ಆ್ಯಪ್ನಗರ

ಅಸ್ಸಾಂ ಮೂಲದ 8 ಕಾರ್ಮಿಕರಿಗೆ ಗಾಯ

ಮಳೆ ಮಲೆನಾಡನ್ನು ಹೈರಾಣಾಗಿಸಿದೆ. ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ನದಿಗಳಲ್ಲಿನೀರಿನ ಮಟ್ಟ ಏರಿಕೆಯಾಗಿದ್ದು, ಮತ್ತೊಮ್ಮೆ ಪ್ರವಾಹದ ಭೀತಿ ಎದುರಾಗಿದೆ.

Vijaya Karnataka 27 Oct 2019, 5:00 am
ಚಿಕ್ಕಮಗಳೂರು : ಮಳೆ ಮಲೆನಾಡನ್ನು ಹೈರಾಣಾಗಿಸಿದೆ. ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ನದಿಗಳಲ್ಲಿನೀರಿನ ಮಟ್ಟ ಏರಿಕೆಯಾಗಿದ್ದು, ಮತ್ತೊಮ್ಮೆ ಪ್ರವಾಹದ ಭೀತಿ ಎದುರಾಗಿದೆ.
Vijaya Karnataka Web 26ARAGAP1_35


ಮಲೆನಾಡು ಭಾಗದಲ್ಲಿಗಾಳಿ, ಮಳೆಗೆ ಮರಗಳು ಉರುಳುತ್ತಿದ್ದು, ಮೂಡಿಗೆರೆ ತಾಲೂಕು ಮತ್ತಿಕಟ್ಟೆ ಗ್ರಾಮದ ಮಾರ್ಟಿನ್‌ ಎಸ್ಟೇಟ್‌ನಲ್ಲಿಮನೆ ಮೇಲೆ ಮರ ಉರುಳಿದ್ದರಿಂದ ಅಸ್ಸಾಂ ಮೂಲದ 8 ಕಾರ್ಮಿಕರು ಗಾಯಗೊಂಡಿದ್ದಾರೆ.

ಮೂಡಿಗೆರೆ, ಕೊಪ್ಪ, ಶೃಂಗೇರಿ, ನರಸಿಂಹರಾಜಪುರ, ಚಿಕ್ಕಮಗಳೂರು ತಾಲೂಕಿನಲ್ಲಿನಿರಂತರವಾಗಿ ಮಳೆಯಾಗುತ್ತಿದೆ. ತರೀಕೆರೆ, ಕಡೂರು ತಾಲೂಕಿನಲ್ಲಿಆಗಾಗ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.

ತುಂಗಾ ನದಿಯಲ್ಲಿನೀರಿನ ಮಟ್ಟ ಏರಿಕೆಯಾಗಿದ್ದು, ಕಪ್ಪೆಶಂಕರ ದೇವಾಲಯ ಜಲಾವೃತಗೊಂಡಿದೆ. ಹೇಮಾವತಿ ನದಿಯಲ್ಲೂನೀರಿನ ಮಟ್ಟ ಏರಿಕೆಯಾಗಿದ್ದು, ತಗ್ಗು ಪ್ರದೇಶದ ಜಮೀನಿಗೆ ನೀರು ನುಗ್ಗುವ ಭೀತಿ ಎದುರಾಗಿದೆ. ಭದ್ರಾ ನದಿ ನೀರಿನ ಮಟ್ಟ ಏರಿಕೆಯಾಗುತ್ತಿದ್ದು, ನದಿಪಾತ್ರದ ತಗ್ಗುಪ್ರದೇಶದಲ್ಲಿವಾಸವಿರುವ ಕುಟುಂಬಗಳಿಗೆ ಆತಂಕ ಸೃಷ್ಟಿಯಾಗಿದೆ.

ರಸ್ತೆಗಳ ಮೇಲೆ ಮರಗಳು ಉರುಳುತ್ತಿದ್ದು, ಚಾರ್ಮಾಡಿ ಘಾಟಿಯಲ್ಲಿಮತ್ತೆ ಸಂಚಾರ್‌ ಬಂದ್‌ ಆಗುವ ಸಾಧ್ಯತೆ ಇದೆ. ಮಳೆಯ ಜತೆಗೆ ಇಡೀ ಮಲೆನಾಡನ್ನು ಥಂಡಿ ಆವರಿಸಿದ್ದು, ಚಳಿಯಿಂದ ಜನ ಮುರುಟುವಂತಾಗಿದೆ.

ರೈತರಿಗೆ ಸಂಕಟ :


ಮುಂಗಾರು ಭಾರಿ ಪ್ರಮಾಣದಲ್ಲಿಸುರಿದು ಅನಾಹುತ ಸೃಷ್ಟಿಸಿದ್ದರಿಂದ ಮಲೆನಾಡಿನ ರೈತರು ಇನ್ನೂ ಚೇತರಿಸಿಕೊಂಡಿಲ್ಲ. ಅಷ್ಟರ ನಡುವೆಯೂ ಆತ್ಮಸ್ಥೈರ‍್ಯದಿಂದ ಭತ್ತದ ನಾಟಿ ಮಾಡಿದ್ದ ರೈತರಿಗೆ ಈಗ ಸುರಿಯುತ್ತಿರುವ ಮಳೆ ಮತ್ತೆ ಹೊಡೆತ ಕೊಟ್ಟಿದೆ. ಕಾಫಿ, ಅಡಕೆ, ಕಾಳುಮೆಣಸು, ಶುಂಠಿ, ಬಯಲು, ಅರೆಮಲೆನಾಡಿನಲ್ಲಿಬೆಳೆದಿದ್ದ ತರಕಾರಿಗೂ ಮಳೆಯಿಂದ ಸಮಸ್ಯೆ ಎದುರಾಗಿದೆ. ಅಡಕೆ ಕೊಯ್ಲುಆರಂಭಿಸಬೇಕಿದ್ದು, ಮಳೆ ಬಿಡುವು ನೀಡದ ಕಾರಣ ಅಡಕೆ ಸಂಸ್ಕರಣೆ ಕಷ್ಟವಾಗಿದೆ. ಇದರಿಂದ ಅಳಿದುಳಿದ ಬೆಳೆಯೂ ರೈತರ ಕೈಸೇರದ ಸ್ಥಿತಿ ನಿರ್ಮಾಣವಾಗಿದೆ. ಅತಿವೃಷ್ಟಿ, ಗುಡ್ಡಕುಸಿತದಿಂದ ತೀವ್ರ ನಷ್ಟ ಅನುಭವಿಸಿದ್ದ ರೈತಾಪಿ ವರ್ಗಕ್ಕೆ ಹಿಂಗಾರು ಮಳೆ ಕೂಡ ಕಾಡುತ್ತಿದೆ. ರಚ್ಚೆ ಹಿಡಿದಂತೆ ಸುರಿಯುತ್ತಿರುವ ಮಳೆಯಿಂದಾಗ ಜನ ರೋಸಿ ಹೋಗಿದ್ದು, ಮಳೆ ನಿಂತರೆ ಸಾಕಪ್ಪಾ ಎಂದು ಕಂಡ ಕಂಡ ದೇವರಿಗೆಲ್ಲಕೈಮುಗಿಯುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ