ಆ್ಯಪ್ನಗರ

ನಾಪತ್ತೆಯಾಗಿದ್ದ ರೈತನ ಶವ ತುಂಗಾ ನದಿಯಲ್ಲಿ ಪತ್ತೆ

ತುಂಗಾ ನದಿಯ ಪ್ರವಾಹದಲ್ಲಿ ಬುಧವಾರ ಆಕಸ್ಮಿಕವಾಗಿ ಮುಳುಗಿದ್ದ ರೈತ ಹೊಳೆಹದ್ದಿನ ಎಚ್‌.ಟಿ.ಉಮೇಶ್‌ (52)ಶವ ಶನಿವಾರ ನದಿಯಲ್ಲಿ ಪತ್ತೆಯಾಗಿದೆ.

Vijaya Karnataka 1 Jul 2018, 5:00 am
ಶೃಂಗೇರಿ: ತುಂಗಾ ನದಿಯ ಪ್ರವಾಹದಲ್ಲಿ ಬುಧವಾರ ಆಕಸ್ಮಿಕವಾಗಿ ಮುಳುಗಿದ್ದ ರೈತ ಹೊಳೆಹದ್ದಿನ ಎಚ್‌.ಟಿ.ಉಮೇಶ್‌ (52)ಶವ ಶನಿವಾರ ನದಿಯಲ್ಲಿ ಪತ್ತೆಯಾಗಿದೆ.
Vijaya Karnataka Web a missing farmers body was found in tunga river
ನಾಪತ್ತೆಯಾಗಿದ್ದ ರೈತನ ಶವ ತುಂಗಾ ನದಿಯಲ್ಲಿ ಪತ್ತೆ


ಮರ್ಕಲ್‌ ಗ್ರಾ.ಪಂ.ಯ ಯಡದಳ್ಳಿ ಗ್ರಾಮದ ಮನೆಯ ಸಮೀಪ ತುಂಗಾ ನದಿಯಲ್ಲಿ ಉಮೇಶ್‌ ಮುಳುಗಿದ್ದರು. ಇವರಿಗೆ ಪತ್ನಿ, ಪುತ್ರ, ಪುತ್ರಿ ಇದ್ದಾರೆ.

ನಾಪತ್ತೆಯಾಗಿದ್ದ ಉಮೇಶ್‌ರ ಪತ್ತೆಗೆ ವ್ಯಾಪಕ ಶೋಧ ನಡೆಸಲಾಗಿತ್ತಾದರೂ, ಮೂರು ದಿನದ ನಂತರ ಶವ ಪತ್ತೆಯಾಗಿದೆ.

ತುಂಗಾ ನದಿಯ ಪ್ರವಾಹ ಇಳಿಮುಖವಾದರೂ ಶವ ಪತ್ತೆಯಾಗಿರಲಿಲ್ಲ. ಶವದ ಪತ್ತೆಗಾಗಿ ಎನ್‌ಡಿಆರ್‌ಅಫ್‌ನ 30 ಜನರ ತಂಡ ಹಾಗೂ ಗೃಹ ರಕ್ಷ ಕ ದಳದ ಸಿಬ್ಬಂದಿ ನದಿಯಲ್ಲಿ ಶೋಧ ಕೈಗೊಂಡಿದ್ದರು. ಎರಡು ದಿನದ ಶೋಧದ ನಂತರ ಶನಿವಾರ ಮಧ್ಯಾಹ್ನ ಹೊಳೆಹದ್ದಿನ ತೂಗು ಸೇತುವೆ ಸಮೀಪವೇ ಇವರ ಶವ ಪತ್ತೆಯಾಗಿದೆ. ಕೆಸರಿನಲ್ಲಿ ಹುದುಗಿದ್ದ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ