ಆ್ಯಪ್ನಗರ

ಕೋಳಿ ಆಸೆಯಲ್ಲಿಬೋನಿಗೆ ಬಿತ್ತು ಚಿರತೆ

ಕೋಳಿ ಹಿಡಿದು ತಿನ್ನುವ ಆಸೆಯಿಂದ ಮುನ್ನುಗ್ಗಿದ ಚಿರತೆ ಅರಣ್ಯ ಇಲಾಖೆ ಇಟ್ಟಿದ್ದ ಬೋನಿನೊಳಗೆ ಸಿಕ್ಕಿಬಿದ್ದಿದ್ದು, ಭದ್ರಾ ಅಭಯಾರಣ್ಯಕ್ಕೆ ಬಿಡಲಾಗಿದೆ.

Vijaya Karnataka 16 Nov 2019, 5:00 am
ಚಿಕ್ಕಮಗಳೂರು : ಕೋಳಿ ಹಿಡಿದು ತಿನ್ನುವ ಆಸೆಯಿಂದ ಮುನ್ನುಗ್ಗಿದ ಚಿರತೆ ಅರಣ್ಯ ಇಲಾಖೆ ಇಟ್ಟಿದ್ದ ಬೋನಿನೊಳಗೆ ಸಿಕ್ಕಿಬಿದ್ದಿದ್ದು, ಭದ್ರಾ ಅಭಯಾರಣ್ಯಕ್ಕೆ ಬಿಡಲಾಗಿದೆ.
Vijaya Karnataka Web a sow cheetah for a chicken
ಕೋಳಿ ಆಸೆಯಲ್ಲಿಬೋನಿಗೆ ಬಿತ್ತು ಚಿರತೆ


ತಾಲೂಕಿನ ಮಲ್ಗಾರ್‌ ಗ್ರಾಮದಲ್ಲಿಪದೇಪದೆ ಕಾಣಿಸಿಕೊಳ್ಳುತ್ತಿದ್ದ ಚಿರತೆಯನ್ನು ಹಿಡಿಯಲು ಅರಣ್ಯ ಇಲಾಖೆ ಉಪಾಯ ಹೂಡಿತ್ತು. ಎರಡು ದಿನಗಳ ಹಿಂದಷ್ಟೇ ಕೋಳಿ ಹಿಡಿಯಲು ಬಂದಿದ್ದ ಚಿರತೆ, ಕೋಳಿ ಫಾರಂ ಮಾಲೀಕ ಚಂದ್ರೇಗೌಡ ಮೇಲೆ ದಾಳಿಯನ್ನೂ ಮಾಡಿತ್ತು. ಕಳೆದೊಂದು ವಾರದಿಂದ ಗ್ರಾಮದಲ್ಲಿಪದೇಪದೆ ಚಿರತೆ ಕಾಣಿಸಿಕೊಳ್ಳುತ್ತಿದ್ದ ಕಾರಣ, ಸೆರೆ ಹಿಡಿಯುವಂತೆ ಗ್ರಾಮಸ್ಥರು ಆಗ್ರಹಿಸಿದ್ದರು. ಬೋನಿನ ಒಳಗೆ ಕೋಳಿ ಇಟ್ಟು ಚಿರತೆ ಸೆರೆ ಹಿಡಿಯುವ ಉಪಾಯವನ್ನು ಅರಣ್ಯ ಇಲಾಖೆ ಮಾಡಿತ್ತು.

ಬೋನಿನ ಒಳಗೆ ಕೋಳಿ ಕಾಣಿಸುತ್ತಿದ್ದಂತೆ ಆಸೆಯಿಂದ ನುಗ್ಗಿದ ಚಿರತೆ ಬಂದಿಯಾಯಿತು. ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಚಿರತೆಯನ್ನು ಭದ್ರಾ ಅಭಯಾರಣ್ಯದಲ್ಲಿಬಿಟ್ಟರು. ಪಂಜರದೊಳಗೆ ಸಿಕ್ಕಿಬಿದ್ದ ಚಿರತೆ ಹಾರಿ ನೆಗೆದು ತನ್ನ ಆರ್ಭಟ ಪ್ರದರ್ಶಿಸಿತು. ಭದ್ರಾ ಅಭಯಾರಣ್ಯದಲ್ಲಿಪಂಜರದ ಬಾಗಿಲು ತೆರೆಯುತ್ತಿದ್ದಂತೆ ಚಂಗನೆ ನೆಗೆದು ಪೊದೆಯೊಳಗೆ ಕಣ್ಮರೆಯಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ