ಆ್ಯಪ್ನಗರ

4 ಬಾಲಕರು ಜೈನ ಸನ್ಯಾಸಕ್ಕೆ ಸಜ್ಜು

ವಯಸ್ಸು ಅಬ್ಬಬ್ಬಾ ಎಂದರೆ 16 ದಾಟಿಲ್ಲ. ಸಮಾಜದಲ್ಲಿಉನ್ನತ ಶಿಕ್ಷಣ ಪಡೆದು, ಲೌಕಿಕ ಬದುಕಲ್ಲಿಉತ್ತಮ ಉದ್ಯೋಗ, ಅವಕಾಶಗಳನ್ನು ಗಳಿಸಬಹುದಿತ್ತು. ಆದರೆ ಜೈನ ಕುಟುಂಬಗಳ ಈ 4 ಮಕ್ಕಳು ಲೌಕಿಕ ಜೀವನ ತೊರೆದು ಸನ್ಯಾಸತ್ವದ ಕಡೆ ಮುಖ ಮಾಡಿದ್ದಾರೆ.

Vijaya Karnataka 6 Nov 2019, 9:46 pm
ಕಡೂರು : ವಯಸ್ಸು ಅಬ್ಬಬ್ಬಾ ಎಂದರೆ 16 ದಾಟಿಲ್ಲ. ಸಮಾಜದಲ್ಲಿಉನ್ನತ ಶಿಕ್ಷಣ ಪಡೆದು, ಲೌಕಿಕ ಬದುಕಲ್ಲಿಉತ್ತಮ ಉದ್ಯೋಗ, ಅವಕಾಶಗಳನ್ನು ಗಳಿಸಬಹುದಿತ್ತು. ಆದರೆ ಜೈನ ಕುಟುಂಬಗಳ ಈ 4 ಮಕ್ಕಳು ಲೌಕಿಕ ಜೀವನ ತೊರೆದು ಸನ್ಯಾಸತ್ವದ ಕಡೆ ಮುಖ ಮಾಡಿದ್ದಾರೆ.
Vijaya Karnataka Web 4 boys outfit for jaina monks
4 ಬಾಲಕರು ಜೈನ ಸನ್ಯಾಸಕ್ಕೆ ಸಜ್ಜು

ಜೈನ ಸಮುದಾಯದ ಯತಿಯಾಗಲಿಕ್ಕೆ ದೀಕ್ಷೆ ಪಡೆಯಲು ಕಡೂರು, ಚಳ್ಳಕೆರೆ ಮತ್ತು ಕೊಪ್ಪಳದ ನಾಲ್ಕು ಮಕ್ಕಳು ಸಿದ್ಧರಾಗಿದ್ದಾರೆ. ಕಡೂರು ಮಂಗಲ್‌ ದೀಪ್‌ ಶೋರೂಂ ಮಾಲೀಕರುಗಳ ಮಕ್ಕಳಾದ, ಚಿತ್ರದುರ್ಗ ಜಿಲ್ಲೆಚಳ್ಳಕೆರೆಯಲ್ಲಿವಾಸವಿರುವ ವಿಜಯ್‌ರಾಜ್‌ ಬಾಗ್ರೇಜಾ ಅವರ ಪುತ್ರ ಭಾವಿಕ್‌ ಬಾಗ್ರೇಜಾ(16), ಕಡೂರಿನ ಲಲಿತ್‌ ಬಾಗ್ರೇಜಾ ಅವರ ಪುತ್ರ ಪೃತ್ವಿಕ್‌ ಬಾಗ್ರೇಜಾ(12), ಭರತ್‌ ಕುಮಾರ್‌ ಬಾಗ್ರೇಜಾ ಅವರ ಪುತ್ರ ರಹೇನ್‌ ಭಾಗ್ರೇಜಾ(10) ಮತ್ತು ಕೊಪ್ಪಳದ ಮಹೇಂದರ್‌ ಮೆಹತಾ ಅವರ ಪುತ್ರ ವರ್ಧಮಾನ್‌ ಮೆಹತಾ(14) ದೀಕ್ಷೆಗೆ ಅಂಗೀಕಾರ ಪಡೆದವರು. ಇವರಿಗೆ ಆಚಾರ್ಯ ವಿಮಲ್‌ ಸಾಗರ್‌ ಸುರೀಶ್ವರ್‌ ಅವರು ಬೆಂಗಳೂರಿನಲ್ಲಿಬರುವ ಡಿಸೆಂಬರ್‌ 14ರಂದು ಜೈನ ಯತಿ ದೀಕ್ಷೆ ನೀಡಲಿದ್ದಾರೆ. ಜೈನ್‌ ದೀಕ್ಷಾ ಅಂಗೀಕಾರ ಮತ್ತು ಪೂರ್ವಭಾವಿ ಮೆರವಣಿಗೆ ಕಡೂರಿನ ಪ್ರಮುಖ ರಸ್ತೆಗಳಲ್ಲಿಬುಧವಾರ ನಡೆಯಿತು. ಜೈನ ಸಮುದಾಯದ ಮಹಿಳೆಯರು ಮತ್ತು ಪುರುಷರು ಸಾಂಪ್ರದಾಯಿಕ ಪೋಷಾಕು ಧರಿಸಿ ನೃತ್ಯ ಮಾಡುತ್ತಾ ಸಂಭ್ರಮದಿಂದ ಮೆರವಣಿಗೆಯಲ್ಲಿಸಾಗಿದರು. ನಂತರ ಜೈನ ಮಂದಿರದಲ್ಲಿದೀಕ್ಷಾರ್ಥಿಗಳ ಮಾತಾ ಪಿತೃಗಳು, ಬಂಧುಗಳು ದೀಕ್ಷೆಪಡೆಯುವ ಮಕ್ಕಳಿಗೆ ಉಡುಗೊರೆಗಳನ್ನಿತ್ತು ಹರಸಿದರು. ನೇಮಿನಾಥ್‌ ಜೈನ ಶ್ವೇತಾಂಬರ್‌ ಮೂರ್ತಿ ಪೂಜಕ್‌ ಸಂಘದ ಪದಾಧಿಕಾರಿಗಳು, ಮಹಾವೀರ ಸುರಾನ ಹಾಗೂ ಕಡೂರು

ಪಟ್ಟಣದ ಇತರೆ ಸಮಾಜದ ಮುಖಂಡರು ಇದ್ದರು. ಇಂದಿನ ಯುವಕರು ಆಧುನಿಕತೆಗೆ ಮಾರು ಹೋಗಿ ಮೋಜು ಮಸ್ತಿ ಎಂದು ಕಾಲಹರಣ ಮಾಡುವ ಕಾಲದಲ್ಲಿಈ ಮಕ್ಕಳು ಅಲೌಕಿಕದೆಡೆಗೆ ಲಕ್ಷ್ಯ ವಹಿಸಿರುವುದು ವಿಶಿಷ್ಟವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ