ಆ್ಯಪ್ನಗರ

ಶಿಕ್ಷಣ, ರಾಷ್ಟ್ರಪ್ರಜ್ಞೆಯಿಂದ ಸದೃಢ ಸಮಾಜ

ಶಿಕ್ಷಣದ ಅರಿವು ಮತ್ತು ರಾಷ್ಟ್ರಪ್ರಜ್ಞೆ ಯುವ ಪೀಳಿಗೆಯಲ್ಲಿ ಬೆಳೆದರೆ ಮಾತ್ರ ಸದೃಢ ಸಮಾಜ ನಿರ್ಮಾಣ ಸಾಧ್ಯ ಎಂದು ಸಾಹಿತಿ ಚಟ್ನಹಳ್ಳಿ ಮಹೇಶ್‌ ಅಭಿಪ್ರಾಯಪಟ್ಟರು.

Vijaya Karnataka 11 Jan 2019, 5:00 am
ಚಿಕ್ಕಮಗಳೂರು : ಶಿಕ್ಷಣದ ಅರಿವು ಮತ್ತು ರಾಷ್ಟ್ರಪ್ರಜ್ಞೆ ಯುವ ಪೀಳಿಗೆಯಲ್ಲಿ ಬೆಳೆದರೆ ಮಾತ್ರ ಸದೃಢ ಸಮಾಜ ನಿರ್ಮಾಣ ಸಾಧ್ಯ ಎಂದು ಸಾಹಿತಿ ಚಟ್ನಹಳ್ಳಿ ಮಹೇಶ್‌ ಅಭಿಪ್ರಾಯಪಟ್ಟರು.
Vijaya Karnataka Web CKM-10ARAGAP3


ನಗರದ ಹಳೆ ಉಪ್ಪಳ್ಳಿಯ ಜ್ಞಾನರಶ್ಮಿ ಪ್ರೌಢಶಾಲೆಯಲ್ಲಿ ಗುರುವಾರ ಮಾಧ್ಯಮ ಸಂಸ್ಕೃತಿ ಪ್ರತಿಷ್ಠಾನ ಸ್ವಾಮಿ ವಿವೇಕಾನಂದ ಜನ್ಮ ದಿನೋತ್ಸವ ಅಂಗವಾಗಿ ಆಯೋಜಿಸಿರುವ ವಿವೇಕ ಸಂಭ್ರಮ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ಯುವಶಕ್ತಿಗೆ ಗುರು ಇರಬೇಕು. ಅಧ್ಯಾತ್ಮ ಚಿಂತನೆ ಸಮುದಾಯವನ್ನು ಒಳ್ಳೆಯ ದಿಕ್ಕಿನಲ್ಲಿ ಮುನ್ನಡೆಸುತ್ತದೆ. ಜಾಗೃತ ಯುವಶಕ್ತಿಯಿಂದ ದೇಶದ ಪುನರುತ್ಥಾನ ಸಾಧ್ಯ ಎಂಬುದು ವಿವೇಕಾನಂದರ ನಂಬಿಕೆಯಾಗಿತ್ತು. ಪಾಶ್ಚಾತ್ಯರ ಕ್ರಿಯಾಶೀಲತೆಯೊಂದಿಗೆ ಅಧ್ಯಾತ್ಮ ಶಕ್ತಿ ಸೇರಬೇಕು. ಕ್ಷಾತ್ರ ತೇಜಸ್ಸು ಮತ್ತು ಉಕ್ಕಿನ ನರಗಳಿರುವ 10 ಯುವಕರನ್ನು ಕೊಟ್ಟರೆ ಭಾರತವನ್ನು ಜಗತ್ತಿನ ಗುರುವಿನ ಪಟ್ಟಕ್ಕೇರಿಸುವುದಾಗಿ ಆತ್ಮವಿಶ್ವಾಸದಿಂದ ಹೇಳಿದ್ದರು ಎಂದರು.

ಯುವಶಕ್ತಿಗೆ ಪ್ರಚಂಡ ಶಕ್ತಿ ಇದೆ. ಯೌವ್ವನದಲ್ಲೇ ಹಲವು ಅತ್ತುತ್ತಮ ಸಾಧನೆ ಮಾಡಿದ್ದಾರೆ. ಯುವಶಕ್ತಿಯೇ ದೇಶದ ನಿಜವಾದ ಸಾರ. ಅಂತಃಶಕ್ತಿಯನ್ನು ಉದ್ದೀಪನಗೊಳಿಸಬೇಕು. ಯುವಜನರಲ್ಲಿ ಕುತೂಹಲ, ಕಾಡುವಿಕೆ, ಆಧ್ಯಾತ್ಮಿಕ ಚಿಂತನೆ ಜತೆಗೆ ಸಾಮಾಜಿಕ ತುಡಿತ ಇರಬೇಕು ಎಂಬುದು ವಿವೇಕಾನಂದರ ಆಶಯವಾಗಿತ್ತು. ಕೇವಲ 39 ವರ್ಷದ ಬದುಕಿನಲ್ಲಿ ಭಾರತದ ಅಧ್ಯಾತ್ಮ ಶಕ್ತಿಯನ್ನು ಅರ್ಥ ಮಾಡಿಕೊಂಡು ಜಗತ್ತಿನ ಮುಂದೆ ತೆರೆದಿಟ್ಟಿದ್ದು ಅಭೂತಪೂರ್ವ ಎಂದು ಹೇಳಿದರು.

ಮಾಧ್ಯಮ ಸಂಸ್ಕೃತಿ ಪ್ರತಿಷ್ಠಾನದ ಅಧ್ಯಕ್ಷೆ ಗೌರಮ್ಮ ಬಸವೇಗೌಡ ವಿವೇಕ ಯುವ ಸಂಭ್ರಮ ಉದ್ಘಾಟಿಸಿ ಮಾತನಾಡಿ, ಸ್ವಾಮಿ ವಿವೇಕಾನಂದ ಯುವಶಕ್ತಿಯ ಪ್ರತೀಕ. ಅತಿ ಕಡಿಮೆ ಅವಧಿಯಲ್ಲಿ ಅವರ ಸಾಧನೆಗೆ ಜಗತ್ತು ತಲೆದೂಗಿದೆ. ಅವರ ಚಿಂತನಾಧಾರೆ, ಕರ್ತವ್ಯಶೀಲತೆ ಯುವಶಕ್ತಿಗೆ ಪ್ರೇರಣೆ ಎಂದರು.

ಜ್ಞಾನರಶ್ಮಿ ಶಿಕ್ಷಣ ಟ್ರಸ್ಟ್‌ ಕಾರ‍್ಯದರ್ಶಿ ನಂದಕುಮಾರ್‌ ಅಧ್ಯಕ್ಷತೆ ವಹಿಸಿದ್ದರು. ಮಾಧ್ಯಮ ಸಂಸ್ಕೃತಿ ಪ್ರತಿಷ್ಠಾನದ ಕಾರಾರ‍ಯಧ್ಯಕ್ಷ ಪ್ರಭುಲಿಂಗಶಾಸ್ತ್ರಿ ಮಾತನಾಡಿದರು. ಶಿಕ್ಷಕಿ ಶೈಲಜಾ ಸ್ವಾಗತಿಸಿ, ಮುಖ್ಯ ಶಿಕ್ಷಕಿ ಪಾಲಾಕ್ಷ ನಂದಕುಮಾರ್‌ ವಂದಿಸಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ