ಆ್ಯಪ್ನಗರ

ಕನ್ನಡ ಸಾಹಿತ್ಯಕ್ಕೆ 7ನೇ ಜ್ಞಾನಪೀಠ ಕಾರ್ನಾಡ್‌

ಅಜ್ಜಂಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ ಮತ್ತು ಗೆಳೆಯರ ಬಳಗ ರಂಗ ತಂಡ ಸೋಮವಾರ ನಿಧನರಾದ ಗಿರೀಶ್‌ ಕಾರ್ನಾಡರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

Vijaya Karnataka 11 Jun 2019, 5:00 am
ಅಜ್ಜಂಪುರ : ಅಜ್ಜಂಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ ಮತ್ತು ಗೆಳೆಯರ ಬಳಗ ರಂಗ ತಂಡ ಸೋಮವಾರ ನಿಧನರಾದ ಗಿರೀಶ್‌ ಕಾರ್ನಾಡರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.
Vijaya Karnataka Web CKM-10AJP10


ರಂಗ ಕಲಾವಿದ ಮಹಾವೀರ್‌ ಜೈನ್‌ ಮಾತನಾಡಿ, ಎಡ ಪಂಥೀಯ ಧೋರಣೆಯುಳ್ಳ ಕಾರ್ನಾಡರು ಯಾವಾಗಲೂ ಪ್ರಗತಿ ಪರ ಚಟುವಟಿಕೆಯ ಮುಂಚೂಣಿಯಲ್ಲಿದ್ದರು ಎಂದರು.

ಗೆಳೆಯರ ಬಳಗ ರಂಗ ತಂಡದ ಎ.ಸಿ.ಚಂದ್ರಪ್ಪ ಮಾತನಾಡಿ, ಕಾರ್ನಾಡರ ನಿಧನದಿಂದ ಸಾಂಸ್ಕೃತಿಕ ಜಗತ್ತು ಬರಡಾಗಿದೆ. ಇವರ ಸ್ಥಾನ ತುಂಬಿಸುವ ವ್ಯಕ್ತಿಗಳು ಬರಬೇಕು ಎಂದರು.

ರಂಗಕರ್ಮಿ ಎ.ಎಸ್‌.ಕೃಷ್ಣಮೂರ್ತಿ ಮಾತನಾಡಿ, ಕನ್ನಡ ಸಾಹಿತ್ಯಕ್ಕೆ 7ನೇ ಜ್ಞಾನಪೀಠ ತಂದುಕೊಟ್ಟ ಮಹಾನ್‌ ಹೆಸರಾಂತ ಸಾಹಿತಿ, ನಾಟಕಕಾರ ಗಿರೀಶ್‌ ಕಾರ್ನಾಡ್‌ ರಂಗಭೂಮಿಗೆ ವಿಶೇಷ ಕೊಡುಗೆ ನೀಡಿದ್ದರು ಎಂದು ಹೇಳಿದರು. ಗಡೀಹಳ್ಳಿ ಮಹೇಶ ಮಾತನಾಡಿದರು. ರಂಗಾಸಕ್ತ ಕೆ.ಎಸ್‌. ಪಂಚಾಕ್ಷ ರಿ, ಸಾಹಿತ್ಯ ಪರಿಷತ್‌ ಸದಸ್ಯರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ