ಆ್ಯಪ್ನಗರ

ಕಾಫಿ ನಾಡಿಗೆ ಶಾಕ್‌ ನೀಡಿದ ಮುಂಬಯಿ: ಒಂದೇ ದಿನ ಐವರಲ್ಲಿ ಕೊರೊನಾ ಸೋಂಕು

ಚಿಕ್ಕಮಗಳೂರು ಜಿಲ್ಲೆಯಲ್ಲಿ ಒಂದೇ ದಿನ ಐವರಿಗೆ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಐವರಲ್ಲಿ ನಾಲ್ವರು ಮುಂಬಯಿಯಿಂದ ಬಂದವರು ಎಂಬುದು ಗಮನಿಸಬೇಕಾದ ವಿಚಾರ. ಗ್ರೀನ್‌ ಝೋನ್‌ನಲ್ಇದ್ದ ಜಿಲ್ಲೆಗೆ ಕೊರೊನಾ ಒಂದೇ ದಿನ ಶಾಕ್‌ ಕೊಟ್ಟಿದೆ.

Vijaya Karnataka Web 19 May 2020, 5:59 pm
ಚಿಕ್ಕಮಗಳೂರು: ಗ್ರೀನ್‌ ಝೋನ್‌ ಆಗಿ ನೆಮ್ಮದಿಯಿಂದ ಇದ್ದ ಜಿಲ್ಲೆಯ ಜನತೆಗೆ ಕೊರೊನಾ ವೈರಸ್‌ ಬರ ಸಿಡಿಲಿನಂತೆ ಎರಗಿದೆ. ಒಂದೇ ದಿನ ಮಲೆನಾಡು ಜಿಲ್ಲೆಯಲ್ಲಿ ಐವರಲ್ಲಿ ಕೋವಿಡ್‌ 19 ಸೋಂಕು ಪತ್ತೆಯಾಗಿದೆ.
Vijaya Karnataka Web corona isolation ward toi


ಬೆಳಗ್ಗೆ ಇಬ್ಬರಲ್ಲಿ ಕಾಣಿಸಿಕೊಂಡಿದ್ದ ವೈರಾಣು ಮತ್ತೆ ಮೂವರಲ್ಲಿ ಕಾಣಿಸಿಕೊಂಡಿದೆ. ಈ ಮೂರೂ ಪ್ರಕರಣಗಳು ಮುಂಬಯಿಯಿಂದ ಬಂದವರು ಎಂದು ತಿಳಿದುಬಂದಿದೆ.

ಮಹಾರಾಷ್ಟ್ರ ರಾಜಧಾನಿ ಮುಂಬಯಿಯಿಂದ ಬಂದ ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ಮೂಲದ 7 ವರ್ಷದ ಹುಡುಗ, 10 ವರ್ಷದ ಹುಡುಗ ಹಾಗೂ 17 ವರ್ಷದ ಯುವತಿಗೆ ಕೊರೊನಾ ವೈರಸ್‌ ಪಾಸಿಟಿವ್‌ ಸೋಂಕು ತಗುಲಿರುವುದು ಧೃಡಪಟ್ಟಿದೆ.

ಗ್ರೀನ್‌ ಝೋನ್‌ ಚಿಕ್ಕಮಗಳೂರಿಗೂ ಎಂಟ್ರಿ ಕೊಟ್ಟ ಕೊರೊನಾ: ವೈದ್ಯಾಧಿಕಾರಿಗೆ ಸೋಂಕು!

ಬೆಳಗ್ಗೆಯಷ್ಟೇ ಮೂಡಿಗೆರೆ ತಾಲೂಕಿನ ವೈದ್ಯರಲ್ಲಿ ಹಾಗೂ ಮುಂಬಯಿಯಿಂದ ಬಂದಿದ್ದ ತರೀಕೆರೆ ಪಟ್ಟಣದ ಗರ್ಭಿಣಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ರಾಜ್ಯದ ಪೈಕಿ ಹಸಿರು ಕಿರೀಟ ಉಳಿಸಿಕೊಂಡಿದ್ದ ಕೆಲವೇ ಕೆಲವು ಜಿಲ್ಲೆಗಳಲ್ಲಿ ಒಂದಾಗಿದ್ದ ಚಿಕ್ಕಮಗಳೂರಿಗೆ ಮೇ 19ರಂದು ಒಂದೇ ದಿನ ಐವರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಅದರಲ್ಲಿ ನಾಲ್ವರು ಮುಂಬಯಿಯಿಂದ ಬಂದವರು.

ಚಿಕ್ಕಮಗಳೂರು ಜಿಲ್ಲೆಗೂ ವಕ್ಕರಿಸಿದ ಕೊರೊನಾ: ಒಂದೇ ದಿನ ಇಬ್ಬರಲ್ಲಿ ಸೋಂಕು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ