ಆ್ಯಪ್ನಗರ

4 ಹುಂಡಿ ಒಡೆದು 4 ಲಕ್ಷ ದೋಚಿದ ಕಳ್ಳರು

ಇತಿಹಾಸ ಪ್ರಸಿದ್ಧ ಶ್ರೀ ರಂಗನಾಥಸ್ವಾಮಿ ದೇವಾಲಯದಲ್ಲಿ ಬುಧವಾರ ರಾತ್ರಿ ಮುಂಬಾಗಿಲ ಬೀಗ ಹೊಡೆದು 4 ಹುಂಡಿಗಳನ್ನು ಹೊತ್ತೊಯ್ದ ಕಳ್ಳರು ಸುಮಾರು ನಾಲ್ಕು ಲಕ್ಷ ರೂ.ದೋಚಿದ್ದಾರೆ.

Vijaya Karnataka 31 May 2019, 5:00 am
ಸಖರಾಯಪಟ್ಟಣ : ಇತಿಹಾಸ ಪ್ರಸಿದ್ಧ ಶ್ರೀ ರಂಗನಾಥಸ್ವಾಮಿ ದೇವಾಲಯದಲ್ಲಿ ಬುಧವಾರ ರಾತ್ರಿ ಮುಂಬಾಗಿಲ ಬೀಗ ಹೊಡೆದು 4 ಹುಂಡಿಗಳನ್ನು ಹೊತ್ತೊಯ್ದ ಕಳ್ಳರು ಸುಮಾರು ನಾಲ್ಕು ಲಕ್ಷ ರೂ.ದೋಚಿದ್ದಾರೆ.
Vijaya Karnataka Web 4 thieves robbed and robbed 4 lakhs
4 ಹುಂಡಿ ಒಡೆದು 4 ಲಕ್ಷ ದೋಚಿದ ಕಳ್ಳರು


ದೇವಾಲಯದ 4 ಹುಂಡಿಗಳು ಗುರುವಾರ ಬೆಳಗ್ಗೆ ದೇವಾಲಯದ ಹಿಂಭಾಗದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಕಳ್ಳರು ಮೊಹರಾದ ಬೀಗಗಳನ್ನು ಒಡೆದು ಅದರಲ್ಲಿದ್ದ ನೋಟುಗಳನ್ನು ಮಾತ್ರ ತೆಗೆದು ಚಿಲ್ಲರೆ ಬಿಟ್ಟು ಹೋಗಿದ್ದಾರೆ. ಸಿಸಿ ಕ್ಯಾಮೆರಾಗಳೊಂದಿಗೆ ಡಿವಿಆರ್‌ ಸಹಿತ ಕಳ್ಳತನ ಮಾಡಿದ್ದಾರೆ.

ಸ್ಥಳಕ್ಕೆ ಬೆರಳಚ್ಚು ತಜ್ಞರು ಹಾಗೂ ಡಾಗ್‌ ಸ್ಕ್ವಾಡ್‌ ತಂಡದಿಂದ ಪರೀಕ್ಷಿಸಲಾಗಿದೆ. ಪೊಲೀಸರು ಮಧ್ಯ ರಾತ್ರಿ ಎರಡು ಬಾರಿ ಗಸ್ತು ತಿರುಗುತ್ತಾರೆ.ಇದನ್ನು ಮಾಡಿರುವ ಕಳ್ಳರು ನುರಿತವರಾಗಿದ್ದು ಕೆಲವು ದಿನಗಳಿಂದ ಎಲ್ಲವನ್ನು ಗಮನಿಸಿಯೇ ಈ ಕೆಲಸವನ್ನು ಮಾಡಿದ್ದಾರೆ ಎಂದು ಪಿಎಸ್‌ಐ ರಾಘವೇಂದ್ರ ಪತ್ರಿಕೆಗೆ ತಿಳಿಸಿದ್ದಾರೆ. ತರೀಕೆರೆ ಡಿವೈಎಸ್ಪಿ ತಿರುಮಲೇಶ್‌, ತರೀಕೆರೆ ವೃತ್ತ ನಿರೀಕ್ಷ ಕ ರಮೇಶ್‌ ರಾವ್‌ ಸ್ಥಳಕ್ಕೆ ಭೇಟಿ ನೀಡಿದ್ದರು. ಪೊಲೀಸ್‌ ಸಿಬ್ಬಂದಿ, ದೇವಾಲಯ ಸಮಿತಿ ಸದಸ್ಯರು, ಅರ್ಚಕರು ಹಾಜರಿದ್ದರು.

ನಾಲ್ಕೂ ಹುಂಡಿಗಳನ್ನು ಜನವರಿಯ ಕೊನೆ ವಾರದಲ್ಲಿ ಕಂದಾಯ ಇಲಾಖೆ, ಒಡೆದು ಹಣವನ್ನು ಬ್ಯಾಂಕಿನಲ್ಲಿ ಜಮಾ ಮಾಡಿತ್ತು. ಫೆಬ್ರವರಿಯಿಂದ ಮೇವರೆಗೆ ಅಂದಾಜು ಮೂರರಿಂದ ನಾಲ್ಕು ಲಕ್ಷ ಕಾಣಿಕೆ ಹುಂಡಿಯಲ್ಲಿರಬಹುದು ಎಂದು ನಾಡ ಕಛೇರಿಯ ಕಂದಾಯಾಧಿಕಾರಿ ಬೆಂಕಿ ರಂಗಶೆಟ್ಟಿ ಮಾಹಿತಿ ನೀಡಿದ್ದಾರೆ.

ದೇವಾಲಯ, ಮುಜರಾಯಿ ಇಲಾಖೆಗೆ ಸೇರಿದ್ದು ಪ್ರತಿ ವರ್ಷ ಜನವರಿಯಲ್ಲಿ ಪ್ರಸಿದ್ಧ ಜಾತ್ರೆ ನಡೆಯುತ್ತದೆ. ರಾಜ್ಯದ ನಾನಾ ಭಾಗಗಳಿಂದ ಭಕ್ತರು ದೇವಾಲಯಕ್ಕೆ ಆಗಮಿಸಿ ಹುಂಡಿಯಲ್ಲಿ ಕಾಣಿಕೆ ಹಾಕುವುದು ಸಾಮಾನ್ಯ. ದೇವಾಲಯವು ರಾಜ್ಯದಲ್ಲಿಯೇ ಪ್ರಸಿದ್ಧವಾಗಿದೆ. ಆದರೆ ಕಾವಲುಗಾರನೇ ಇಲ್ಲ. ಸುತ್ತ ಕಾಂಪೌಂಡು ಸಹ ಸರಿಯಾಗಿ ಇಲ್ಲ. ಮುಜರಾಯಿ ಇಲಾಖೆಗೆ ಸೇರಿದ ದೇವಾಲಯ ಆಗಿದ್ದು ಸರಿಯಾದ ವ್ಯವಸ್ಥೆಯಿಲ್ಲದೆ ಸೊರುಗುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ