ಆ್ಯಪ್ನಗರ

ಕಾಣೆಯಾದ ಯುವಕ, ಗೆಳತಿಯೊಂದಿಗೆ ಲೂಧಿಯಾನದಲ್ಲಿ ಪತ್ತೆ

ತಾಲೂಕಿನ ಹರಿಹರಪುರ ಸಮೀಪದ ತುಂಗಾ ನದಿ ದಡದಲ್ಲಿ ಬೈಕ್‌ ನಿಲ್ಲಿಸಿ ಕಾಣೆಯಾಗಿದ್ದ ಕೇರಳದ ಯುವಕ ಸಂದೀಪ್‌ ಕೃಷ್ಣ ಲೂಧಿಯಾನದಲ್ಲಿ ತನ್ನ ಗೆಳತಿ ಅಶ್ವಿನಿ ಜತೆ ಪೊಲೀಸರ ಕೈಗೆ ಸಿಕ್ಕಿದ್ದಾನೆ.

Vijaya Karnataka 28 Dec 2018, 5:00 am
ಕೊಪ್ಪ (ಚಿಕ್ಕಮಗಳೂರು) : ತಾಲೂಕಿನ ಹರಿಹರಪುರ ಸಮೀಪದ ತುಂಗಾ ನದಿ ದಡದಲ್ಲಿ ಬೈಕ್‌ ನಿಲ್ಲಿಸಿ ಕಾಣೆಯಾಗಿದ್ದ ಕೇರಳದ ಯುವಕ ಸಂದೀಪ್‌ ಕೃಷ್ಣ ಲೂಧಿಯಾನದಲ್ಲಿ ತನ್ನ ಗೆಳತಿ ಅಶ್ವಿನಿ ಜತೆ ಪೊಲೀಸರ ಕೈಗೆ ಸಿಕ್ಕಿದ್ದಾನೆ.
Vijaya Karnataka Web CKM-27KPH4


ಕೇರಳದ ಕಲ್ಲಿಕೋಟೆ ಜಿಲ್ಲೆಯ ನಲ್ಲಾಳಂ ಠಾಣೆ ವ್ಯಾಪ್ತಿಗೆ ಸೇರಿದ್ದ ಸಂದೀಪ್‌ ನವೆಂಬರ್‌ 24ರಂದು ಚಿಕ್ಕಮಗಳೂರಿಗೆ ಬೈಕ್‌ನಲ್ಲಿ ಬಂದು ಮರುದಿನ ನಾಪತ್ತೆಯಾಗಿದ್ದ. ಈ ಕುರಿತು ಕೇರಳದ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಆದರೆ ಅದೆ ವ್ಯಕ್ತಿ ಬಾಳೆಹೊನ್ನೂರಿಗೆ ಬಂದು ಎಟಿಎಂ ನಿಂದ 7 ಸಾವಿರದ ಐನೂರು ರೂ. ತೆಗೆದು ಜಯಪುರದ ಮೂಲಕ ಹರಿಹರಪುರ ಸಮೀಪದ ತುಂಗಾ ನದಿ ಸೇತುವೆ ಬಳಿ ಬಂದು ಬೈಕ್‌ ನಿಲ್ಲಿಸಿ, ಬ್ಯಾಗ್‌ ಮತ್ತಿತರ ವಸ್ತು ಬಿಟ್ಟು ನಾಪತ್ತೆಯಾಗಿದ್ದರು.

ಪ್ರಕರಣವು ಸಾವು, ಆತ್ಮಹತ್ಯೆ ಅಥವಾ ಅಪಹರಣ ಆಗಿರಬಹುದು ಎಂಬುದಾಗಿ ಸಾರ್ವಜನಿಕರಲ್ಲಿ ಕುತೂಹಲ ಮೂಡಿಸಿತ್ತು. ಪೊಲೀಸರು ಹಗಲೂರಾತ್ರಿ ಹುಡುಕಾಟ ನಡೆಸಿದ್ದರು.

ಆದರೆ ಸಂದೀಪ್‌ ಶೃಂಗೇರಿ, ಮಂಗಳೂರು ಮುಖಾಂತರ ಮುಂಬಯಿಗೆ ತೆರಳಿದ್ದರು. ಅವರ ಗೆಳತಿ ಅಶ್ವಿನಿ ಡಿ.11ರಂದು ಕೇರಳದಲ್ಲಿ ಕಾಣೆಯಾಗಿದ್ದು, ಕೇರಳದ ಪೊಲೀಸರು, ಚಿಕ್ಕಮಗಳೂರು ಜಿಲ್ಲೆಯ ಪೊಲೀಸರ ಸಹಕಾರದೊಂದಿಗೆ ಅವರ ಮುಂಬಯಿಯಲ್ಲಿನ ಮನೆ ಪತ್ತೆಹಚ್ಚಿದ್ದರು. ಸುದ್ದಿ ತಿಳಿದ ಜೋಡಿ ಅಲ್ಲಿಂದ ಪಂಜಾಬ್‌ ರಾಜ್ಯದ ಲೂಧಿಯಾನಕ್ಕೆ ಪರಾರಿಯಾಗಿದ್ದರು. ಪೊಲೀಸರ ತಂಡ ಅಲ್ಲಿಗೂ ತೆರಳಿ ಯುವ ಜೋಡಿಯನ್ನು ಪತ್ತೆ ಹಚ್ಚಿ ಕೇರಳಕ್ಕೆ ಕರೆತಂದಿದ್ದಾರೆ.

ಎಸ್ಪಿ ಹರೀಶ್‌ ಪಾಂಡೆ ಮಾರ್ಗದರ್ಶನದಲ್ಲಿ ಕೊಪ್ಪ ಡಿವೈಎಸ್ಪಿ ಜಹಗೀರ್‌ ದಾರ್‌ ನೇತೃತ್ವದಲ್ಲಿ ನರಸಿಂಹರಾಜಪುರದ ಸಿಪಿಐ, ಹರಿಹರಪುರದ ಪಿಎಸ್‌ಐ ಮತ್ತು ಸಿಬ್ಬಂದಿ ಶ್ರಮವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ