ಎಸ್.ಜಲಂದರ್,
ಕೊಪ್ಪ : ಅಪೌಷ್ಟಿಕತೆ ನಿವಾರಣೆಗೆ ಕಳೆದ ಒಂದು ವರ್ಷದ ಹಿಂದೆ ಅನುಷ್ಟಾನಗೊಂಡ ಮಾತೃ ಪೂರ್ಣ ಯೋಜನೆ ಪಟ್ಟಣ ಪ್ರದೇಶದಲ್ಲಿ ಉತ್ತಮ,ಗ್ರಾಮಿಣ ಭಾಗದಲ್ಲಿ ಹಿನ್ನಡೆ ಉಂಟಾಗಿದೆ.
ರಾಜ್ಯ ಸರಕಾರ ಮಾತೃಪೂರ್ಣ ಯೋಜನೆ ಜಾರಿಗೊಳಿಸಿ ಗಾಂಧಿ ಜಯಂತಿ ದಿನಕ್ಕೆ ಒಂದು ವರ್ಷ ಪೂರ್ಣಗೊಂಡಿದೆ. ಯೋಜನೆ ಹಲವು ಎಡರು ತೊಡರುಗಳನ್ನು ಎದುರಿಸಿದೆ. ಗರ್ಭಿಣಿ, ಬಾಣಂತಿಯರಿಗೆ ಮಧ್ಯಾಹ್ನದ ಊಟ ಪೂರೈಸುವ ಯೋಜನೆಗೆ ತಾಲೂಕಿನ ಪಟ್ಟಣ ಪ್ರದೇಶದಲ್ಲಿ ಉತ್ತಮ ಪ್ರತಿಕ್ರಿಯೆ ದೊರಕಿದೆ. ಗ್ರಾಮೀಣ ಭಾಗದಲ್ಲಿ ಮಹಿಳೆಯರು ದೂರ ಎನ್ನುವ ಕಾರಣದಿಂದಾಗಿ ಎಲ್ಲರೂ ಯೋಜನೆಯ ಸದುಪಯೋಗ ಪಡೆದುಕೊಂಡಿಲ್ಲ. ಗರ್ಭಿಣಿ ಮತ್ತು ಬಾಣಂತಿಯರಿಗೆ ಪ್ರತಿ ದಿನ ಅನ್ನ, ಸಾಂಬಾರ, 1 ಮೊಟ್ಟೆ, 200ಮೀ.ಲಿ.ಹಾಲು ಮತ್ತು ಮೊಟ್ಟೆ ತಿನ್ನದವರಿಗೆ ಮೊಳಕೆ ಕಾಳು, ಚಿಕ್ಕಿ ನೀಡುತ್ತಿದೆ.
ತಾಲೂಕಿನಲ್ಲಿ ಒಟ್ಟು 155 ಅಂಗನವಾಡಿ ಕೇಂದ್ರವಿದ್ದು, ಪ್ರಸ್ತುತ 324 ಫಲಾನುಭವಿ ಸೌಲಭ್ಯ ಪಡೆಯುತ್ತಿದ್ದಾರೆ.ಪಟ್ಟಣ ಪ್ರದೇಶದಲ್ಲಿ ಫಲಾನುಭವಿಗಳು ಅಂಗನವಾಡಿ ಕೇಂದ್ರಗಳಿಗೆ ತೆರಳು ಅನುಕೂಲ ಇರುವುರಿಂದ ಸಾಮಾನ್ಯವಾಗಿ ಬಹುತೇಕರು ಸೌಲಭ್ಯ ಪಡೆಯುತ್ತಿದ್ದಾರೆ.ಆದರೆ ಗ್ರಾಮೀಣ ಭಾಗದ ಚಿತ್ರಣ ಮಾತ್ರ ಇದಕ್ಕೆ ಭಿನ್ನ. ಮೇಣಸಿನ ಹಾಡ್ಯ,ಕಲ್ಲುಗುಡ್ಡೆಯಂತಹ ದುರ್ಗಮ ಸ್ಥಳದಲ್ಲಿ ಅಂಗನವಾಡಿ ಕೇಂದ್ರವು ಫಲಾನುಭವಿಯ ಮನೆಯಿಂದ ಬಹುದೂರದಲ್ಲಿರುತ್ತದೆ. ಮಳೆ, ಬಿಸಿಲು ಕಾಲದಲ್ಲಿ ಗರ್ಭಿಣಿ ಮತ್ತು ಬಾಣಂತಿಯರು ಕೇಂದ್ರಕ್ಕೆ ಬಂದು ಆಹಾರ ಸೇವಿಸುವುದು ಕಷ್ಟದ ಕೆಲಸವಾಗಿದೆ.
ಯೋಜನೆಯ ಬಯಲು ನಾಡಿಗೆ ಉತ್ತಮವಾಗಿದೆ, ಹೊರತು ಮಲೆನಾಡಿನ ಗ್ರಾಮೀಣ ಭಾಗದಲ್ಲಿ ಅಷ್ಟಾಗಿ ಯಶಸ್ಸು ಗಳಿಸಿಲ್ಲ. ಹಿಂದೆ ಗರ್ಭಿಣಿ ಮತ್ತು ಬಾಣಂತಿಯರಿಗೆ ಮನೆಗೆ ಪೌಷ್ಟಿಕ ಆಹಾರ ನೀಡಲಾಗುತ್ತಿತ್ತು. ಫಲಾನುಭವಿಯು ತಿಂಗಳಿಗೊಮ್ಮೆ ಕೇಂದ್ರಕ್ಕೆ ಬಂದು ಹೋದರೆ ಸಾಕಾಗುತ್ತಿತ್ತು. ಆದರೆ ಈಗ ಅವರು ಪ್ರತಿದಿನ ಕೇಂದ್ರಕ್ಕೆ ಬಂದು ಊಟ ಸ್ವೀಕರಿಸಬೇಕಿದೆ. ಅವರಲ್ಲಿ ಮೈಲುಗಟ್ಟಲೆ ನಡೆದೇ ಹೋಗಬೇಕಿರುವುದರಿಂದ ಹೆಚ್ಚಿನವರಿಗೆ ಯೋಜನೆ ತಲುಪಿಲ್ಲ.
-----------------------
ಯೋಜನೆಯ ಸೌಲಭ್ಯ ಅಂಗನವಾಡಿ ಶಿಕ್ಷ ಕಿಯರಿಗೆ ಮತ್ತು ಸಹಾಯಕಿಯರಿಗೆ ಹೆಚ್ಚಿನ ಹೊರೆಯಾಗಿದೆ. ಕೆಲವು ಕೇಂದ್ರದಲ್ಲಿ 15 ರಿಂದ 20 ಮಂದಿ ಗರ್ಭಿಣಿ, ಬಾಣಂತಿಯರು ಯೋಜನೆಯ ಲಾಭ ಪಡೆದುಕೊಳ್ಳುತ್ತಿದ್ದಾರೆ. ಸಿಬ್ಬಂದಿ, ಮಕ್ಕಳು ಸೇರಿ 50ಕ್ಕೂ ಹೆಚ್ಚು ಮಂದಿಗೆ ಊಟ ತಯಾರಿಸಬೇಕಾಗುತ್ತದೆ. ತರಕಾರಿಗೆ ಒಬ್ಬ ಗರ್ಭಿಣಿಗೆ 2 ರೂ. ಕೊಟ್ಟರೆ ಏನು ತರಕಾರಿ ತರಲು ಸಾಧ್ಯ? ಸ್ಥಳೀಯವಾಗಿ ಯಾರೂ ತರಕಾರಿ ಬೆಳೆಯುತ್ತಿಲ್ಲ. ತಾಲೂಕಿನಲ್ಲಿ ಚಿಕ್ಕಿಯನ್ನು ಅಂಗನವಾಡಿಯಲ್ಲಿ ತಯಾರಿಸಬೇಕು. ಇದನ್ನು ತಯಾರಿಸಲು ಸಿಬ್ಬಂದಿಗೆ ಬಹಳ ಕಷ್ಟವಾಗಿದೆ. ಅವರ ಕೈಗಳು ಸುಟ್ಟು ಹೋಗಿವೆ. ಬೇರೆ ಜಿಲ್ಲೆಯಲ್ಲಿ ನೀಡಿದಂತೆ ಇಲಾಖೆ ಸರಬರಾಜು ಮಾಡಿದರೆ ಒಳಿತು.
- ಐರಿನ್ ಡೇಸಾ, ಅಧ್ಯಕ್ಷ , ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘ, ಕೊಪ್ಪ ತಾಲೂಕು.
--------------
ಮಲೆನಾಡು ಭಾಗಕ್ಕೆ ಯೋಜನೆ ಸೂಕ್ತವಾಗಿಲ್ಲ. ಅಂಗನವಾಡಿ ಕೇಂದ್ರದಿಂದ ಬಹುದೂರದಲ್ಲಿರುವುದರಿಂದ ಸಾಧನೆ ಕಷ್ಟಕರವಾಗಿದೆ. ಯೋಜನೆಯನ್ನು ಮಾರ್ಪಾಡು ಮಾಡಬೇಕು. ತಿಂಗಳಿಗೊಮ್ಮೆ ಮನೆ ಮನೆಗೆ ಆಹಾರ ನೀಡಿದಲ್ಲಿ ಶೇ.100ರಷ್ಟು ಫಲಾನುಭವಿಗೆ ತಲುಪುತ್ತದೆ.
- ರೇಣುಕಾ ಕೆ.ವಿ., ಅಧ್ಯಕ್ಷೆ, ತಾಲೂಕು ಬಿಎಂಎಸ್ ಯೂನಿಯನ್, ಕೊಪ್ಪ.
----------------
ಕೊಪ್ಪ : ಅಪೌಷ್ಟಿಕತೆ ನಿವಾರಣೆಗೆ ಕಳೆದ ಒಂದು ವರ್ಷದ ಹಿಂದೆ ಅನುಷ್ಟಾನಗೊಂಡ ಮಾತೃ ಪೂರ್ಣ ಯೋಜನೆ ಪಟ್ಟಣ ಪ್ರದೇಶದಲ್ಲಿ ಉತ್ತಮ,ಗ್ರಾಮಿಣ ಭಾಗದಲ್ಲಿ ಹಿನ್ನಡೆ ಉಂಟಾಗಿದೆ.
ರಾಜ್ಯ ಸರಕಾರ ಮಾತೃಪೂರ್ಣ ಯೋಜನೆ ಜಾರಿಗೊಳಿಸಿ ಗಾಂಧಿ ಜಯಂತಿ ದಿನಕ್ಕೆ ಒಂದು ವರ್ಷ ಪೂರ್ಣಗೊಂಡಿದೆ. ಯೋಜನೆ ಹಲವು ಎಡರು ತೊಡರುಗಳನ್ನು ಎದುರಿಸಿದೆ. ಗರ್ಭಿಣಿ, ಬಾಣಂತಿಯರಿಗೆ ಮಧ್ಯಾಹ್ನದ ಊಟ ಪೂರೈಸುವ ಯೋಜನೆಗೆ ತಾಲೂಕಿನ ಪಟ್ಟಣ ಪ್ರದೇಶದಲ್ಲಿ ಉತ್ತಮ ಪ್ರತಿಕ್ರಿಯೆ ದೊರಕಿದೆ. ಗ್ರಾಮೀಣ ಭಾಗದಲ್ಲಿ ಮಹಿಳೆಯರು ದೂರ ಎನ್ನುವ ಕಾರಣದಿಂದಾಗಿ ಎಲ್ಲರೂ ಯೋಜನೆಯ ಸದುಪಯೋಗ ಪಡೆದುಕೊಂಡಿಲ್ಲ. ಗರ್ಭಿಣಿ ಮತ್ತು ಬಾಣಂತಿಯರಿಗೆ ಪ್ರತಿ ದಿನ ಅನ್ನ, ಸಾಂಬಾರ, 1 ಮೊಟ್ಟೆ, 200ಮೀ.ಲಿ.ಹಾಲು ಮತ್ತು ಮೊಟ್ಟೆ ತಿನ್ನದವರಿಗೆ ಮೊಳಕೆ ಕಾಳು, ಚಿಕ್ಕಿ ನೀಡುತ್ತಿದೆ.
ತಾಲೂಕಿನಲ್ಲಿ ಒಟ್ಟು 155 ಅಂಗನವಾಡಿ ಕೇಂದ್ರವಿದ್ದು, ಪ್ರಸ್ತುತ 324 ಫಲಾನುಭವಿ ಸೌಲಭ್ಯ ಪಡೆಯುತ್ತಿದ್ದಾರೆ.ಪಟ್ಟಣ ಪ್ರದೇಶದಲ್ಲಿ ಫಲಾನುಭವಿಗಳು ಅಂಗನವಾಡಿ ಕೇಂದ್ರಗಳಿಗೆ ತೆರಳು ಅನುಕೂಲ ಇರುವುರಿಂದ ಸಾಮಾನ್ಯವಾಗಿ ಬಹುತೇಕರು ಸೌಲಭ್ಯ ಪಡೆಯುತ್ತಿದ್ದಾರೆ.ಆದರೆ ಗ್ರಾಮೀಣ ಭಾಗದ ಚಿತ್ರಣ ಮಾತ್ರ ಇದಕ್ಕೆ ಭಿನ್ನ. ಮೇಣಸಿನ ಹಾಡ್ಯ,ಕಲ್ಲುಗುಡ್ಡೆಯಂತಹ ದುರ್ಗಮ ಸ್ಥಳದಲ್ಲಿ ಅಂಗನವಾಡಿ ಕೇಂದ್ರವು ಫಲಾನುಭವಿಯ ಮನೆಯಿಂದ ಬಹುದೂರದಲ್ಲಿರುತ್ತದೆ. ಮಳೆ, ಬಿಸಿಲು ಕಾಲದಲ್ಲಿ ಗರ್ಭಿಣಿ ಮತ್ತು ಬಾಣಂತಿಯರು ಕೇಂದ್ರಕ್ಕೆ ಬಂದು ಆಹಾರ ಸೇವಿಸುವುದು ಕಷ್ಟದ ಕೆಲಸವಾಗಿದೆ.
ಯೋಜನೆಯ ಬಯಲು ನಾಡಿಗೆ ಉತ್ತಮವಾಗಿದೆ, ಹೊರತು ಮಲೆನಾಡಿನ ಗ್ರಾಮೀಣ ಭಾಗದಲ್ಲಿ ಅಷ್ಟಾಗಿ ಯಶಸ್ಸು ಗಳಿಸಿಲ್ಲ. ಹಿಂದೆ ಗರ್ಭಿಣಿ ಮತ್ತು ಬಾಣಂತಿಯರಿಗೆ ಮನೆಗೆ ಪೌಷ್ಟಿಕ ಆಹಾರ ನೀಡಲಾಗುತ್ತಿತ್ತು. ಫಲಾನುಭವಿಯು ತಿಂಗಳಿಗೊಮ್ಮೆ ಕೇಂದ್ರಕ್ಕೆ ಬಂದು ಹೋದರೆ ಸಾಕಾಗುತ್ತಿತ್ತು. ಆದರೆ ಈಗ ಅವರು ಪ್ರತಿದಿನ ಕೇಂದ್ರಕ್ಕೆ ಬಂದು ಊಟ ಸ್ವೀಕರಿಸಬೇಕಿದೆ. ಅವರಲ್ಲಿ ಮೈಲುಗಟ್ಟಲೆ ನಡೆದೇ ಹೋಗಬೇಕಿರುವುದರಿಂದ ಹೆಚ್ಚಿನವರಿಗೆ ಯೋಜನೆ ತಲುಪಿಲ್ಲ.
-----------------------
ಯೋಜನೆಯ ಸೌಲಭ್ಯ ಅಂಗನವಾಡಿ ಶಿಕ್ಷ ಕಿಯರಿಗೆ ಮತ್ತು ಸಹಾಯಕಿಯರಿಗೆ ಹೆಚ್ಚಿನ ಹೊರೆಯಾಗಿದೆ. ಕೆಲವು ಕೇಂದ್ರದಲ್ಲಿ 15 ರಿಂದ 20 ಮಂದಿ ಗರ್ಭಿಣಿ, ಬಾಣಂತಿಯರು ಯೋಜನೆಯ ಲಾಭ ಪಡೆದುಕೊಳ್ಳುತ್ತಿದ್ದಾರೆ. ಸಿಬ್ಬಂದಿ, ಮಕ್ಕಳು ಸೇರಿ 50ಕ್ಕೂ ಹೆಚ್ಚು ಮಂದಿಗೆ ಊಟ ತಯಾರಿಸಬೇಕಾಗುತ್ತದೆ. ತರಕಾರಿಗೆ ಒಬ್ಬ ಗರ್ಭಿಣಿಗೆ 2 ರೂ. ಕೊಟ್ಟರೆ ಏನು ತರಕಾರಿ ತರಲು ಸಾಧ್ಯ? ಸ್ಥಳೀಯವಾಗಿ ಯಾರೂ ತರಕಾರಿ ಬೆಳೆಯುತ್ತಿಲ್ಲ. ತಾಲೂಕಿನಲ್ಲಿ ಚಿಕ್ಕಿಯನ್ನು ಅಂಗನವಾಡಿಯಲ್ಲಿ ತಯಾರಿಸಬೇಕು. ಇದನ್ನು ತಯಾರಿಸಲು ಸಿಬ್ಬಂದಿಗೆ ಬಹಳ ಕಷ್ಟವಾಗಿದೆ. ಅವರ ಕೈಗಳು ಸುಟ್ಟು ಹೋಗಿವೆ. ಬೇರೆ ಜಿಲ್ಲೆಯಲ್ಲಿ ನೀಡಿದಂತೆ ಇಲಾಖೆ ಸರಬರಾಜು ಮಾಡಿದರೆ ಒಳಿತು.
- ಐರಿನ್ ಡೇಸಾ, ಅಧ್ಯಕ್ಷ , ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘ, ಕೊಪ್ಪ ತಾಲೂಕು.
--------------
ಮಲೆನಾಡು ಭಾಗಕ್ಕೆ ಯೋಜನೆ ಸೂಕ್ತವಾಗಿಲ್ಲ. ಅಂಗನವಾಡಿ ಕೇಂದ್ರದಿಂದ ಬಹುದೂರದಲ್ಲಿರುವುದರಿಂದ ಸಾಧನೆ ಕಷ್ಟಕರವಾಗಿದೆ. ಯೋಜನೆಯನ್ನು ಮಾರ್ಪಾಡು ಮಾಡಬೇಕು. ತಿಂಗಳಿಗೊಮ್ಮೆ ಮನೆ ಮನೆಗೆ ಆಹಾರ ನೀಡಿದಲ್ಲಿ ಶೇ.100ರಷ್ಟು ಫಲಾನುಭವಿಗೆ ತಲುಪುತ್ತದೆ.
- ರೇಣುಕಾ ಕೆ.ವಿ., ಅಧ್ಯಕ್ಷೆ, ತಾಲೂಕು ಬಿಎಂಎಸ್ ಯೂನಿಯನ್, ಕೊಪ್ಪ.
----------------