ಆ್ಯಪ್ನಗರ

400 ಮೂಟೆ ಪಡಿತರ ಅಕ್ಕಿ ವಶ

ಪಟ್ಟಣದ ಹಳೇ ಮಂಡಗದ್ದೆ ರಸ್ತೆಯ ವೆಂಕಟೇಶ್ವರ ಹಿಟ್ಟಿನ ಗಿರಣಿ ಹಿಂಭಾಗದಲ್ಲಿ 2 ಲಾರಿಗಳಲ್ಲಿ ಸಾಗಣೆಗೆ ಸಿದ್ಧವಾಗಿದ್ದ 400 ಮೂಟೆ ಪಡಿತರ ಅಕ್ಕಿಯನ್ನು ಶನಿವಾರ ಬೆಳಗ್ಗೆ ವಶಪಡಿಸಿಕೊಳ್ಳಲಾಗಿದೆ.

Vijaya Karnataka 22 Apr 2018, 5:00 am
ನರಸಿಂಹರಾಜಪುರ : ಪಟ್ಟಣದ ಹಳೇ ಮಂಡಗದ್ದೆ ರಸ್ತೆಯ ವೆಂಕಟೇಶ್ವರ ಹಿಟ್ಟಿನ ಗಿರಣಿ ಹಿಂಭಾಗದಲ್ಲಿ 2 ಲಾರಿಗಳಲ್ಲಿ ಸಾಗಣೆಗೆ ಸಿದ್ಧವಾಗಿದ್ದ 400 ಮೂಟೆ ಪಡಿತರ ಅಕ್ಕಿಯನ್ನು ಶನಿವಾರ ಬೆಳಗ್ಗೆ ವಶಪಡಿಸಿಕೊಳ್ಳಲಾಗಿದೆ.
Vijaya Karnataka Web 400 bag ration seized rice
400 ಮೂಟೆ ಪಡಿತರ ಅಕ್ಕಿ ವಶ


ಖಚಿತ ಮಾಹಿತಿ ಮೇರೆಗೆ ಪೊಲೀಸರು ಹಾಗೂ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಅಧಿಕಾರಿಗಳು ವೆಂಕಟೇಶ್ವರ ಹಿಟ್ಟಿನ ಗಿರಣಿ ಗೋದಾಮಿನ ಮೇಲೆ ದಾಳಿ ನಡೆಸಿದ್ದ ಸಂದರ್ಭ ಗೋದಾಮಿನ ಪಕ್ಕದಲ್ಲಿ ಎರಡು ಲಾರಿಗಳಲ್ಲಿ ಸೊಸೈಟಿ ಅಕ್ಕಿ ಪತ್ತೆಯಾಗಿದೆ. ವೆಂಕಟೇಶ್ವರ ಹಿಟ್ಟಿನ ಗಿರಣಿ ಮಾಲೀಕ ರವಿಶಂಕರ್‌ ಪರಾರಿಯಾಗಿದ್ದಾರೆ.

ಒಂದು ಲಾರಿಯಲ್ಲಿ ಪ್ಲಾಸ್ಟಿಕ್‌ ಚೀಲದಲ್ಲಿ ತುಂಬಿದ್ದ ಪಾಲಿಶ್‌ ಮಾಡಿದ 50 ಕೆ.ಜಿ.ಯ 300 ಅಕ್ಕಿ ಮೂಟೆ ಹಾಗೂ ಇನ್ನೊಂದರಲ್ಲಿ 100 ಮೂಟೆ ಅಕ್ಕಿ ಗೋಣಿ ಚೀಲದಲ್ಲಿದ್ದು, ಇದು ಬಡವರಿಗೆ ಉಚಿತವಾಗಿ ಪೂರೈಸಿದ್ದ ಪಡಿತರ ಅಕ್ಕಿಯಾಗಿದೆ. ಗೋಣಿ ಚೀಲದಲ್ಲಿ ಪಂಜಾಬ್‌ ರಾಜ್ಯದ ಗುರುತಿನ ಚೀಟಿಗಳಿವೆ.

ಸೊಸೈಟಿಯಿಂದ ಅಕ್ಕಿಯನ್ನು ತಂದು ಪಾಲಿಶ್‌ ಮಾಡಿ, ಪ್ಲಾಸ್ಟಿಕ್‌ ಚೀಲಗಳಿಗೆ ತುಂಬಿ, 1 ಕೆಜಿಗೆ 35ರಿಂದ 40 ರೂ.ಗಳಂತೆ ಬೇರೆ ಊರುಗಳಿಗೆ ಮಾರಾಟಕ್ಕೆ ಸಾಗಿಸಲಾಗುತ್ತಿದ್ದು ಎನ್ನಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಪೊಲೀಸ್‌ ಸರ್ಕಲ್‌ ಇನ್ಸ್ಸ್‌ಪೆಕ್ಟರ್‌ ಜಗನ್ನಾಥ್‌, ಪಿಎಸ್‌ಐ ಸುಧಾಕರ್‌, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ನಿರೀಕ್ಷಕ ಪಾಲಾಕ್ಷಪ್ಪ ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ