ಆ್ಯಪ್ನಗರ

ಚಾಕು ಇರಿತ ಪ್ರಕರಣ, ಯುವತಿ ಸಾವು

ಸಮೀಪದ ಗಡಿಗೇಶ್ವರ ಗ್ರಾಮದ ಭಗ್ನ ಪ್ರೇಮಿ ಮಿಥುನ್‌ ನಿಂದ ಚಾಕು ಇರಿತಕ್ಕೆ ಒಳಗಾಗಿ ಸಾವು ಬದುಕಿನೊಡನೆ ಹೋರಾಡುತ್ತಿದ್ದ ಖಾಂಡ್ಯ ಹೋಬಳಿ ಬಾಸಾಪುರದ ಯುವತಿ ಬಿಂದು (23) ಮಂಗಳೂರಿನ ವೆನ್ಲಾಕ್‌ ಆಸ್ಪತ್ರೆಯಲ್ಲಿಶನಿವಾರ ಮೃತಪಟ್ಟಿದ್ದಾರೆ.

Vijaya Karnataka 23 Sep 2019, 5:00 am
ಬಾಳೆಹೊನ್ನೂರು (ಚಿಕ್ಕಮಗಳೂರು)
Vijaya Karnataka Web a knife stab case young womans death
ಚಾಕು ಇರಿತ ಪ್ರಕರಣ, ಯುವತಿ ಸಾವು


ಸಮೀಪದ ಗಡಿಗೇಶ್ವರ ಗ್ರಾಮದ ಭಗ್ನ ಪ್ರೇಮಿ ಮಿಥುನ್‌ ನಿಂದ ಚಾಕು ಇರಿತಕ್ಕೆ ಒಳಗಾಗಿ ಸಾವು ಬದುಕಿನೊಡನೆ ಹೋರಾಡುತ್ತಿದ್ದ ಖಾಂಡ್ಯ ಹೋಬಳಿ ಬಾಸಾಪುರದ ಯುವತಿ ಬಿಂದು (23) ಮಂಗಳೂರಿನ ವೆನ್ಲಾಕ್‌ ಆಸ್ಪತ್ರೆಯಲ್ಲಿಶನಿವಾರ ಮೃತಪಟ್ಟಿದ್ದಾರೆ.

ಆರೋಪಿ, ಗಡಿಗೇಶ್ವರ ಗ್ರಾಮದ ಮಿಥುನ್‌ ತನ್ನನ್ನು ಪ್ರೀತಿಸುವಂತೆ ಬಸಾಪುರದ ಶಂಕರೇಗೌಡ, ಹಾಲಮ್ಮ ಅವರ ಪುತ್ರಿ ಬಿಂದುಗೆ ಪದೇಪದೆ ಪೀಡಿಸುತ್ತಿದ್ದ. ಯುವತಿ ಆತನ ಪ್ರೀತಿಯನ್ನು ನಿರಾಕರಿಸಿದ್ದರಿಂದ ಹತಾಷೆಗೊಂಡು ಚಾಕು ಇರಿದು ಪರಾರಿಯಾಗಿದ್ದ. ಸ್ಥಳೀಯರು ತಕ್ಷಣವೇ ಯುವತಿಯನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದೊಯ್ಯಲಾಗಿತ್ತು. ಬಳಿಕ ಮಿಥುನ್‌ನನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ