ಆ್ಯಪ್ನಗರ

ಹಿಂದಿ ಪರೀಕ್ಷೆಯಲ್ಲಿ 65ರ ಅಜ್ಜಿಗೆ 2ನೇ ರ‍್ಯಾಂಕ್

ಕಲಿಕೆಗೆ ವಯಸ್ಸಿನ ಮಿತಿ ಇಲ್ಲ, ಜೀವನೋತ್ಸಾಹ ಇದ್ದರೆ ಇಳಿವಯಸ್ಸಿನಲ್ಲೂ ಸಾಧನೆ ಮಾಡಬಹುದು ಎಂಬುದನ್ನು ಅರಣ್ಯ ಇಲಾಖೆ ನಿವೃತ್ತ ಗುಮಾಸ್ತೆಯೊಬ್ಬರು ತೋರಿಸಿಕೊಟ್ಟಿದ್ದಾರೆ.

Vijaya Karnataka 29 Nov 2018, 8:59 am
ಚಿಕ್ಕಮಗಳೂರು : ಕಲಿಕೆಗೆ ವಯಸ್ಸಿನ ಮಿತಿ ಇಲ್ಲ, ಜೀವನೋತ್ಸಾಹ ಇದ್ದರೆ ಇಳಿವಯಸ್ಸಿನಲ್ಲೂ ಸಾಧನೆ ಮಾಡಬಹುದು ಎಂಬುದನ್ನು ಅರಣ್ಯ ಇಲಾಖೆ ನಿವೃತ್ತ ಗುಮಾಸ್ತೆಯೊಬ್ಬರು ತೋರಿಸಿಕೊಟ್ಟಿದ್ದಾರೆ.
Vijaya Karnataka Web CKM-28ARAGAP1


ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ಕಳೆದ ಸೆಪ್ಟೆಂಬರ್‌ನಲ್ಲಿ ನಡೆಸಿದ ಹಿಂದಿ ಪ್ರವೇಶಿಕ ಪರೀಕ್ಷೆಯಲ್ಲಿ 65 ವರ್ಷದ ಬಿ.ಎಸ್‌.ಪಂಕಜ ಹನುಮಂತಪ್ಪ ಶೇ.83 ಅಂಕಗಳೊಂದಿಗೆ ರಾಷ್ಟ್ರ ಮಟ್ಟದಲ್ಲಿ ಎರಡನೇ ರಾರ‍ಯಂಕ್‌ ಪಡೆದು ಎಲ್ಲರನ್ನೂ ನಿಬ್ಬೆರಗಾಗಿಸಿದ್ದಾರೆ. ಹಿಂದಿ ಕಲಿಕೆಯಲ್ಲಿ ಅಜ್ಜಿಯ ತನ್ಮಯತೆ, ಶ್ರದ್ಧೆ ಯುವಜನರಿಗೆ ಸ್ಫೂರ್ತಿಯಾಗಿದೆ.

ಹಿಂದಿ ಪರೀಕ್ಷೆಯಲ್ಲಿ ರಾಷ್ಟ್ರ ಮಟ್ಟದಲ್ಲಿ ಎರಡನೇ ರಾರ‍ಯಂಕ್‌ ಪಡೆದ ಪಂಕಜ ಇಳಿವಯಸ್ಸಿನಲ್ಲೂ ಉತ್ಸಾಹದ ಚಿಲುಮೆಯಂತಿದ್ದಾರೆ. ಪ್ರತಿದಿನ ಜಿಮ್‌ನಲ್ಲಿ ಮೂರು ತಾಸು ಕಸರತ್ತು ಮಾಡುವ ಈ ಅಜ್ಜಿ, ಇಂಗ್ಲಿಷ್‌ ಸ್ಪೀಕಿಂಗ್‌ ಕೋರ್ಸ್‌ಗೆ ಹೋಗಿ ಇಂಗ್ಲಿಷ್‌ನ್ನೂ ಕಲಿಯುತ್ತಿದ್ದಾರೆ.

ಅನೇಕ ವರ್ಷಗಳಿಂದ ವಾಕಿಂಗ್‌ ಅಭ್ಯಾಸ ಇಟ್ಟುಕೊಂಡಿರುವ ಪಂಕಜ, ಜಿಲ್ಲಾ ಮಟ್ಟದಿಂದ ಹಿಡಿದು ರಾಷ್ಟ್ರ ಮಟ್ಟದವರೆಗಿನ ನಾಲ್ಕಾರು ಪತ್ರಿಕೆಗಳನ್ನು ತರಿಸಿಕೊಂಡು ಓದುವ ಹವ್ಯಾಸ ಇಟ್ಟುಕೊಂಡಿದ್ದಾರೆ. ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ನಡೆಸುವ ಪರೀಕ್ಷೆಗಳಲ್ಲಿ ಗರಿಷ್ಠ ಅಂಕಗಳನ್ನು ಪಡೆಯುತ್ತಿದ್ದ ಈ ಅಜ್ಜಿ ಹಿಂದಿ ಪ್ರವೇಶಿಕ ಪರೀಕ್ಷೆಯಲ್ಲಿ ರಾಷ್ಟ್ರ ಮಟ್ಟದಲ್ಲಿ 2ನೇ ರಾರ‍ಯಂಕ್‌ ಗಳಿಸಿ ಸಾಧನೆ ಮೆರೆದಿದ್ದಾರೆ.

ಹಿಂದಿ ಶಿಕ್ಷಕ ಹಾಗೂ ಸಾಹಿತಿ ರಮೇಶ್‌ ಬೊಂಗಾಳೆ, ಮಹೇಶ್ವರಿ ಅವರ ಬಳಿ ಪ್ರತಿನಿತ್ಯ ಹಿಂದಿ ತರಗತಿಗಳಿಗೆ ಹಾಜರಾಗಿ ಅಭ್ಯಾಸ ಮಾಡುತ್ತಾರೆ. ಅರಣ್ಯ ಇಲಾಖೆಯಲ್ಲಿ ಆರ್‌ಎಫ್‌ಒ ಆಗಿದ್ದ ಪತಿ ಹನುಮಂತಪ್ಪ 1984ರಲ್ಲಿ ಕಾಡಿನಲ್ಲಿ ಗಸ್ತಿನಲ್ಲಿದ್ದಾಗ ಆನೆ ತುಳಿತದಿಂದ ಮೃತಪಟ್ಟಿದ್ದರು.

ಅರಣ್ಯ ಇಲಾಖೆಯಲ್ಲಿ ಪ್ರಥಮ ದರ್ಜೆ ಗುಮಾಸ್ತೆಯಾಗಿ ನಿವೃತ್ತರಾಗಿರುವ ಪಂಕಜ ತನ್ನಿಬ್ಬರು, ಮಕ್ಕಳಿಗೆ ಉತ್ತಮ ಬದುಕನ್ನೂ ಕಟ್ಟಿಕೊಟ್ಟಿದ್ದಾರೆ. ಮಕ್ಕಳು ಅಮೆರಿಕ, ಬೆಂಗಳೂರಿನಲ್ಲಿದ್ದರೂ ಪಂಕಜ ಮಾತ್ರ ಯಾರ ಮುಲಾಜಿನಲ್ಲಿಯೂ ಬದುಕಬಾರದು ಎಂಬ ಸ್ವಾಭಿಮಾನದಿಂದ ನಗರದಲ್ಲಿ ಮನೆ ನಿರ್ಮಿಸಿಕೊಂಡು ಆತ್ಮವಿಶ್ವಾಸದ ಬದುಕು ಸಾಗಿಸುತ್ತಿದ್ದಾರೆ.

ಅರಣ್ಯ ಇಲಾಖೆಯಿಂದ ನಿವೃತ್ತರಾದ ಮೇಲೆ ಹಿಂದಿ ಕಲಿಯಬೇಕು ಎಂಬ ಆಸಕ್ತಿ ಹುಟ್ಟಿತು. ಹಿಂದಿ ಪರೀಕ್ಷೆ ಕಟ್ಟಿ ಪ್ರತಿನಿತ್ಯ ತರಗತಿಗೆ ಹಾಜರಾಗಿ ಅಭ್ಯಾಸ ಮಾಡಿದೆ. ಹಿಂದಿ ಪ್ರವೇಶಿಕ ಪರೀಕ್ಷೆಯನ್ನು ಚೆನ್ನಾಗಿ ಬರೆದಿದ್ದೆ. ರಾಷ್ಟ್ರ ಮಟ್ಟದಲ್ಲಿ 2ನೇ ರಾರ‍ಯಂಕ್‌ ಬಂದಿರುವುದು ಸಂತಸ ನೀಡಿದೆ. ಕಲಿಕೆಗೆ ವಯಸ್ಸಿನ ಮಿತಿ ಇಲ್ಲ. ಕಲಿಯುವುದನ್ನು ಶ್ರದ್ಧೆಯಿಂದ ಕಲಿಯಬೇಕು.

-ಬಿ.ಎಸ್‌.ಪಂಕಜ, ರಾರ‍ಯಂಕ್‌ ವಿಜೇತರು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ