಯ ಇಲಾಖೆಯಿಂದ 1.10 ಎಕರೆ ಜಾಗವನ್ನು ನೀಡಲಾಗಿತ್ತು. ತಾವು ಕಂದಾಯ ಇಲಾಖೆಗೆ ಹಾಗೂ ಪೊಲೀಸ್‌ ಇಲಾಖೆಯ ರಕ್ಷ ಣೆಯಲ್ಲಿ ಇಂದು ಇಲಾಖೆಗೆ ಸೇರಿದ ಜಾಗವನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.

-ನಾಗವಲ್ಲಿ ,ಬಿಸಿಎಂ ಇಲಾಖೆಯ ಅಧಿಕಾರಿ

-----------------------

ಸಂತ್ರಸ್ತರ ಅಳಲು

ಅನೇಕ ವರ್ಷಗಳಿಂದ ಮನೆಗಳಿಲ್ಲದೆ ಕಂದಾಯ ಇಲಾಖೆಯ ಸ್ಥಳದಲ್ಲಿ ಗುಡಿಸಲು ನಿರ್ಮಿಸಿಕೊಂಡಿದ್ದೆವು. ಆದರೆ ತಾಲೂಕು ಆಡಳಿತ ಏಕಾಏಕಿ ತೆರವುಗೊಳಿಸಿದ್ದರಿಂದ ಬೇಸರವಾಗಿದೆ. ಇದೇ ಸರ್ವೆ ನಂಬರಿನ ಜಾಗದಲ್ಲಿ ಕಂದಾಯ ಇಲಾಖೆಯು ಕಳೆದ ವರ್ಷ ಕೆಲವರಿಗೆ ಹಕ್ಕುಪತ್ರ ನೀಡಿದೆ. ನಮಗೂ ನೀಡುತ್ತಾರೆ ಎಂಬ ಭರವಸೆಯ ಮೇಲೆ ಗುಡಿಸಲು ನಿರ್ಮಿಸಿಕೊಂಡಿದ್ದೆವು ಎಂದು ಸಂತ್ರಸ್ತರು ಅಳಲು ತೋಡಿಕೊಂಡರು.

------------------------------

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ